'ಸಮಗ್ರ' ಲಾಕ್ ಡೌನ್ ತೆರವಿಗೆ ಆನಂದ್ ಮಹೀಂದ್ರಾ ಸಲಹೆ
ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು "ಸಮಗ್ರ"ವಾಗಿ 49 ದಿನಗಳಿಗೆ ಲಾಕ್ ಡೌನ್ ತೆರವು ಮಾಡುವಂತೆ ಸಲಹೆ ಮಾಡಿದ್ದಾರೆ. ದೇಶದ ನಾನಾ ಭಾಗಗಳಲ್ಲಿ ಹಂತಹಂತವಾಗಿ ತೆರವು ಮಾಡಿದರೆ ಕೈಗಾರಿಕೆಗಳು ಚೇತರಿಕೆ ಕಾಣುವುದು ಬಹಳ ತಡವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದರಿಂದ ಹೊರಬರುವುದಕ್ಕೆ ಯೋಜನೆ ರೂಪಿಸುವುದು ಸರ್ಕಾರದ ಪಾಲಿಗೆ ಸಂಕೀರ್ಣವಾದ ಸವಾಲು. ಹೇಗೆ ಆರ್ಥಿಕತೆಗೆ ಒಂದಕ್ಕೆ ಮತ್ತೊಂದು ಸಂಗತಿ ತಳುಕು ಹಾಕಿಕೊಂಡಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಇನ್ನು ಮುಂದೆ ಕೊರೊನಾ ಹಬ್ಬದಂತೆ ಪರೀಕ್ಷೆ ಅಗತ್ಯ ಇರುವಲ್ಲಿ ಮಾಡಬೇಕು, ಹಾಟ್ ಸ್ಪಾಟ್ ಗಳಲ್ಲಿ ಜನರನ್ನು ಪ್ರತ್ಯೇಕವಾಗಿ ಇರಿಸಬೇಕು. ದುರ್ಬಲ ಜನರನ್ನು ದೃಷ್ಟಿಯಲ್ಲಿ ಇರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಕೊರೊನಾ ವಿರುದ್ಧ ಹೋರಾಟಕ್ಕೆ ಎಡಿಬಿಯಿಂದ 11,400 ಕೋಟಿ ಮಂಜೂರು
ಸಂಶೋಧನೆಯ ಪ್ರಕಾರ 49 ದಿನಗಳ ಲಾಕ್ ಡೌನ್ ಸಾಕಾಗುತ್ತದೆ ಎಂಬ ಸಲಹೆ ನೀಡಿದೆ. ಒಂದು ವೇಳೆ ಅದು ನಿಜವಾಗಿದ್ದಲ್ಲಿ ಆ ಅವಧಿಯ ನಂತರ ಲಾಕ್ ಡೌನ್ ಅನ್ನು ಸಮಗ್ರವಾಗಿ ಮಾಡಬೇಕು ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಮಾರ್ಚ್ 25ರಿಂದ ಏಪ್ರಿಲ್ 14ರ ತನಕ ಇಪ್ಪತ್ತೊಂದು ದಿನಗಳ ಕಾಲ ಮೊದಲ ಹಂತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಲಾಕ್ ಡೌನ್ ಘೋಷಣೆ ಮಾಡಿದ್ದರು. ಆ ನಂತರ ಮೇ 3ನೇ ತಾರೀಕಿನ ತನಕ, ಅಂದರೆ 40 ದಿನಗಳವರೆಗೆ ವಿಸ್ತರಣೆ ಮಾಡಿದ್ದರು.