ಆಪಲ್ ಕಂಪೆನಿಯಿಂದ ಸೆಪ್ಟೆಂಬರ್ 8ನೇ ತಾರೀಕು ಪ್ರಮುಖ ಘೋಷಣೆ ಮಾಡುವ ಸಾಧ್ಯತೆ ಇದೆ. ಆಪಲ್ ವಾಚ್ ಸರಣಿ 6 ಅಥವಾ ಹೊಸ ಐಪ್ಯಾಡ್ ಬಗ್ಗೆ ಮಾಹಿತಿ ಬಿಡುಗಡೆ ಮಾಡಬಹುದು. ಇನ್ನು ಬ್ಲೂಮ್ ಬರ್ಗ್ ಪ್ರಕಾರ, ಐಫೋನ್ 12ರ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.
ಸೆಪ್ಟೆಂಬರ್ 8ನೇ ತಾರೀಕಿಗೆ ಬಿಡುಗಡೆ ಮಾಡಲು ಪತ್ರಿಕಾ ಹೇಳಿಕೆಯನ್ನು ಆಪಲ್ ಸಿದ್ಧ ಮಾಡಿಟ್ಟುಕೊಂಡಿದೆ ಎಂದು ಮೂಲಗಳು ತಿಳಿಸಿದ್ದು, ಅದರಲ್ಲಿ ಹೊಸ ಐಪ್ಯಾಡ್ ಮತ್ತು ಆಪಲ್ ವಾಚ್ ಸರಣಿ 6ರ ಮಾಹಿತಿಯೂ ಒಳಗೊಂಡಿರುತ್ತದೆ ಎಂಬುದನ್ನು ಹೇಳಲಾಗುತ್ತಿದೆ. ಆದರೆ ಯಾವ ಹೊಸ ಐಪ್ಯಾಡ್ ಎಂಬ ಕುರಿತು ಹೆಚ್ಚಿನ ವಿವರಗಳು ಇಲ್ಲ.
ಅಗ್ಗದ ಬೆಲೆ ಐಪ್ಯಾಡ್ ಅಥವಾ ಐಪ್ಯಾಡ್ ಏರ್ 4
ವದಂತಿಗಳ ಪ್ರಕಾರ, ಆಪಲ್ ನಿಂದ ಅಗ್ಗದ ಬೆಲೆ ಐಪ್ಯಾಡ್ ಅಥವಾ ಐಪ್ಯಾಡ್ ಏರ್ 4 ಅನ್ನು ಸೆಪ್ಟೆಂಬರ್ ನಲ್ಲಿ ಬಿಡುಗಡೆ ಮಾಡಬಹುದು. ಇನ್ನು ಐಪ್ಯಾಡ್ ಪ್ರೋ ಬಿಡುಗಡೆ ಬಗ್ಗೆ ಕೂಡ ಸುದ್ದಿ ಹರಿದಾಡುತ್ತಿದೆ. ಇನ್ನು ವಾಚ್ ಸರಣಿ 6ರ ಬಿಡುಗಡೆ ಬಗೆಗಿನ ವಿವರಕ್ಕೆ ಬಂದರೆ, ಈ ಹಿಂದಿನ ಸರಣಿಯ ವಾಚ್ ಮಾದರಿಯಲ್ಲೇ ಅದು ಇರಲಿದೆಯಂತೆ. ಆದರೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ, ನಿದ್ದೆಯ ಪ್ರಮಾಣ ಅಳೆಯುವ ಫೀಚರ್ ಹಾಗೂ ಸುಧಾರಿತ ಇಸಿಜಿ ಇನ್ನಿತರ ಫೀಚರ್ ಇರಲಿದೆ ಎಂಬ ಸುದ್ದಿ ಇದೆ.
ಆಪಲ್ ವಾಚ್/ ಐಫೋನ್ ಬಿಡುಗಡೆ
ಆದರೆ, ಬ್ಲೂಮ್ ಬರ್ಗ್ ಅಂದಾಜು ಮಾಡುವಂತೆ ಸೆಪ್ಟೆಂಬರ್ ನಲ್ಲಿ ಆಪಲ್ ವಾಚ್/ ಐಫೋನ್ ಬಿಡುಗಡೆ ಆಗಲಿದ್ದು, ಆ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಆಪಲ್ ಕಂಪೆನಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗುವುದು. ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಕ್ಕೆ ಎರಡು ವಾರಗಳ ಮುಂಚೆ ಆಪಲ್ ನಿಂದ ಘೋಷಣೆ ಮಾಡಲಾಗುತ್ತದೆ.
ಐಫೋನ್ 12ರ ಉತ್ಪಾದನೆ ತಡವಾಗಿದೆ
ಅದೇ ಲೆಕ್ಕದಲ್ಲಿ ಹೇಳುವುದಾದರೆ ಸೆಪ್ಟೆಂಬರ್ 8ರಂದು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದಲ್ಲಿ, ಕಾರ್ಯಕ್ರಮವು ಆನ್ ಲೈನ್ ನಲ್ಲಿ ಸೆಪ್ಟೆಂಬರ್ 22ನೇ ತಾರೀಕಿನಂದು ನಡೆಯಬಹುದು. ಹೊಸ ಐಫೋನ್ 12ರ ಉತ್ಪಾದನೆ ತಡವಾಗಿದೆಯಂತೆ. ಆದ್ದರಿಂದ ಈ ವರ್ಷ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications