ಮುಂಬೈ, ಜನವರಿ 23: ಉದ್ಯಮಿ ಅಶ್ನೀರ್ ಗ್ರೋವರ್ ಅವರು ಶನಿವಾರ ವಿವಾದದ ಕಿಡಿಯೊಂದನ್ನು ಹೊತ್ತಿಸಿದ್ದಾರೆ. ಅವರು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಸಾಮೂಹಿಕ ವಜಾಗೊಳಿಸುವಿಕೆಯ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ಸಂಸ್ಥೆಗಳಿಗೆ ಸಲಹೆ ನೀಡಿರುವ ಗ್ರೋವರ್ ಅವರು, ಕೆಲವೊಂದು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಸಾಮೂಹಿಕ ವಜಾಗೊಳಿಸುವಿಕೆಯ ಬದಲು, ಟೆಕ್ ಉದ್ಯೋಗಿಗಳ ಶೇ 25 ರಿಂದ ಶೇ 40 ರಷ್ಟು ಸಂಬಳವನ್ನು ಕಡಿಮೆ ಮಾಡುವ ಮೂಲಕ ವೆಚ್ಚವನ್ನು ಕಡಿತಗೊಳಿಸಬಹುದು ಎಂದು ಅಶ್ನೀರ್ ಗ್ರೋವರ್ ಸಲಹೆ ನೀಡಿದ್ದಾರೆ.
ತಮ್ಮ ಲಿಂಕ್ಡ್ಇನ್ ಪೋಸ್ಟ್ನಲ್ಲಿ, ಗ್ರೋವರ್ ನಿಜವಾದ ಸಂಬಳ ಹಾಗೂ ಪಾವತಿಸುವ ಸಂಬಳದ ಪರಿಕಲ್ಪನೆಯನ್ನು ವಿವರಿಸಿದ್ದಾರೆ. '2021 ರಲ್ಲಿ, ಈ ಉದ್ಯೋಗಿಗಳ ನಿಜವಾದ ಸಂಬಳವು ಪಾವತಿಸುವ ಸಂಬಳಕ್ಕಿಂತ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ 2022 ರಲ್ಲಿ ನೌಕರರು ಉದ್ಯೋಗವನ್ನು ಹುಡುಕಲು ಹೊರಟರು. ಆಗ ಅವರು ಪಡೆಯುತ್ತಿದ್ದ ಸಂಬಳಕ್ಕಿಂತ ಕಡಿಮೆ ಸಂಬಳವನ್ನು ಆಫರ್ ಮಾಡಲಾಗಿದೆ' ಎಂದು ವಿವರಿಸಿದ್ದಾರೆ.

'2021 ರಲ್ಲಿ, ನಿಮ್ಮ ಉದ್ಯೋಗಿಗಳ ನಿಜವಾದ ಸಂಬಳ (ಮಾರುಕಟ್ಟೆಯಲ್ಲಿ ಸ್ಪಷ್ಟವಾಗಿದೆ) ನೀವು ಪಾವತಿಸುವ ಸಂಬಳಕ್ಕಿಂತ ಹೆಚ್ಚಾಗಿತ್ತು. 2022 ರಲ್ಲಿ ನೀವು ಅವರನ್ನು ಹೋಗಲು ಬಿಟ್ಟರೆ ಜನರು ಉದ್ಯೋಗಗಳನ್ನು ಕಂಡುಕೊಳ್ಳುವ ನಿಜವಾದ ಸಂಬಳ (ಒಂದು ವೇಳೆ) ನೀವು ಪಾವತಿಸುತ್ತಿರುವ ಸಂಬಳಕ್ಕಿಂತ ಕಡಿಮೆಯಾಗಿದೆ. ಆದ್ದರಿಂದ ನಿಮಗೆ ಜನರು ಮರಳಿ ಬೇಕು ಎಂದು ನಿಮಗೆ ಅನ್ನಿಸಿದರೆ, ಸಾಮೂಹಿಕ ವಜಾ ಮಾಡುವ ಬದಲು ಶೇ 25 ರಿಂದ ಶೇ 45 ವೇತನವನ್ನು ಕಡಿಮೆ ಮಾಡಿ. ಇದು ಉತ್ತಮ ಪರಿಹಾರವನ್ನು ಉಂಟು ಮಾಡಲಿದೆ' ಎಂದು ಅವರು ಬರೆದುಕೊಂಡಿದ್ದಾರೆ.
ಲಿಂಕ್ಡ್ಇನ್ ಬಳಕೆದಾರರು ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಕ್ರಮವು ಸಮರ್ಥನೀಯವಲ್ಲ ಮತ್ತು ಉನ್ನತ ಕಾರ್ಯನಿರ್ವಾಹಕರು/CXO ಗಳು ಪಡೆಯುವ ಸಂಬಳವನ್ನು ಪ್ರಶ್ನಿಸಿದ್ದಾರೆ.
'ನಾನು ಇದನ್ನು ಸಮರ್ಥನೀಯ ಪರಿಹಾರವಾಗಿ ನೋಡುತ್ತಿಲ್ಲ. ವಜಾಗೊಳಿಸಿದ ನಂತರವಷ್ಟೇ, ಜನರು ಕೆಲಸವನ್ನು ಹುಡುಕಲು ಪ್ರಾರಂಭಿಸುತ್ತಾರೆ. ಎಲ್ಲರೂ ಕೆಲಸ ಬಿಟ್ಟು ಹೋಗುವುದಿಲ್ಲ. ಇದರಿಂದ ಕೆಲವು ಉತ್ತಮ ಪ್ರತಿಭೆಗಳು ಕಣ್ಮರೆಯಾಗುತ್ತಾರೆ. ಯಾರು ಉಳಿಯುತ್ತಾರೋ, ಅವರ ಮೇಲೆ ಪ್ರೇರಣೆಯು ಪರಿಣಾಮ ಬೀರುತ್ತದೆ. ಇಡೀ ಕಾರ್ಯಪಡೆಯ ಕಾರ್ಯಕ್ಷಮತೆಯ ಮೇಲೆ ಇದು ಅಪಾಯ ಬೀರಲಿದೆ. ನಿಮ್ಮ ಕಲ್ಪನೆಗೆ ಪೂರಕವಾಗಿ ನಾನು ಯೋಚಿಸಬಹುದಾದ ಏಕೈಕ ವಿಷಯವೆಂದರೆ; ಕಂಪನಿಯು ಮಾಹಿತಿಗಳನ್ನು ಪಾರದರ್ಶಕತೆ ಮತ್ತು ಭರವಸೆಯೊಂದಿಗೆ ಉದ್ಯೋಗಿಗಳ ಜೊತೆಗೆ ಹಂಚಿಕೊಳ್ಳಬೇಕು' ಎಂದರು.

'ಅಶ್ನೀರ್ ಗ್ರೋವರ್ ಅವರು ಟೆಕ್ ವೇತನಗಳನ್ನು ಶೇ 25 ರಿಂದ ಶೇ 25 ರಷ್ಟು ಕಡಿತಗೊಳಿಸಲು ಶಿಫಾರಸು ಮಾಡಿದ್ದಾರೆ. ಉನ್ನತ ಕಾರ್ಯನಿರ್ವಾಹಕರು/CXO ಗಳ ಸಂಬಳದ ಬಗ್ಗೆ ನಿಮ್ಮ ಆಲೋಚನೆ ಏನು?,' ಎಂದು ಇನ್ನೊಬ್ಬರು ಹೇಳಿದ್ದಾರೆ.
ಅಂತಹ ಸಂದರ್ಭಗಳು ಉದ್ಭವಿಸದಂತೆ ಕಂಪನಿಗಳು ಉತ್ತಮ ನೇಮಕಾತಿಯನ್ನು ಮಾಡಬೇಕು ಎಂದು ಇತರರು ಹೇಳಿದ್ದಾರೆ.
'ಸಂಬಳವನ್ನು ಕಡಿತಗೊಳಿಸುವುದು ಒಂದು ಆಯ್ಕೆಯಲ್ಲ. ನಾನು ಉತ್ತಮ ಬ್ರ್ಯಾಂಡ್ ಮತ್ತು ಉತ್ತಮ ಸಂಬಳಕ್ಕಾಗಿ ನನ್ನ ಹಿಂದಿನ ಕೆಲಸವನ್ನು ತೊರೆಯುತ್ತೇನೆ. ನನ್ನ ಹೊಸ ಉದ್ಯೋಗದಾತರು ನನ್ನ ಸಂಬಳವನ್ನು ಶೇ 25 ರಿಂದ ಶೇ 40 ರಷ್ಟು ಕಡಿತಗೊಳಿಸಿದರೆ, ವೃತ್ತಿಜೀವನದಲ್ಲಿ ಬೆಳೆಯುವ ಬದಲು, ನಾನು ನಿಜವಾಗಿಯೂ ಕೆಳಗೆ ಬರುತ್ತೇನೆ' ಎಂದೂ ಹೇಳಿದ್ದಾರೆ
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications