Vande Bharat: ಬೆಂಗಳೂರು-ಕಲಬುರ್ಗಿ ವಂದೇ ಭಾರತ್‌ ರೈಲಿನ ಸಂಚಾರ ಬದಲಾವಣೆ! ಮಹತ್ವದ ಕ್ರಮ ಕೈಗೊಂಡ ರೈಲ್ವೇ ಇಲಾಖೆ

ವಂದೇ ಭಾರತ್‌ ರೈಲು (Vande Bharat Train) ದೇಶದ ಪ್ರಮುಖ ರೈಲು ಸೇವೆಗಳಲ್ಲಿ ಒಂದು. ವೇಗದ ಪ್ರಯಾಣ, ಉತ್ತಮ ಸೌಲಭ್ಯದಿಂದಾಗಿ ವಂದೇ ಭಾರತ್‌ ರೈಲು ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಂದೇ ಭಾರತ್‌ ರೈಲು, ಇದೀಗ ಹೊಸ ಕ್ರಮವನ್ನು ಕೈಗೊಂಡಿದೆ. ಭಾರತೀಯ ರೈಲ್ವೇಯು ಕಲಬುರಗಿ-ಎಸ್.ಎಂ.ವಿ.ಟಿ. ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪರಿಷ್ಕೃತ ವೇಳಾಪಟ್ಟಿಯನ್ನು ಜನವರಿ 1 ರಿಂದ ಜಾರಿಗೆ ತರಲಿದೆ. ಮಾರ್ಚ್ 12, 2024 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದ ಈ ವೇಗದ ರೈಲನ್ನು ನೈಋತ್ಯ ರೈಲ್ವೇ (SWR) ವಲಯವು ಸದ್ಯ ನಿರ್ವಹಿಸುತ್ತದೆ.

ಬೆಂಗಳೂರು-ಕಲಬುರ್ಗಿ ವಂದೇ ಭಾರತ್‌ ರೈಲಿನ ಸಂಚಾರ ಬದಲಾವಣೆ!

ಕಲಬುರಗಿ ಟು ಬೆಂಗಳೂರು ರೈಲುಗಳು:
ರೈಲು ಸಂಖ್ಯೆ 22231 ಕಲಬುರಗಿ-ಎಸ್.ಎಂ.ವಿ.ಟಿ. ಬೆಂಗಳೂರು ವಂದೇ ಭಾರತ್ ಶುಕ್ರವಾರ ಹೊರತುಪಡಿಸಿ, ರೈಲು ಸಂಖ್ಯೆ 22232 ಎಸ್.ಎಂ.ವಿ.ಟಿ. ಬೆಂಗಳೂರು-ಕಲಬುರಗಿ ವಂದೇ ಭಾರತ್ ಗುರುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಸಂಚಾರ ಮಾಡುತ್ತದೆ. ಈ ರೈಲು 550 ಕಿಲೋಮೀಟರ್ ದೂರವನ್ನು 8 ಗಂಟೆ 45 ನಿಮಿಷಗಳಲ್ಲಿ ತಲುಪಲಿದೆ.

ಎಲ್ಲೆಲ್ಲಿ ನಿಲ್ದಾಣ ಹೊಂದಿದೆ?
ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಮೊದಲು ಯಾದಗಿರಿ, ರಾಯಚೂರು, ಮಂತ್ರಾಲಯಂ ರೋಡ್, ಗೂಂತಕಲ್, ಅನಂತಪುರ ಮತ್ತು ಯಲಹಂಕ ಜಂಕ್ಷನ್‌ನಲ್ಲಿ ನಿಲುಗಡೆ ಹೊಂದಿದೆ. ಇದೀಗ ರೈಲ್ವೆ ಮಂಡಳಿಯು 22231/22232 ರೈಲಿನ ಮಾರ್ಗವನ್ನು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮೂಲಕ ಸಂಚರಿಸಲು ಅನುಮತಿ ನೀಡಿದೆ.

ಈ ಬದಲಾವಣೆಯಿಂದಾಗಿ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂನಲ್ಲಿ ಹೊಸ ನಿಲುಗಡೆ ಹೊಂದಲಿದೆ. ಅಲ್ಲದೇ ಇದರಿಂದ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಕಲಬುರಗಿಯಿಂದ ಹೊರಡುವ ರೈಲುಗಳಿಗೆ ಜನವರಿ 1, 2026ರಿಂದ ಹಾಗೂ ಬೆಂಗಳೂರಿನಿಂದ ಹೊರಡುವ ರೈಲುಗಳಿಗೆ ಜನವರಿ 2, 2026ರಿಂದ ಈ ಹೆಚ್ಚುವರಿ ನಿಲುಗಡೆ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಹೊಸ ವೇಳಾಪಟ್ಟಿ ಹೇಗಿದೆ?
ಜನವರಿ 1 ರಿಂದ ಜಾರಿಗೆ ಬರುವ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, 22231 ಕಲಬುರಗಿ-ಎಸ್.ಎಂ.ವಿ.ಟಿ. ಬೆಂಗಳೂರು ವಂದೇ ಭಾರತ್ ರೈಲು ಬೆಳಗ್ಗೆ 06:10ಕ್ಕೆ ಕಲಬುರಗಿಯಿಂದ ಹೊರಡಲಿದೆ (ಹಿಂದಿನ ನಿರ್ಗಮನ ಸಮಯ 05:15).

ಇದರ ನಿಲುಗಡೆ ಸ್ಥಳಗಳು: ಯಾದಗಿರಿ (06:48/06:50), ರಾಯಚೂರು (07:38/07:40), ಮಂತ್ರಾಲಯಂ ರೋಡ್ (07:58/08:00), ಗೂಂತಕಲ್ (09:00/09:05), ಅನಂತಪುರ (10:03/10:05).

ಹೊಸ ನಿಲುಗಡೆಯಾಗಿ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂನಲ್ಲಿ 11:00/11:02ಕ್ಕೆ ಆಗಮಿಸಿ/ನಂತರ ಹೊರಡಲಿದೆ. ಆ ನಂತರ ಯಲಹಂಕ (12:28/12:30) ತಲುಪಿ, ಅಂತಿಮವಾಗಿ ಮಧ್ಯಾಹ್ನ 14:10ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಅನ್ನುಉ ತಲುಪುತ್ತದೆ.

ರೈಲು ಸಂಖ್ಯೆ 22232 ಎಸ್.ಎಂ.ವಿ.ಟಿ. ಬೆಂಗಳೂರು-ಕಲಬುರಗಿ ವಂದೇ ಭಾರತ್ ಮಧ್ಯಾಹ್ನ 02:40ಕ್ಕೆ ಬೆಂಗಳೂರಿನಿಂದ ಹೊರಡಲಿದೆ.

ಇದರ ನಿಲುಗಡೆಗಳು ಸ್ಥಳಗಳು: ಯಲಹಂಕ (03:05/03:07), ಹೊಸ ನಿಲುಗಡೆಯಾಗಿ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ (04:23/04:25), ಅನಂತಪುರ (17:33/17:35), ಗೂಂತಕಲ್ (06:37/06:42).

ಮಂತ್ರಾಲಯಂ ರೋಡ್ (07:48/07:50), ರಾಯಚೂರು (08:18/08:20), ಯಾದಗಿರಿ (09:03/09:05) ನಿಲುಗಡೆಗಳ ನಂತರ, ರೈಲು ರಾತ್ರಿ 10:45ಕ್ಕೆ ಕಲಬುರಗಿ ತಲುಪುತ್ತದೆ. (ಹಿಂದಿನ 11:30ಕ್ಕೆ ಬದಲಾಗಿ).

ಎಸ್.ಎಂ.ವಿ.ಟಿ. ಬೆಂಗಳೂರು ಮತ್ತು ಕಲಬುರಗಿ ನಡುವಿನ ಪ್ರಯಾಣಕ್ಕೆ ಎಸಿ ಚೇರ್ ಕಾರ್‌ಗೆ ₹1475 ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್‌ಗೆ ₹2710 ಟಿಕೆಟ್ ದರ ಇರುತ್ತದೆ ಎಂದು ಹೇಳಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+