ವಂದೇ ಭಾರತ್ ರೈಲು (Vande Bharat Train) ದೇಶದ ಪ್ರಮುಖ ರೈಲು ಸೇವೆಗಳಲ್ಲಿ ಒಂದು. ವೇಗದ ಪ್ರಯಾಣ, ಉತ್ತಮ ಸೌಲಭ್ಯದಿಂದಾಗಿ ವಂದೇ ಭಾರತ್ ರೈಲು ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಂದೇ ಭಾರತ್ ರೈಲು, ಇದೀಗ ಹೊಸ ಕ್ರಮವನ್ನು ಕೈಗೊಂಡಿದೆ. ಭಾರತೀಯ ರೈಲ್ವೇಯು ಕಲಬುರಗಿ-ಎಸ್.ಎಂ.ವಿ.ಟಿ. ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪರಿಷ್ಕೃತ ವೇಳಾಪಟ್ಟಿಯನ್ನು ಜನವರಿ 1 ರಿಂದ ಜಾರಿಗೆ ತರಲಿದೆ. ಮಾರ್ಚ್ 12, 2024 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದ ಈ ವೇಗದ ರೈಲನ್ನು ನೈಋತ್ಯ ರೈಲ್ವೇ (SWR) ವಲಯವು ಸದ್ಯ ನಿರ್ವಹಿಸುತ್ತದೆ.

ಕಲಬುರಗಿ ಟು ಬೆಂಗಳೂರು ರೈಲುಗಳು:
ರೈಲು ಸಂಖ್ಯೆ 22231 ಕಲಬುರಗಿ-ಎಸ್.ಎಂ.ವಿ.ಟಿ. ಬೆಂಗಳೂರು ವಂದೇ ಭಾರತ್ ಶುಕ್ರವಾರ ಹೊರತುಪಡಿಸಿ, ರೈಲು ಸಂಖ್ಯೆ 22232 ಎಸ್.ಎಂ.ವಿ.ಟಿ. ಬೆಂಗಳೂರು-ಕಲಬುರಗಿ ವಂದೇ ಭಾರತ್ ಗುರುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಸಂಚಾರ ಮಾಡುತ್ತದೆ. ಈ ರೈಲು 550 ಕಿಲೋಮೀಟರ್ ದೂರವನ್ನು 8 ಗಂಟೆ 45 ನಿಮಿಷಗಳಲ್ಲಿ ತಲುಪಲಿದೆ.
ಎಲ್ಲೆಲ್ಲಿ ನಿಲ್ದಾಣ ಹೊಂದಿದೆ?
ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಮೊದಲು ಯಾದಗಿರಿ, ರಾಯಚೂರು, ಮಂತ್ರಾಲಯಂ ರೋಡ್, ಗೂಂತಕಲ್, ಅನಂತಪುರ ಮತ್ತು ಯಲಹಂಕ ಜಂಕ್ಷನ್ನಲ್ಲಿ ನಿಲುಗಡೆ ಹೊಂದಿದೆ. ಇದೀಗ ರೈಲ್ವೆ ಮಂಡಳಿಯು 22231/22232 ರೈಲಿನ ಮಾರ್ಗವನ್ನು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮೂಲಕ ಸಂಚರಿಸಲು ಅನುಮತಿ ನೀಡಿದೆ.
ಈ ಬದಲಾವಣೆಯಿಂದಾಗಿ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂನಲ್ಲಿ ಹೊಸ ನಿಲುಗಡೆ ಹೊಂದಲಿದೆ. ಅಲ್ಲದೇ ಇದರಿಂದ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಕಲಬುರಗಿಯಿಂದ ಹೊರಡುವ ರೈಲುಗಳಿಗೆ ಜನವರಿ 1, 2026ರಿಂದ ಹಾಗೂ ಬೆಂಗಳೂರಿನಿಂದ ಹೊರಡುವ ರೈಲುಗಳಿಗೆ ಜನವರಿ 2, 2026ರಿಂದ ಈ ಹೆಚ್ಚುವರಿ ನಿಲುಗಡೆ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.
ಹೊಸ ವೇಳಾಪಟ್ಟಿ ಹೇಗಿದೆ?
ಜನವರಿ 1 ರಿಂದ ಜಾರಿಗೆ ಬರುವ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, 22231 ಕಲಬುರಗಿ-ಎಸ್.ಎಂ.ವಿ.ಟಿ. ಬೆಂಗಳೂರು ವಂದೇ ಭಾರತ್ ರೈಲು ಬೆಳಗ್ಗೆ 06:10ಕ್ಕೆ ಕಲಬುರಗಿಯಿಂದ ಹೊರಡಲಿದೆ (ಹಿಂದಿನ ನಿರ್ಗಮನ ಸಮಯ 05:15).
ಇದರ ನಿಲುಗಡೆ ಸ್ಥಳಗಳು: ಯಾದಗಿರಿ (06:48/06:50), ರಾಯಚೂರು (07:38/07:40), ಮಂತ್ರಾಲಯಂ ರೋಡ್ (07:58/08:00), ಗೂಂತಕಲ್ (09:00/09:05), ಅನಂತಪುರ (10:03/10:05).
ಹೊಸ ನಿಲುಗಡೆಯಾಗಿ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂನಲ್ಲಿ 11:00/11:02ಕ್ಕೆ ಆಗಮಿಸಿ/ನಂತರ ಹೊರಡಲಿದೆ. ಆ ನಂತರ ಯಲಹಂಕ (12:28/12:30) ತಲುಪಿ, ಅಂತಿಮವಾಗಿ ಮಧ್ಯಾಹ್ನ 14:10ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಅನ್ನುಉ ತಲುಪುತ್ತದೆ.
ರೈಲು ಸಂಖ್ಯೆ 22232 ಎಸ್.ಎಂ.ವಿ.ಟಿ. ಬೆಂಗಳೂರು-ಕಲಬುರಗಿ ವಂದೇ ಭಾರತ್ ಮಧ್ಯಾಹ್ನ 02:40ಕ್ಕೆ ಬೆಂಗಳೂರಿನಿಂದ ಹೊರಡಲಿದೆ.
ಇದರ ನಿಲುಗಡೆಗಳು ಸ್ಥಳಗಳು: ಯಲಹಂಕ (03:05/03:07), ಹೊಸ ನಿಲುಗಡೆಯಾಗಿ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ (04:23/04:25), ಅನಂತಪುರ (17:33/17:35), ಗೂಂತಕಲ್ (06:37/06:42).
ಮಂತ್ರಾಲಯಂ ರೋಡ್ (07:48/07:50), ರಾಯಚೂರು (08:18/08:20), ಯಾದಗಿರಿ (09:03/09:05) ನಿಲುಗಡೆಗಳ ನಂತರ, ರೈಲು ರಾತ್ರಿ 10:45ಕ್ಕೆ ಕಲಬುರಗಿ ತಲುಪುತ್ತದೆ. (ಹಿಂದಿನ 11:30ಕ್ಕೆ ಬದಲಾಗಿ).
ಎಸ್.ಎಂ.ವಿ.ಟಿ. ಬೆಂಗಳೂರು ಮತ್ತು ಕಲಬುರಗಿ ನಡುವಿನ ಪ್ರಯಾಣಕ್ಕೆ ಎಸಿ ಚೇರ್ ಕಾರ್ಗೆ ₹1475 ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್ಗೆ ₹2710 ಟಿಕೆಟ್ ದರ ಇರುತ್ತದೆ ಎಂದು ಹೇಳಲಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Highway: ರಾಜ್ಯದ ಈ ಭಾಗಕ್ಕೆ ಹೈವೇ ಡಿಮ್ಯಾಂಡ್…ಕೇಂದ್ರಕ್ಕೆ ಮನವಿ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್!

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications