ಯಾರೇ ಆಗಲಿ ಹಣ ಹೂಡಿಕೆ ಮಾಡಲು ಸೂಕ್ತ ಜಾಗ ಯಾವುದು ಎಂದು ಕೇಳಿದ್ರೆ ಮೊದಲು ಹೇಳೋದೇ ಯಾವುದಾದ್ರೂ ಬ್ಯಾಂಕ್ ಹೆಸರು. ಆದ್ರೆ ಇಂದಿನ ದಿನಗಳಲ್ಲಿ ಕೆಲವು ಬ್ಯಾಂಕ್ ಗಳು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದೆ. ಅದೇ ಪರಿಣಾಮ ಇದೀಗ ಇಲ್ಲೊಂದು ಬ್ಯಾಂಕ್ ಆರ್ಬಿಐನ ಕೆಂಗಣ್ಣಿಗೆ ಗುರಿಯಾಗಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಜಿಜಮಾತಾ ಮಹಿಳಾ ಸಹಕಾರಿ ಬ್ಯಾಂಕ್ ಸ್ಥಗಿತವಾಗಿದೆ. ಇನ್ನು ಮಂಗಳವಾರ ಭಾರತೀಯ ರಿಸರ್ವ್ ಬ್ಯಾಂಕ್ (RBI) ಆ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

RBI ನಿಂದ ಮಹತ್ವದ ನಿರ್ಧಾರ
ಇನ್ನು ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಈ ಜಿಜಮಾತಾ ಮಹಿಳಾ ಸಹಕಾರಿ ಬ್ಯಾಂಕ್ ಆರ್ಥಿಕವಾಗಿ ಕುಸಿತ ಕಂಡಿದೆ. ಇದೇ ಕಾರಣದಿಂದ ಆರ್ಬಿಐ ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಇನ್ನು ಆರ್ಬಿಐ ಆದೇಶದ ಪ್ರಕಾರ, ಅಕ್ಟೋಬರ್ 7, 2025 ರಿಂದ ಈ ಪರವಾನಗಿ ರದ್ದು ಮಡಿದ ಬ್ಯಾಂಕ್ ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ಅಥವಾ ಗ್ರಾಹಕರು ಈ ಬ್ಯಾಂಕಿನ ಜೊತೆಗೆ ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲ.
ಮೊದಲೇ ಎಚ್ಚರಿಕೆ ನೀಡಿತ್ತು RBI!
ಆರ್ಬಿಐ ಈ ಬ್ಯಾಂಕಿಗೆ ಮೊದಲೇ ಪರವಾನಗಿ ರದ್ದು ಮಾಡಿ ಬಿಸಿ ಮುಟ್ಟಿಸಿತ್ತು. ಕಳೆದ 2016 ಜೂನ್ 16 ರಂದು ಇದೇ ಜಿಜಮಾತಾ ಮಹಿಳಾ ಸಹಕಾರಿ ಬ್ಯಾಂಕಿನ ಲೈಸೆನ್ಸ್ ಅನ್ನು ಆರ್ಬಿಐ ರದ್ದು ಗೊಳಿಸಿತ್ತು. ಆದ್ರೆ ಎಚ್ಛೆತ್ತುಕೊಂಡ ಬ್ಯಾಂಕ್ ತಕ್ಷಣ ಪರವಾನಗಿ ರದ್ದುಪಡಿಸದಂತೆ, ವಾಪಾಸ್ ನೀಡುವಂತೆ, ಆರ್ಬಿಐ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ಅದೇ ರೀತಿ ಅಕ್ಟೋಬರ್ 23, 2019 ರಂದು, ಮೇಲ್ಮನವಿ ಪ್ರಾಧಿಕಾರವು ಪರವಾನಗಿಯನ್ನು ವಾಪಾಸ್ ಬ್ಯಾಂಕಿಗೆ ನೀಡಿತು, ಆದ್ರೆ ಇದರ ಜೊತೆಗೆ ಮೇಲ್ಮನವಿ ಪ್ರಾಧಿಕಾರವು ಬ್ಯಾಂಕಿನ ಆರ್ಥಿಕ ಸ್ಥಿತಿ ಹೇಗಿದೆ ಎಂದು ನಿರ್ಣಯಿಸಲು 2013-14ರ ಆರ್ಥಿಕ ವರ್ಷಕ್ಕೆ ವಿಧಿವಿಜ್ಞಾನ ಲೆಕ್ಕಪರಿಶೋಧನೆಯನ್ನು (Forensic Audit) ನಡೆಸಬೇಕೆಂದು ನಿರ್ದೇಶಿಸಿತು. ಆದ್ರೆ ಈ ಲೆಕ್ಕ ಪರಿಶೋಧನೆಗೆ ಈ ಸಹಕಾರಿ ಬ್ಯಾಂಕ್ ಸಹಕರಿಸದ ಕಾರಣ, ಇಂದು ಸಂಕಷ್ಟದಲ್ಲಿ ಸಿಲುಕುವಂತಾಗಿದೆ.
ಪರವಾನಗಿ ರದ್ದತಿಗೆ ಕಾರಣವೇನು?
ಬ್ಯಾಂಕಿನ ಬಳಿ ಸಾಕಷ್ಟು ಬಂಡವಾಳವಿರಲಿಲ್ಲ, ಯಾವುದೇ ಹೆಚ್ಚಿನ ಮಟ್ಟದಲ್ಲಿ ಲಾಭವೂ ಇರಲಿಲ್ಲ. ಅಲ್ಲದೆ ಬ್ಯಾಂಕಿನ ಆರ್ಥಿಕ ಸ್ಥಿತಿ ನಿರಂತರವಾಗಿ ಕುಸಿತ ಕಂಡಿದ್ದರಿಂದ ಆರ್ಬಿಐ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಆರ್ಬಿಐ ಹೇಳಿದ್ದೇನು?
ಪರವಾನಗಿ ರದ್ಧತಿ ಬಗ್ಗೆ ಸ್ಪಷ್ಟನೆ ನೀಡಿರುವ ಆರ್ಬಿಐ "ಪ್ರಸ್ತುತ , ಆರ್ಥಿಕವಾಗಿ ಕುಸಿದಿರುವ ಈ ಬ್ಯಾಂಕ್ ತನ್ನ ಎಲ್ಲಾ ಠೇವಣಿದಾರರಿಗೆ ಪೂರ್ಣ ಮೊತ್ತವನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬ್ಯಾಂಕ್ ಕಾರ್ಯನಿರ್ವಹಿಸುವುದಕ್ಕೆ ಅನುಮತಿ ನೀಡುವುದು ಕಷ್ಟಸಾಧ್ಯ. ಇದು ಸಾರ್ವಜನಿಕ ಹಿತಾಸಕ್ತಿಗೆ ಹಾನಿಕಾರಕವಾಗಿದೆ ಎಂದು ಹೇಳಿದೆ.
ಬ್ಯಾಂಕ್ ಮುಚ್ಚಿದ ನಂತರ, ಪ್ರತಿಯೊಬ್ಬ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಅಡಿಯಲ್ಲಿ ತಮ್ಮ ಡೆಪಾಸಿಟ್ ಮೇಲೆ ₹5 ಲಕ್ಷದವರೆಗಿನ ವಿಮಾ ಕ್ಲೇಮ್ ಪಡೆಯಬಹುದು ಎಂದು ಆರ್ಬಿಐ ಹೇಳಿದೆ
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications