ಭಾರತೀಯ ಜನತಾ ಪಕ್ಷಕ್ಕೆ 2018-19ನೇ ಸಾಲಿನಲ್ಲಿ 'ಗೊತ್ತಿಲ್ಲದ ಮೂಲಗಳಿಂದ' ಬಂದಿರುವ ದೇಣಿಗೆ ಎಷ್ಟು ಗೊತ್ತಾ? 1612.04 ಕೋಟಿ ರುಪಾಯಿ. ರಾಷ್ಟ್ರೀಯ ಪಕ್ಷಗಳಿಗೆಲ್ಲ ಸೇರಿ 'ಗೊತ್ತಿಲ್ಲದ ಮೂಲಗಳಿಂದ ಬಂದಿರುವ ಮೊತ್ತದ (2,512.98 ಕೋಟಿ) ಶೇಕಡಾ 64ರಷ್ಟು ದೇಣಿಗೆ ಬಿಜೆಪಿಯೊಂದಕ್ಕೆ ಬಂದಿದೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರೀಫಾರ್ಮ್ಸ್ (ಎಡಿಆರ್) ತಿಳಿಸಿದೆ.
ಇತರ ಐದು ರಾಷ್ಟ್ರೀಯ ಪಕ್ಷಗಳ ಇದೇ ದೇಣಿಗೆ (900.94 ಕೋಟಿ ರುಪಾಯಿ) ಮೂಲದಿಂದ ಬಂದ ಮೊತ್ತಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಮೊತ್ತ ಬಿಜೆಪಿಗೆ ಬಂದಿದೆ. ಕಾಂಗ್ರೆಸ್ ಪಕ್ಷವು 728.88 ಕೋಟಿ ರುಪಾಯಿ ಘೋಷಣೆ ಮಾಡಿಕೊಂಡಿದೆ. ಈ ಹಣವನ್ನು ಯಾರಿಂದ ದೇಣಿಗೆ ಪಡೆಯಲಾಯಿತು ಎಂಬ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ.
2004-05ರಿಂದ 2018-19ನೇ ಸಾಲಿನ ಮಧ್ಯೆ ರಾಷ್ಟ್ರೀಯ ಪಕ್ಷಗಳು 11,234.12 ಕೋಟಿ ರುಪಾಯಿಯನ್ನು ಗೊತ್ತಿಲ್ಲದ ಮೂಲಗಳಿಂದ ದೇಣಿಗೆ ಪಡೆದಿವೆ. ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಸಿಪಿಎಂ, ಎನ್ ಸಿಪಿ, ಬಿಎಸ್ ಪಿ ಹಾಗೂ ಸಿಪಿಐನಿಂದ ಚುನಾವಣೆ ಆಯೋಗದ ಬಳಿ ದಾಖಲಿಸಿರುವ ಮಾಹಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಗೊತ್ತಿಲ್ಲದ ಮೂಲಗಳು ಅಂದರೆ, ಇಪ್ಪತ್ತು ಸಾವಿರ ರುಪಾಯಿಗಿಂತ ಕಡಿಮೆ ಮೊತ್ತದ ದೇಣಿಗೆಯನ್ನು ನೀಡಿದವರ ಮಾಹಿತಿಯನ್ನು ಬಹಿರಂಗ ಮಾಡದೆ, ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದು. ಇಂಥ ದೇಣಿಗೆಗಳು ಎಲೆಕ್ಟೋರಲ್ ಬಾಂಡ್ಸ್, ಕೂಪನ್ ಗಳ ಮಾರಾಟ, ಪರಿಹಾರ ನಿಧಿ, ಇತರ ಆದಾಯ, ಸ್ವಯಂಪ್ರೇರಿತ ದೇಣಿಗೆ ಮತ್ತು ಸಭೆ/ಮೋರ್ಚಾಗಳಿಂದ ಕೊಡುಗೆ ರೂಪದಲ್ಲಿ ಪಡೆದಿರುವಂಥದ್ದಾಗಿರುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications