ಬೌನ್ಸ್.. ಸದ್ಯ ಬೆಂಗಳೂರಿನಲ್ಲಿ ಭಾರೀ ಹವಾ ಸೃಷ್ಟಿಸಿರುವ ಬಾಡಿಗೆ ದ್ವಿಚಕ್ರ ವಾಹನ ಪೂರೈಸುವ ಸಂಸ್ಥೆ. ದಿನನಿತ್ಯ ಸಾವಿರಾರು ಜನರು ಇದರ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಕಡಿಮೆ ಬೆಲೆ ಹಾಗೂ ನಿಗಧಿತ ಸಮಯದಲ್ಲಿ ತಲುಪಲು ಬೌನ್ಸ್ ಸ್ಕೂಟರ್ಗಿಂತ ಉತ್ತಮ ಸೌಲಭ್ಯ ಮತ್ತೊಂದಿಲ್ಲ.
ಬೆಂಗಳೂರಿನಲ್ಲಿ ದಿನಕ್ಕೆ ಏನಿಲ್ಲವೆಂದರೂ 1 ಲಕ್ಷ ಸವಾರರು ಬೌನ್ಸ್ ಸ್ಕೂಟರ್ಗಳನ್ನು ಬಳಸುತ್ತಿದ್ದಾರೆ. ಇಷ್ಟು ದಿನ ಗ್ರಾಹಕರು ಬೌನ್ಸ್ಗೆ ಹಣ ನೀಡುವುದಷ್ಟೇ ಅಲ್ಲದೇ, ಇದೀಗ ಹಣ ಗಳಿಕೆಗೂ ಅವಕಾಶ ನೀಡಿದೆ. ಗ್ರಾಹಕರು ಪೆಟ್ರೋಲ್ ಹಾಕಿಸಿ ಹಣ ಸಂಪಾದಿಸಬಹುದು.

ಬೌನ್ಸ್ ಆ್ಯಪ್ನಲ್ಲಿ ಸ್ಕೂಟರ್ ಆಯ್ಕೆಗೂ ಮುನ್ನ ಆಫರ್ಗಳನ್ನು ಬಿತ್ತರಿಸುತ್ತದೆ. 100 ರುಪಾಯಿ ಪೆಟ್ರೋಲ್ ಹಾಕಿಸಿದರೆ 150 ರುಪಾಯಿ ಬೌನ್ಸ್ ಕ್ಯಾಶ್ ಬ್ಯಾಕ್ ಬರಲಿದೆ. ಜೊತೆಗೆ ನೀವು ಆಯ್ಕೆ ಮಾಡಿದ ಪೇಟಿಎಂ ಅಥವಾ ಬೌನ್ಸ್ ಕ್ಯಾಶ್ ಮೂಲಕ ಪುನಃ 48 ಗಂಟೆಯೊಳಗೆ 100 ರುಪಾಯಿ ಹಣವನ್ನು ಪಡೆಯಬಹುದು. ಒಟ್ಟಾರೆ 100 ರುಪಾಯಿ ಪೆಟ್ರೋಲ್ ಹಾಕಿಸಿದರೆ 250 ರುಪಾಯಿ ಸಿಕ್ಕಿದಂತಾಗುತ್ತದೆ.
ಬೌನ್ಸ್ ನ ಈ ಆಫರ್ ಜೊತೆಗೆ 200 ರುಪಾಯಿ ಪೆಟ್ರೋಲ್ ಹಾಕಿಸಿದರೆ 150 ರುಪಾಯಿ ಬೌನ್ಸ್ ಕ್ಯಾಶ್ ಬ್ಯಾಕ್ ಬರಲಿದೆ. ಜೊತೆಗೆ 200 ರುಪಾಯಿ ಪೇಟಿಎಂ ವ್ಯಾಲೆಟ್ಗೆ ಅಥವಾ ಬೌನ್ಸ್ ಕ್ಯಾಶ್ಗೆ ಹಣ ಪಡೆಯಬಹುದು. ಒಟ್ಟಾರೆ 200 ರುಪಾಯಿ ಪೆಟ್ರೋಲ್ ಹಾಕಿಸಿದರೆ 350 ರುಪಾಯಿ ಹಣ ಹಿಂದಿರುಗಿ ಪಡೆಯಬಹುದು. ಆದರೆ ಈ ಆಫರ್ ಕೆಲವು ಆಯ್ದ ಸ್ಕೂಟರ್ಗಳಿಗೆ ಮಾತ್ರ ಸೀಮಿತವಾಗಿದೆ.
ಇಷ್ಟೆಲ್ಲಾ ಉತ್ತಮ ಸೌಲಭ್ಯವನ್ನು ಕಲ್ಪಿಸಿರುವ ಬೌನ್ಸ್ ಸಂಸ್ಥೆಯ ಸ್ಕೂಟರ್ಗಳನ್ನು ಕೆಲವು ಗ್ರಾಹಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ನಿಲ್ಲಿಸಿ, ಹೆಲ್ಮೆಟ್, ಟೈಯರ್ ಬಿಡಿ ಭಾಗಗಳನ್ನು ಎಗರಿಸಿ ಕಂಪನಿಗೆ ನಷ್ಟ ತಂದೊಡ್ಡಿದ ಪ್ರಕರಣಗಳು ದಾಖಲಾಗಿವೆ.
ಕೆಲವು ಭಾಗಗಳಲ್ಲಂತೂ ಬೌನ್ಸ್ ಸ್ಕೂಟರ್ಗಳನ್ನು ಚರಂಡಿಗೆ ಹಾಕಿದ ಘಟನೆಗಳು, ಪೆಟ್ರೋಲ್ ಕದ್ದಿರೋ ಘಟನೆಗಳು ನಡೆದಿದೆ. ಹೀಗಾಗಿ ಗ್ರಾಹಕರು ಈ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿದರೆ ಒಳಿತು.
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications