ಆದಾಯ ತೆರಿಗೆ ಇಲಾಖೆಯ ಅಡಿಯಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ವ್ಯಾಪಾರ ಅಥವಾ ಇತರ ವೃತ್ತಿಯಲ್ಲಿ ಪಡೆದ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಹೊಸ TDS ನಿಬಂಧನೆಯ ಅನ್ವಯಕ್ಕೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಈ ಪರ್ಕ್ವಿಸಿಟ್ಗಳು ನಗದು ರೂಪದಲ್ಲಿ ಅಥವಾ ಭಾಗಶಃ ಈ ಎರಡೂ ರೂಪಗಳಲ್ಲಿರಬಹುದು ಎಂದು ಐಟಿ ಇಲಾಖೆ ಹೇಳಿದೆ. ವಿವರವಾದ ಮಾರ್ಗಸೂಚಿಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಸಿಬಿಡಿಟಿ ಹೇಳಿದೆ. CBDT ನಿಬಂಧನೆಯ ಅಡಿಯಲ್ಲಿ, ವೈದ್ಯರು ಸ್ವೀಕರಿಸುವ ಉಚಿತ ವೈದ್ಯಕೀಯ ಮಾದರಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಉಳಿಸಿಕೊಂಡಿರುವ ಉಡುಗೊರೆಗಳಂತಹ ಪ್ರಯೋಜನಗಳ ಮೇಲೆ TDS ಇರಲಿದೆ.
ತಮ್ಮ ಕೊನೆಯ ಬಜೆಟ್ ಮಂಡನೆ ಸಂದರ್ಭದಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತೆರಿಗೆ ಆದಾಯ ಕಡಿಮೆಯಾಗುವುದನ್ನು ಪರಿಶೀಲಿಸಲು ಪ್ರಯೋಜನಗಳು ಅಥವಾ ಪರ್ಕ್ವಿಸಿಟ್ಗಳ ಮೇಲೆ ಟಿಡಿಎಸ್ನಲ್ಲಿ ನಿಬಂಧನೆಗಳನ್ನು ಘೋಷಿಸಿದ್ದರು. ಆದರೂ ಕೆಲವು ಅನುಮಾನಗಳಿದ್ದವು.

"ಈ ಹೊಸ ಮಾರ್ಗಸೂಚಿ ಜನರಿಗೆ ಯಾವುದೇ ಪ್ರಯೋಜನ ಅಥವಾ ಪರ್ಕ್ವಿಸಿಟ್ ಅನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿರುವುದನ್ನು ಕಡ್ಡಾಯಗೊಳಿಸುತ್ತದೆ. ಅಂತಹ ಪ್ರಯೋಜನ ಅಥವಾ ಪರ್ಕ್ವಿಸಿಟ್ ಅನ್ನು ಒದಗಿಸುವ ಮೊದಲು, ಪ್ರಯೋಜನ ಅಥವಾ ಪರ್ಕ್ವೈಸಿಟ್ನ ಮೌಲ್ಯದ 10 ಪ್ರತಿಶತ ಅಥವಾ ಒಟ್ಟು ಮೌಲ್ಯದ ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಬೇಕು," ಎಂದು ಸಿಬಿಡಿಟಿ ತನ್ನ ಸೂಚನೆಯಲ್ಲಿ ತಿಳಿಸಿದೆ.
ಅಧಿಸೂಚನೆಯಲ್ಲಿ, ಹಣಕಾಸು ಕಾಯಿದೆ 2022 ರ ಸೆಕ್ಷನ್ 28 (iv) ರ ಅಡಿಯಲ್ಲಿ ತೆರಿಗೆದಾರರು ತಾವು ಒದಗಿಸುವ ಪ್ರಯೋಜನ ಅಥವಾ ಪರ್ಕ್ವಿಸಿಟ್ ಮೊತ್ತವು ತೆರಿಗೆಗೆ ಅನ್ವಯವಾಗಲಿದೆಯೇ ಎಂದು ಪರಿಶೀಲಿಸುವ ಅಗತ್ಯವಿಲ್ಲ ಎಂದು CBDT ಹೇಳಿದೆ. "ಮೊತ್ತವು ಸ್ವೀಕರಿಸುವವರ ಕೈಯಲ್ಲಿ ತೆರಿಗೆಗೆ ಒಳಪಟ್ಟಿದೆಯೇ ಅಥವಾ ಯಾವ ಸೆಕ್ಷನ್ ಅಡಿಯಲ್ಲಿ ತೆರಿಗೆಗೆ ಒಳಪಡುತ್ತದೆ ಎಂಬುದನ್ನು ಪರಿಶೀಲಿಸುವ ಅಗತ್ಯ ಕೂಡಾ ಇಲ್ಲ," ಎಂದು ನೋಟಿಸ್ ಹೇಳಿದೆ.
ವೈದ್ಯರಿಗೆ ನೀಡಲಾಗುವ ಪ್ರಯೋಜನ
ಆಸ್ಪತ್ರೆಯ ಉದ್ಯೋಗಿಯಾಗಿರುವ ವೈದ್ಯರಿಗೆ ಕಂಪನಿಯಿಂದ ಉಚಿತ ಮಾದರಿಗಳನ್ನು ವಿತರಿಸಲು ಸೆಕ್ಷನ್ 194 ಆರ್ ಅನ್ವಯಿಸುತ್ತದೆ ಎಂದು ಸಿಬಿಡಿಟಿ ಅಧಿಸೂಚನೆ ಹೇಳಿದೆ. ಆಸ್ಪತ್ರೆಯು ತರುವಾಯ ಈ ಪ್ರಯೋಜನ/ಅನುಕೂಲತೆಯನ್ನು ಕಾಯಿದೆಯ ಸೆಕ್ಷನ್ 17 ರ ಅಡಿಯಲ್ಲಿ ತನ್ನ ಉದ್ಯೋಗಿಗಳಿಗೆ ನೀಡಲಾದ ಪರ್ಕ್ವಿಸಿಟ್ ಎಂದು ಪರಿಗಣಿಸಬಹುದು. ಹಾಗೆಯೇ ಕಾಯಿದೆಯ ಸೆಕ್ಷನ್ 192 ರ ಅಡಿಯಲ್ಲಿ ತೆರಿಗೆಯನ್ನು ಕಡಿತಗೊಳಿಸಬಹುದು. ಉದ್ಯೋಗಿ ಅಥವಾ ವೈದ್ಯರ ಸಂಬಳದಿಂದಲೇ ಈ ಪರ್ಕ್ವಿಸಿಟ್ ತೆರಿಗೆ ಕಡಿತವಾಗಲಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications