ದಿವಾಳಿತನದ ಕಾನೂನನ್ನು ದುರ್ಬಲಗೊಳಿಸುತ್ತಿರುವ ಮೋದಿ ಸರ್ಕಾರ: ಆರ್ಬಿಐ ಮಾಜಿ ಗವರ್ನರ್ ಗಂಭೀರ ಆರೋಪ
ನವದೆಹಲಿ: ಹೊಸದಾಗಿ ಜಾರಿಗೊಳಿಸಿದ ದಿವಾಳಿತನದ ಕಾನೂನನ್ನು ದುರ್ಬಲಗೊಳಿಸುವ ಕ್ರಮಗಳು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ನಡುವೆ ಭಿನ್ನಾಭಿಪ್ರಾಯಗಳನ್ನು ಉಂಟುಮಾಡಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಹೇಳಿದ್ದಾರೆ.
ಹರ್ಯಾಣದ ಈ ಟೀ ಮಾರಾಟಗಾರ ಬ್ಯಾಂಕ್ ಗೆ 50 ಕೋಟಿ ಬಾಕಿಯಂತೆ!
ಆರ್ಬಿಐ ಹೊರಡಿಸಿದ ಫೆಬ್ರವರಿ 2018 ರ ಸುತ್ತೋಲೆಯ ಸುತ್ತ ಈ ಬಿರುಕು ಕೇಂದ್ರೀಕೃತವಾಗಿತ್ತು. ಇದು ಬ್ಯಾಂಕುಗಳು ಸಾಲಗಾರರನ್ನು ಮರುಪಾವತಿ ವಿಳಂಬವಾದಾಗ ತಕ್ಷಣವೇ ಡೀಫಾಲ್ಟರ್ ಎಂದು ವರ್ಗೀಕರಿಸಲು ಒತ್ತಾಯಿಸುತಿತ್ತು. ಡೀಫಾಲ್ಟ್ ಕಂಪನಿಯ ಸಂಸ್ಥಾಪಕರು ದಿವಾಳಿತನ ಹರಾಜಿನ ಸಮಯದಲ್ಲಿ ತಮ್ಮ ಸಂಸ್ಥೆಗಳನ್ನು ಮರಳಿ ಖರೀದಿಸಲು ಪ್ರಯತ್ನಿಸುವುದನ್ನು ತಡೆಯಿತಿತ್ತು.
ಶುಕ್ರವಾರ ಬಿಡುಗಡೆಯಾದ ಪುಸ್ತಕವೊಂದರಲ್ಲಿ ಊರ್ಜಿತ್ ಪಟೇಲ್ ಈ ವಿಷಯ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ದಿವಾಳಿತನದ ಕಾನೂನನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸೆಪ್ಟೆಂಬರ್ 2016 ರ ನಡುವೆ ಆರ್ಬಿಐ ಮುಖ್ಯಸ್ಥರಾಗಿದ್ದ ಪಟೇಲ್ 2018 ರ ಡಿಸೆಂಬರ್ನಲ್ಲಿ ಅನಿರೀಕ್ಷಿತ ರಾಜೀನಾಮೆ ನೀಡಿದ್ದರು. ಅವರು ಕೇಂದ್ರೀಯ ಬ್ಯಾಂಕ್ನಿಂದ ಹೊರಬಂದ ವರ್ಷದ ಮಧ್ಯದಲ್ಲಿ ದಿವಾಳಿತನದ ಶಾಸನದ ಬಗ್ಗೆ ಸರ್ಕಾರವು ಉತ್ಸಾಹವನ್ನು ಕಳೆದುಕೊಂಡಂತೆ ಕಾಣುತ್ತದೆ ಎಂದು ಹೇಳಿದ್ದರು.