ದಿವಾಳಿತನದ ಕಾನೂನನ್ನು ದುರ್ಬಲಗೊಳಿಸುತ್ತಿರುವ ಮೋದಿ ಸರ್ಕಾರ: ಆರ್‌ಬಿಐ ಮಾಜಿ ಗವರ್ನರ್ ಗಂಭೀರ ಆರೋಪ

ನವದೆಹಲಿ: ಹೊಸದಾಗಿ ಜಾರಿಗೊಳಿಸಿದ ದಿವಾಳಿತನದ ಕಾನೂನನ್ನು ದುರ್ಬಲಗೊಳಿಸುವ ಕ್ರಮಗಳು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ನಡುವೆ ಭಿನ್ನಾಭಿಪ್ರಾಯಗಳನ್ನು ಉಂಟುಮಾಡಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಹೇಳಿದ್ದಾರೆ.

ಆರ್‌ಬಿಐ ಹೊರಡಿಸಿದ ಫೆಬ್ರವರಿ 2018 ರ ಸುತ್ತೋಲೆಯ ಸುತ್ತ ಈ ಬಿರುಕು ಕೇಂದ್ರೀಕೃತವಾಗಿತ್ತು. ಇದು ಬ್ಯಾಂಕುಗಳು ಸಾಲಗಾರರನ್ನು ಮರುಪಾವತಿ ವಿಳಂಬವಾದಾಗ ತಕ್ಷಣವೇ ಡೀಫಾಲ್ಟರ್ ಎಂದು ವರ್ಗೀಕರಿಸಲು ಒತ್ತಾಯಿಸುತಿತ್ತು. ಡೀಫಾಲ್ಟ್ ಕಂಪನಿಯ ಸಂಸ್ಥಾಪಕರು ದಿವಾಳಿತನ ಹರಾಜಿನ ಸಮಯದಲ್ಲಿ ತಮ್ಮ ಸಂಸ್ಥೆಗಳನ್ನು ಮರಳಿ ಖರೀದಿಸಲು ಪ್ರಯತ್ನಿಸುವುದನ್ನು ತಡೆಯಿತಿತ್ತು.

ಶುಕ್ರವಾರ ಬಿಡುಗಡೆಯಾದ ಪುಸ್ತಕವೊಂದರಲ್ಲಿ ಊರ್ಜಿತ್ ಪಟೇಲ್ ಈ ವಿಷಯ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ದಿವಾಳಿತನದ ಕಾನೂನನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

'ದಿವಾಳಿತನದ ಕಾನೂನನ್ನು ದುರ್ಬಲಗೊಳಿಸುತ್ತಿರುವ ಮೋದಿ ಸರ್ಕಾರ'

ಸೆಪ್ಟೆಂಬರ್ 2016 ರ ನಡುವೆ ಆರ್‌ಬಿಐ ಮುಖ್ಯಸ್ಥರಾಗಿದ್ದ ಪಟೇಲ್ 2018 ರ ಡಿಸೆಂಬರ್‌ನಲ್ಲಿ ಅನಿರೀಕ್ಷಿತ ರಾಜೀನಾಮೆ ನೀಡಿದ್ದರು. ಅವರು ಕೇಂದ್ರೀಯ ಬ್ಯಾಂಕ್‌ನಿಂದ ಹೊರಬಂದ ವರ್ಷದ ಮಧ್ಯದಲ್ಲಿ ದಿವಾಳಿತನದ ಶಾಸನದ ಬಗ್ಗೆ ಸರ್ಕಾರವು ಉತ್ಸಾಹವನ್ನು ಕಳೆದುಕೊಂಡಂತೆ ಕಾಣುತ್ತದೆ ಎಂದು ಹೇಳಿದ್ದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+