ಚೆನ್ನೈ ಮೇಲೆ ಪ್ರಯಾಣಕರ ಸಂಚಾರವನ್ನು ತಗ್ಗಿಸಲು ತಮಿಳುನಾಡು ಸರ್ಕಾರವು(Tamil Nadu government) 75 ಕಿ.ಮೀ ದೂರದಲ್ಲಿರುವ ಪರಂದೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿ ಇದೀಗ ಭೂಸ್ವಾಧೀನ ಪ್ರಕ್ರಿಯೆಯ ಹಂತದಲ್ಲಿ ಇದೆ. ಇದು ಚೆನ್ನೈನಲ್ಲಿ ಏರಿಕೆಯಾಗುತ್ತಿರುವ ವಿಮಾನ ಸಂಚಾರ ಒತ್ತಡವನ್ನು ಸಮತೋಲನಗೊಳಿಸಲು ಸಹಾಯಕವಾಕವಾಗಿದೆ. ಭೂಸ್ವಾಧೀನಕ್ಕಾಗಿ ಅಲ್ಲಿನ ಸ್ಥಳೀಯ ರೈತರು ತೀವ್ರ ಹೋರಾಟವನ್ನು ಮುಂದುವರಿಸಿದ್ದರು. ಇದಕ್ಕೆ ತಮಿಳು ನಾಡು ಸರ್ಕಾರ ಮಾಡಲಾಗಿದೆ. ಭೂಮಿಗೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.ಹಾಗಿದ್ದರೆ ಪರಂದೂರು ವಿಮಾನ ನಿಲ್ದಾಣ ಪ್ರಕ್ರಿಯೆ ಯಾವ ಹಂತದಲ್ಲಿ ಇದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು, ಪರಂದೂರಿನಲ್ಲಿ ಪ್ರಸ್ತಾವಿತ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಮೊದಲ ಹಂತದ ಭೂಸ್ವಾಧೀನ ಪ್ರಕ್ರಿಯೆಯಗಳು ಇದೀಗ ಪೂರ್ಣಗೊಂಡಿದೆ. ಸರ್ಕಾರಿ ಅಧಿಕಾರಿಗಳು ಹೇಳಿರುವ ಮಾಹಿತಿಯ ಪ್ರಕಾರ ಎಂಟು ಸ್ಥಳೀಯರು ಐದು ಹಳ್ಳಿಗಳ 11 ಸ್ಥಳೀಯರಲ್ಲದವರು ಸೇರಿದಂತೆ ಒಟ್ಟು 19 ಭೂಮಾಲೀಕರು ತಮ್ಮ 17.52 ಎಕರೆ ಭೂಮಿಯನ್ನು ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ವರ್ಗಾವಣೆಯನ್ನು ಮಾಡಲಾಗಿದೆ ಎಂದು ವರದಿಗಳು ಮಾಹಿತಿಯನ್ನು ತಿಳಿಸಿವೆ.
ಪರಂದೂರಿನಲ್ಲಿ ವಿಮಾನ ನಿಲ್ದಾಣದಲ್ಲಿ ಕಾಂಚೀಪುರಂ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ನೇರ ಸಂಧಾನ ಸಭೆಯಲ್ಲಿ ಭೂಮಿ ವರ್ಗಾವಣೆಗಾಗಿ ಒಟ್ಟು 9.22 ಕೋಟಿ ರೂ.ಗಳ ಪರಿಹಾರವನ್ನು ಮಾಲೀಕರ ಬ್ಯಾಂಕ್ ಖಾತೆಗಳಿಗೆ ಜಮಾ ಇದೀಗ ಮಾಡಲಾಗಿದೆ. ಚೆನ್ನೈನ ಎರಡನೇ ವಿಮಾನ ನಿಲ್ದಾಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ತಮಿಳುನಾಡು ಸರ್ಕಾರ ಪರಿಹಾರ ಪ್ಯಾಕೇಜ್ ಅನ್ನು ಪ್ರಕಟಿಸಿದ ಕೆಲವು ದಿನಗಳ ನಂತರ ಕ್ರಮವನ್ನು ಕೈಗೊಂಡಿದೆ.
ಮಾರ್ಗಸೂಚಿ ಮೌಲ್ಯ (GLV), ಚಾಲ್ತಿಯಲ್ಲಿರುವ ಮಾರುಕಟ್ಟೆ ದರ ಮತ್ತು ಭೂಮಾಲೀಕರೊಂದಿಗೆ ಖಾಸಗಿ ಮಾತುಕತೆಯ ಆಧಾರದ ಮೇಲೆ ರಾಜ್ಯವು ಎಕರೆಗೆ 35 ಲಕ್ಷದಿಂದ 2.58 ಕೋಟಿ ರೂ.ಗಳವರೆಗೆ ಬದಲಾಗುವ ದರಗಳನ್ನು ಅನುಮೋದನೆಯನ್ನು ಮಾಡಲಾಗಿತ್ತು.ಈ ಯೋಜನೆಗಾಗಿ ಒಟ್ಟು 3,774.1 ಎಕರೆ ಪಟ್ಟಾ ಭೂಮಿ ಮತ್ತು 1,972.17 ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧಾರವನ್ನು ಮಾಡಲಾಗಿದೆ.
ಏಕನಾಪುರದ ಜನರು ಹೋರಾಟಕ್ಕೆ ಸಿದ್ಧರಾಗಿ, ಸರ್ಕಾರ ನಮ್ಮ ಬಳಿಗೆ ಬರಲಿ ಎಂದು ಹೇಳಿದ್ದಾರೆ. ವಿಮಾನ ನಿಲ್ದಾಣ ಯೋಜನೆಯಡಿ ಭೂಸ್ವಾಧೀನಕ್ಕೆ ಪರಿಹಾರ ದರಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ಎಕರೆಗೆ 5 ಲಕ್ಷದಿಂದ 17 ಲಕ್ಷ ರೂ.ಗಳವರೆಗಿನ ಮಾರ್ಗಸೂಚಿ ಭೂ ಮೌಲ್ಯ (ಜಿಎಲ್ವಿ) ಹೊಂದಿರುವ ಭೂಮಿಗೆ ಎಕರೆಗೆ 35 ಲಕ್ಷದಿಂದ 60 ಲಕ್ಷ ರೂ.ಗಳವರೆಗೆ ಪರಿಹಾರವನ್ನು ನೀಡಲಾಗಿದೆ.

ಮೌಲ್ಯ ಆಧಾರಿತ ನಿಗದಿತ ದರವನ್ನು ಮೀರಿದರೆ ಅದಕ್ಕೆ ಅನುಗುಣವಾಗಿ ಪಾವತಿಗಳನ್ನು ಮಾಡಲಾಗುತ್ತದೆ. ಅಟ್ಟುಪುತೂರ್ನಂತಹ ಹೆಚ್ಚಿನ ಜಿಎಲ್ವಿ ಹೊಂದಿರುವ ಪ್ರದೇಶಗಳಲ್ಲಿ, ಪರಿಹಾರವು ಎಕರೆಗೆ 2.58 ಕೋಟಿ ರೂ.ಗಳವರೆಗೆ ಹೆಚ್ಚಾಗಬಹುದು.ಪ್ರಸ್ತುತ ಪ್ಯಾಕೇಜ್ ಕೇವಲ 3,331.25 ಎಕರೆಗಳನ್ನು ಮಾತ್ರ ಒಳಗೊಂಡಿದೆ. ಉಳಿದ ಜಮೀನುಗಳ ಸ್ಥಿತಿಯಲ್ಲಿ ಇದೆ.
ತಮ್ಮ ಭೂಮಿಯನ್ನು ಹಸ್ತಾಂತರಿಸಿರುವವರು ರೈತರಲ್ಲ. ಸರ್ಕಾರ ಏಕನಪುರಕ್ಕೆ ಬಂದು ನಮ್ಮ ಭೂಮಿಯನ್ನು ಕೇಳಲಿ. ನಾವು ದೀರ್ಘ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾಕಾರು ಹೇಳಿದ್ದಾರೆ. ವಿಮಾನ ನಿಲ್ದಾಣ ಯೋಜನೆಗೆ 13 ಹಳ್ಳಿಗಳ ನಿವಾಸಿಗಳಿಂದ ವಿಶೇಷವಾಗಿ ಏಕನಪುರಂನಲ್ಲಿ, ನಿರಂತರ ಪ್ರತಿರೋಧ ವ್ಯಕ್ತವಾಗಿದೆ. ಪರಿಸರ ಗುಂಪು ಪೂವುಲಗಿನ್ ನನ್ಬರ್ಗಲ್ ಪರಿಹಾರ ಮಾದರಿಯನ್ನು ತಮಿಳು ನಾಡು ಸರ್ಕಾರ ತೀವ್ರವಾಗಿ ಟೀಕೆಯನ್ನು ಮಾಡಿತ್ತು.
More From GoodReturns

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications