ಪ್ರಸಾರ ಮಾಧ್ಯಮಗಳಿಗೆ ಸದ್ಯಕ್ಕೆ ಜಾಹೀರಾತುಗಳ ಮೇಲೆ ಇರುವ 18% ಜಿಎಸ್ ಟಿಯನ್ನು ತೆಗೆಯಬೇಕು ಅಥವಾ ಅದನ್ನು 5 ಪರ್ಸೆಂಟ್ ಗೆ ಇಳಿಸಬೇಕು ಎಂದು ನ್ಯೂಸ್ ಬ್ರಾಡ್ ಕಾಸ್ಟರ್ಸ್ ಅಸೋಸಿಯೇಷನ್ ನಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆಯಲಾಗಿದೆ.
ವ್ಯಾಪಾರ ಹಾಗೂ ಉದ್ಯಮಗಳಿಗೆ ಅತಿ ಮುಖ್ಯವಾದ ಹಾಗೂ ಅವಿಭಾಜ್ಯವಾದ ಭಾಗ ಜಾಹೀರಾತು. ಸುದ್ದಿ ಪ್ರಸಾರ ಮಾಧ್ಯಮಗಳಿಗೆ ಜಾಹೀರಾತು ಅತಿ ಮುಖ್ಯವಾದ ಆದಾಯ. ಕೊರೊನಾ ನಂತರ ಮಾಧ್ಯಮಗಳು ಗಂಭೀರವಾದ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿವೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಜಾಹೀರಾತು ಸಂಸ್ಥೆಗಳು ಹಣ ಪಾವತಿಯನ್ನು ಮುಂದಕ್ಕೆ ಮಾತ್ರ ಹಾಕುತ್ತಿಲ್ಲ. ಸಾಲದ ಅವಧಿಗಿಂತ ಹೆಚ್ಚು ಸಮಯವನ್ನು ಕೇಳುತ್ತಿವೆ. ಮುಂದಿನ 30ರಿಂದ 90 ದಿನಗಳು ಹಣ ವಾಪಸ್ ವಸೂಲಿ ಮಾಡುವುದು ಸುದ್ದಿ ಮಾಧ್ಯಮಗಳಿಗೆ ಅತಿ ದೊಡ್ಡ ಸವಾಲಾಗಲಿದೆ. ಇದರ ಜತೆಗೆ ಜಾಹೀರಾತುಗಳನ್ನು ರದ್ದು ಮಾಡುವ ಉದಾಹರಣೆಗಳು ಹೆಚ್ಚಾಗಿವೆ. ಪ್ರಮುಖ ಸುದ್ದಿ ಮಾಧ್ಯಮಗಳ ಶೇಕಡಾ 50ರಷ್ಟು ಜಾಹೀರಾತುಗಳು ರದ್ದಾಗಿವೆ.

ವಸೂಲಾತಿಯಲ್ಲಿನ ಸಮಸ್ಯೆ, ಭವಿಷ್ಯದ ಆದಾಯದಲ್ಲಿನ ಅನಿಶ್ಚಿತತೆ ಕಾರಣಕ್ಕೆ ಮುಂದಿನ ಎರಡು- ಮೂರು ತ್ರೈಮಾಸಿಕ ಸುದ್ದಿ ಮಾಧ್ಯಮಗಳಿಗೆ ಕಷ್ಟ ಇದೆ. ಈ ಆರ್ಥಿಕ ವರ್ಷದ ಕೊನೆಗೆ ಸ್ಥಿತಿ ಸುಧಾರಿಸಬಹುದು ಎಂಬ ಅಂದಾಜಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೊರೊನಾ ಹಬ್ಬಿರುವ ಈ ಸನ್ನಿವೇಶದಲ್ಲಿ ವರದಿಗಾರಿಕೆಗೆ, ಸುದ್ದಿ ಕಲೆಹಾಕಲು ಕಾರ್ಯನಿರ್ವಹಣಾ ವೆಚ್ಚ ಹೆಚ್ಚಾಗಿದೆ. ವಿಶೇಷ ಸಿದ್ಧತೆಗೆ ಹೆಚ್ಚಿನ ಖರ್ಚಾಗುತ್ತಿದೆ ಎಂದು ಹೇಳಲಾಗಿದೆ. ನ್ಯೂಸ್ ಬ್ರಾಡ್ ಕಾಸ್ಟರ್ ಅಸೋಸಿಯೇಷನ್ ಒಂದು ಖಾಸಗಿ ಒಕ್ಕೂಟ. ಭಾರತದಲ್ಲಿ ಪ್ರಸಕ್ತ ವಿದ್ಯಮಾನ ಹಾಗೂ ಸುದ್ದಿ ಪ್ರಸಾರ ಮಾಡುವ ಮಾಧ್ಯಮ ಸಂಸ್ಥೆಗಳ ಒಕ್ಕೂಟ ಇದಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications