ಕೊರೊನಾದ ಕಾರಣಕ್ಕೆ ಭಾರತದ ಆರ್ಥಿಕತೆಗೆ ಎಷ್ಟು ನಷ್ಟ ಆಗಬಹುದು ಎಂದು ಅಂದಾಜು ಮಾಡಲಾಗಿದೆ. 40 ದಿನಗಳ ಅವಧಿಗೆ (ಮಾರ್ಚ್ 25ರಿಂದ ಮೇ 3ರ ತನಕ) 32000 ಕೋಟಿ ಅಮೆರಿಕನ್ ಡಾಲರ್ ನಷ್ಟು ಜಿಡಿಪಿಗೆ ನಷ್ಟವಾಗಬಹುದು ಎಂದು ವರದಿಯೊಂದು ಹೇಳಿದೆ. ಇದನ್ನು ಭಾರತದ ರುಪಾಯಿಗಳಲ್ಲಿ ಹೇಳಬೇಕು ಅಂದರೆ, 24,32,000 ಕೋಟಿ. ಅರ್ಥಾತ್ 24.3 ಲಕ್ಷ ಕೋಟಿ ರುಪಾಯಿ.
ಒಂದು ದಿನಕ್ಕೆ ಭಾರತದ ಜಿಡಿಪಿ ಅಂದಾಜು 800 ಕೋಟಿ ಅಮೆರಿಕನ್ ಡಾಲರ್ ನಷ್ಟವಾಗುತ್ತಿದೆ. ಭಾರತದ ರುಪಾಯಿ ಲೆಕ್ಕದಲ್ಲಿ 60,800 ಕೋಟಿ ರುಪಾಯಿಗೂ ಹೆಚ್ಚು. ಅತಿ ದೊಡ್ಡ ಹೊಡೆತ ಬಿದ್ದಿರುವುದು ಪ್ರವಾಸೋದ್ಯಮ ಹಾಗೂ ಸಾರಿಗೆ ವಲಯದ ಮೇಲೆ. ಓಯೋ, ಓಲಾ, ಮೇಕ್ ಮೈ ಟ್ರಿಪ್ ಇಂಥವಕ್ಕೆ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ.
MSMEಗಳಿಗೆ ಬಿದ್ದಿದೆ ಬಲುದೊಡ್ಡ ಪೆಟ್ಟು
ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳ ವಲಯಗಳನ್ನು (ಎಂಎಸ್ ಎಂಇ) ಭಾರತದ ಬೆನ್ನೆಲುಬು ಅಂತಲೇ ಕರೆಯಲಾಗುತ್ತದೆ. ಸಣ್ಣ ಕಾರ್ಖಾನೆಗಳನ್ನು ಮುಚ್ಚಿದ್ದು, ತುಂಬ ಕಡಿಮೆ ಸಂಖ್ಯೆಯ ಕಾರ್ಮಿಕರೊಂದಿಗೆ ಕಾರ್ಯ ನಿರ್ವಹಿಸಬೇಕಾಗಿದೆ. ಕೊರೊನಾದಿಂದ ಎಂಎಸ್ ಎಂಇ ಆದಾಯಕ್ಕೆ ಬಲುದೊಡ್ಡ ಪೆಟ್ಟು ಬಿದ್ದಿದೆ ಎಂದು ಮತ್ತೊಂದು ವರದಿಯಲ್ಲಿ ತಿಳಿಸಲಾಗಿದೆ.
ಕೆಲವು ವಲಯಗಳ ಪಾಲಿಗೆ ಮರಣ ಮೃದಂಗ
ಕೆಲವು ವಲಯಗಳ ಪಾಲಿಗಂತೂ ಕೊರೊನಾ ಮರಣಮೃದಂಗವಾಗಿದೆ. ಪೂರೈಕೆ ಜಾಲವೇ ಕಡಿದುಹೋಗಿರುವುದರಿಂದ ಎಲ್ಲ ಕಡೆಯೂ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಆದರೆ ಇಷ್ಟೆಲ್ಲ ಅಡೆ- ತಡೆಗಳ ಮಧ್ಯೆಯೂ ಗ್ರಾಹಕರ ಮನಸ್ಥಿತಿಯಲ್ಲಿ ಆದ ಬದಲಾವಣೆಗಳಿಂದ ಅವುಗಳು ಬೆಳವಣಿಗೆ ದಾಖಲಿಸಿವೆ.
ಟೆಕ್ ಅಪ್ಲಿಕೇಷನ್ ಸಂಸ್ಥೆಗಳಿಗೆ ಅನುಕೂಲ
ಸ್ಥಳೀಯವಾಗಿ ಡೆಲಿವರಿ ನೀಡುವ ಸೇವೆ, ಮಾಧ್ಯಮ ಹಾಗೂ ಮಾಹಿತಿ, ವಿಡಿಯೋ ಕಾನ್ಫರೆನ್ಸಿಂಗ್ ಸೇರಿದಂತೆ ಕೆಲವು ಟೆಕ್ ಅಪ್ಲಿಕೇಷನ್ ಗಳ ಆದಾಯದಲ್ಲಿ ಏರಿಕೆ ಕಂಡುಬರುವ ಎಲ್ಲ ಸಾಧ್ಯತೆ ಇದೆ. ಮುಂಬರುವ ಆರ್ಥಿಕ ವರ್ಷದಲ್ಲಿ ಭಾರತದ ಕೆಲವು ಸ್ಟಾರ್ಟ್ ಅಪ್ ಗಳು ಒಳ್ಳೆ ಸಾಧನೆ ಮಾಡಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications