ಹೊಸ ಸಂವತ್ಗಾಗಿ ದೀಪಾವಳಿ ಮುಹೂರ್ತದ ವ್ಯಾಪಾರವು ನವೆಂಬರ್ 12 ರಂದು ನಡೆಯಲಿದೆ. ಸಂಜೆ 6 ರಿಂದ 7.15 ರವರೆಗೆ ದೀಪಾವಳಿಯ ಈ ಮೂಹೂರ್ತ ಟ್ರೇಡಿಂಗ್ ನಡೆಯಲಿದೆ ಎಂದು ಅಕ್ಟೋಬರ್ 27 ರಂದು ಬಿಎಸ್ಇ ಅನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಸೇರಿದಂತೆ ಹೊಸದನ್ನು ಪ್ರಾರಂಭಿಸಲು ಮಂಗಳಕರ ಸಂದರ್ಭವೆಂದು ಪರಿಗಣಿಸಲಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಎಕ್ಸ್ಚೇಂಜ್ಗಳು ನಡೆಸುವ ವಿಶೇಷ ವಹಿವಾಟು ಮುಹೂರ್ತ ಟ್ರೇಡಿಂಗ್ ಆಗಿದೆ.

ದೀಪಾವಳಿಯ ಸಮಯದಲ್ಲಿ, ವಿನಿಮಯ ಕೇಂದ್ರಗಳು ಒಂದು ಗಂಟೆ ಮಾತ್ರ ತೆರೆದಿರುತ್ತವೆ. ಅಲ್ಲಿ ವ್ಯಾಪಾರಿಗಳು ಹೊಸ ವರ್ಷದ ಆರಂಭವನ್ನು ಗುರುತಿಸಲು ಟೋಕನ್ ವಹಿವಾಟುಗಳನ್ನು ಮಾಡಬಹುದಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಯಾಕಾಗಿ ಈ ದಿನವೇ ವಹಿವಾಟು?
ಹೂಡಿಕೆದಾರರು ಮುಹೂರ್ತ ವಹಿವಾಟಿನ ಸಮಯದಲ್ಲಿ ಷೇರುಗಳನ್ನು ಖರೀದಿಸುತ್ತಾರೆ. ಈ ಸಮಯದಲ್ಲಿ ಅವುಗಳನ್ನು ಖರೀದಿಸುವುದರಿಂದ ವರ್ಷವಿಡೀ ಸಂಪತ್ತು ಮತ್ತು ಅದೃಷ್ಟ ತರುತ್ತದೆ ಎಂದು ನಂಬಲಾಗಿದೆ. ದೀಪಾವಳಿಯಂದು, ಷೇರು ವ್ಯಾಪಾರಿಗಳು ಹೊಸ ಖಾತೆಗಳನ್ನು ಪ್ರಾರಂಭಿಸುತ್ತಾರೆ.
ನಿಯಮಿತ ವ್ಯಾಪಾರಕ್ಕಾಗಿ ಮಾರುಕಟ್ಟೆಗಳನ್ನು ಮುಚ್ಚಲಾಗಿದ್ದರೂ, ಆ ದಿನ ಆ ಒಂದು ಗಂಟೆಯವರೆಗೆ ಮಾರುಕಟ್ಟೆ ತೆರೆದಿರುತ್ತದೆ. ಇದಲ್ಲದೆ, ವಿಶೇಷ ಸೆಷನ್ನಲ್ಲಿ ಮಾಡಲಾದ ವಹಿವಾಟು ಅದೇ ದಿನ ಇತ್ಯರ್ಥವಾಗುತ್ತದೆ. ವಿವರಗಳ ಪ್ರಕಾರ, 15 ನಿಮಿಷಗಳ ಪೂರ್ವ-ಆರಂಭಿಕ ಮತ್ತು ಮುಕ್ತಾಯದ ಅವಧಿಗಳಿವೆ. ಎಲ್ಲಾ ವಹಿವಾಟುಗಳನ್ನು ಆ ದಿನವೇ ಇತ್ಯರ್ಥವಾಗುತ್ತದೆ.
2022 ರಲ್ಲಿ, ಸ್ಟಾಕ್ ಮಾರುಕಟ್ಟೆಗಳು (ಎನ್ಎಸ್ಇ ಮತ್ತು ಬಿಎಸ್ಇ) ದೀಪಾವಳಿ ಮುಹೂರ್ತವನ್ನು ಅಕ್ಟೋಬರ್ 24ರ 2022 ರಂದು ಸಂಜೆ 6.15 ರ ನಡುವೆ ನಡೆಸಿದೆ. 7.15 ಕ್ಕೆ ವಹಿವಾಟು ಕೊನೆಗೊಂಡಿದೆ.
ಮುಹೂರ್ತ ವ್ಯಾಪಾರದ ಮಹತ್ವ
ಹೂಡಿಕೆದಾರರು ತಮ್ಮ ಹೂಡಿಕೆಯ ಪ್ರಯಾಣವನ್ನು ಮಂಗಳಕರವಾದ ದಿನದಂದು ಪ್ರಾರಂಭಿಸಲು ಮತ್ತು ಪೋರ್ಟ್ಪೋಲಿಯೋಗಳಿಗೆ ಹೊಸ ಷೇರುಗಳನ್ನು ಸೇರಿಸಲು ಅವಕಾಶವಾಗಿ ನೋಡುವುದರಿಂದ ಮುಹೂರ್ತ ವಹಿವಾಟನ್ನು ಮಹತ್ವದ ವಹಿವಾಟಾಗಿ ಪರಿಗಣಿಸಲಾಗುತ್ತದೆ. ಹಾಗೆಯೇ ತಮ್ಮ ಹೋಲ್ಡಿಂಗ್ನಲ್ಲಿ ಷೇರುಗಳನ್ನು ಕೂಡಾ ಹೆಚ್ಚಿಸುತ್ತಾರೆ.
ಕಳೆದ ಎರಡು ಮುಹೂರ್ತ ಅವಧಿಗಳಲ್ಲಿ, ಸ್ಟಾಕ್ ಮಾರುಕಟ್ಟೆ ಗ್ರೀನ್ ಜೋನ್ನಲ್ಲಿದೆ. 2022 ರಲ್ಲಿ ಮುಹೂರ್ತ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ ಶೇಕಡ 0.88 ರಷ್ಟು ಲಾಭ ಗಳಿಸಿದೆ. 2021 ರಲ್ಲಿ ಎರಡು ಸೂಚ್ಯಂಕಗಳು ಶೇಕಡ 0.49 ರಷ್ಟು ಏರಿಕೆಯಾಗಿದೆ. ಒಂದು ಗಂಟೆಯ ಮುಹೂರ್ತದ ವಹಿವಾಟಿನ ಅವಧಿಯಲ್ಲಿ, ಮಾರುಕಟ್ಟೆಯ ಚಲನೆ ಅಸ್ಥಿರವಾಗಬಹುದು ಎಂದು ನಿರೀಕ್ಷಿಸಲಾಗಿದೆ.
More From GoodReturns

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

International Women's Day: ಮಹಿಳೆಯರೇ ಇಲ್ಲಿ ಗಮನಿಸಿ; ಇಲ್ಲಿದೆ ಬೆಸ್ಟ್ 5 ಹೂಡಿಕೆ ಯೋಜನೆಗಳು!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications