GoAir ವಿಮಾನಯಾನ ಸಂಸ್ಥೆಯಿಂದ ವಿದ್ಯಾರ್ಥಿಗಳಿಗಾಗಿ ರಿಯಾಯಿತಿ ದರವನ್ನು ಘೋಷಣೆ ಮಾಡಲಾಗಿದೆ. ಈ ಆಫರ್ ನಲ್ಲಿ ಮೂಲ ದರದ ಮೇಲೆ 5% ರಿಯಾಯಿತಿ ಹಾಗೂ 25 ಕೇಜಿ ಹೆಚ್ಚುವರಿ ಬ್ಯಾಗೇಜ್ ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ನೀಡಲಾಗುತ್ತದೆ. ಈ ಅಫರ್ ಮುಖ್ಯಾಂಶಗಳೇನು ಎಂಬ ವಿವರ ಹೀಗಿದೆ.
* ಗೋಏರ್ ವೆಬ್ ಸೈಟ್ ನಲ್ಲಿ ಆನ್ ಲೈನ್ ಬುಕ್ಕಿಂಗ್ ಗೆ ಈ ವಿದ್ಯಾರ್ಥಿ ದರ ದೊರೆಯುತ್ತದೆ. ವೆಬ್ ಸೈಟ್ ನಲ್ಲಿ ಸ್ಟೂಡೆಂಟ್ ಫೇರ್ ಎಂಬುದನ್ನು ಆರಿಸಿಕೊಳ್ಳಬೇಕು.
* 12 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ನೋಂದಾಯಿತ ಶಾಲೆಗಳು/ವಿಶ್ವವಿದ್ಯಾಲಯಕ್ಕೆ ಸೇರಿದವರಾಗಿದ್ದು, ಐ.ಡಿ. ಕಾರ್ಡ್ (ಗುರುತಿನ ಚೀಟಿ) ಹೊಂದಿರಬೇಕು.
* ಗೋಏರ್ 'ಸ್ಮಾರ್ಟ್ ಸ್ಟೂಡೆಂಟ್ ಫೇರ್' ಯೋಜನೆ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ ಆಗುತ್ತದೆ. ಅವರ ಕುಟುಂಬ ಸದಸ್ಯರಿಗೆ ಅಲ್ಲ.

* ಗೋಏರ್ ನ ಎಲ್ಲ ದೇಶೀಯ ವಿಮಾನ ಯಾನಕ್ಕೆ ವಿದ್ಯಾರ್ಥಿ ರಿಯಾಯಿತಿ ಅನ್ವಯ ಆಗುತ್ತದೆ.
* ವಿದ್ಯಾರ್ಥಿ ರಿಯಾಯಿತಿಯು ಒನ್ ವೇ ಮತ್ತು ರೌಂಡ್ ಟ್ರಿಪ್ ಬುಕ್ಕಿಂಗ್ ಗೆ ಅನ್ವಯಿಸುತ್ತದೆ.
* ವಿದ್ಯಾರ್ಥಿ ರಿಯಾಯಿತಿ ಯೋಜನೆ ಅಡಿಯಲ್ಲಿ ಬುಕ್ ಮಾಡಿದ ಟಿಕೆಟ್ ಬದಲಿಸಬಹುದು ಅಥವಾ ರದ್ದು ಮಾಡಬಹುದು. ರದ್ದು ಮತ್ತು ಬದಲಾವಣೆಯ ಶುಲ್ಕಗಳು ಅನ್ವಯಿಸುತ್ತವೆ.
* ಈ ಯೋಜನೆ ಅಡಿಯಲ್ಲಿ ಬುಕ್ ಆದ ಟಿಕೆಟ್ ಬೇರೆಯವರಿಗೆ ವರ್ಗಾವಣೆ ಆಗಲ್ಲ ಮತ್ತು ಹೆಸರು ಬದಲಾವಣೆಗೆ ಅವಕಾಶ ಇಲ್ಲ.
* ಈ ಯೋಜನೆ ಅಡಿಯಲ್ಲಿ ಸೀಮಿತ ಟಿಕೆಟ್ ಲಭ್ಯ ಇದ್ದು, ಸೀಟುಗಳು ಲಭ್ಯತೆಯ ಆಧಾರದಲ್ಲಿ ದೊರೆಯುತ್ತವೆ.
* ಈ ಯೋಜನೆಯು ಬೇರೆ ಆಫರ್/ರಿಯಾಯಿತಿಗಳು/ಪ್ರಮೋಷನ್ ಗಳ ಜತೆ ಸೇರಿಕೊಳ್ಳುವುದಿಲ್ಲ.
* ರದ್ದು ಮಾಡುವ ಶುಲ್ಕಗಳನ್ನು ಕಳೆದು, ಬುಕ್ಕಿಂಗ್ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ.
* ಹೆಚ್ಚುವರಿ ಬ್ಯಾಗೇಜ್ 25 kg (ಸ್ಟ್ಯಾಂಡರ್ಡ್ 15+10) ಅವಕಾಶ ಇದೆ. ವಿದ್ಯಾರ್ಥಿಗಳ ಐಡಿ ಕಾರ್ಡ್ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಫೋಟೋ ಐಡಿ ಇರಬೇಕು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications