ಅಧಿಕ ಪಿಂಚಣಿ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸಲಾಗಿರುವ ಬಗ್ಗೆ ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್ಒ) ಸಂಸ್ಥೆಯ ಎಲ್ಲ ಸದಸ್ಯರು ಗಮನಿಸಬೇಕು. ಅದರಂತೆ ಅರ್ಹ ಸದಸ್ಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಭವಿಷ್ಯ ನಿಧಿ ಸಂಸ್ಥೆಯ ಎಲ್ಲ ಅರ್ಹ ಸದಸ್ಯರು ಅಧಿಕ ಪಿಂಚಣಿಗಾಗಿ ಈಗ ಉದ್ಯೋಗದಾತರೊಂದಿಗೆ ಜಂಟಿಯಾಗಿ ಆಯ್ಕೆ ಮಾಡಿಕೊಂಡು 2023ರ ಮೇ 3ರವರೆಗೆ ಅರ್ಜಿ ಸಲ್ಲಿಸಬಹುದೆಂದು ಇಪಿಎಫ್ಒ ಸೋಮವಾರ ಘೋಷಿಸಿದೆ.
ಈ ಹಿಂದೆ ಅಧಿಕ ಪಿಂಚಣಿಗಾಗಿ 2023ರ ಮಾ.3 ಕೊನೆಯ ದಿನವೆಂದು ಊಹಿಸಲಾಗಿತ್ತು. ಸುಪ್ರೀಂಕೋರ್ಟ್ ಕಳೆದ ನ.4ರಂದು ಅಧಿಕ ಪಿಂಚಣಿಗೆ ಆಯ್ಕೆ ಮಾಡಲು ಎಲ್ಲ ಅರ್ಹ ಸದಸ್ಯರಿಗೆ 4 ತಿಂಗಳ ಕಾಲಾವಕಾಶ ನೀಡುವಂತೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ಇಪಿಎಫ್ಒನಿಂದ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ವಿಂಡೋವನ್ನು ಮಾ.3ರಂದು ಮುಚ್ಚಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು.

ಇಪಿಎಫ್ಒ ಪ್ಲಾಟ್ಫಾರಂನಲ್ಲಿ ಆಕ್ಟಿವೇಟ್ ಮಾಡಿರುವ ಯುಆರ್ಎಲ್ ಪ್ರಕಾರ ಅಧಿಕ ಪಿಂಚಣಿ ಆಯ್ಕೆ ಮಾಡಿಕೊಳ್ಳುವ ಗಡುವನ್ನು ಮೇ 2ವರೆಗೆ ವಿಸ್ತರಿಸಲಾಗಿದೆ ಹಾಗೂ ಅದರ ಈ ವಿಂಡೋ ಎರಡು ತಿಂಗಳ ಬಳಿಕ ಮುಚ್ಚಲ್ಪಡುತ್ತದೆ.
ಇಪಿಎಫ್ಒ ಅಧಿಕ ಪಿಂಚಣಿ ಯೋಜನೆ: ಅರ್ಹತಾ ಮಾನದಂಡಗಳು
* ರೂ. 5000 ಅಥವಾ 6500 ರೂ. ವೇತನದ ಮಿತಿಯನ್ನು ಮೀರಿದ ಸಂಬಳದ ಮೇಲೆ ಕೊಡುಗೆ ನೀಡಿದ ಉದ್ಯೋಗಿಗಳು ಹಾಗೂ ಉದ್ಯೋಗದಾತರು.
* ಇಪಿಎಸ್ ಸದಸ್ಯರಾಗಿದ್ದಾಗ ಹಿಂದಿನ ವಿಂಡೋದಲ್ಲಿ ಜಂಟಿ ಆಯ್ಕೆಯನ್ನು ತೆಗೆದುಕೊಳ್ಳದ ಉದ್ಯೋಗಿಗಳು ಹಾಗೂ ಉದ್ಯೋಗದಾತರು.
* 2014ರ ಸೆ.1ರ ಮೊದಲು ಸದಸ್ಯರಾಗಿದ್ದ ಮತ್ತು ಆ ದಿನಾಂಕದ ನಂತರವೂ ಸದಸ್ಯರಾಗಿ ಮುಂದುವರಿದಿರುವ ಉದ್ಯೋಗಿಗಳು.
ಈ ಅರ್ಹತಾ ಮಾನದಂಡದಡಿಯಲ್ಲಿ ಬರುವ ಎಲ್ಲರೂ ತಮ್ಮ ಉದ್ಯೋಗದಾತರೊಂದಿಗೆ ಜಂಟಿಯಾಗಿ ಇಪಿಎಫ್ಒ ಅಧಿಕ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಹಾಗೂ ಜಂಟಿ ಘೋಷಣೆಯನ್ನು ಸಲ್ಲಿಸಬೇಕು ಎಂಬುದನ್ನು ಗಮನಿಸಬೇಕು. ಇಪಿಎಸ್ ಸದಸ್ಯರು ತಮ್ಮ ಮೂಲ ವೇತನದ ಶೇ8.33ರಷ್ಟರವರೆಗೆ ಕೊಡುಗೆ ನೀಡಲು ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಇಪಿಎಫ್ಒ ಹೊರಡಿಸಿರುವ ಅಧಿಸೂಚನೆಯು "ಬಾಕಿಯಿರುವ ಕೊಡುಗೆಯನ್ನು ಪಾವತಿಯ ದಿನಾಂಕದವರೆಗಿನ ಬಡ್ಡಿಯೊಂದಿಗೆ ನಿಗದಿತ ಅವಧಿಯೊಳಗೆ ಠೇವಣಿ ಮಾಡಲಾಗುತ್ತದೆ" ಎಂದು ಹೇಳಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications