ನಕಲಿ ಮೈಸೂರು ಸ್ಯಾಂಡಲ್ ಸೋಪ್ ದಂಧೆ: ಕೆಎಸ್‌ಡಿಎಲ್‌ಗೆ ಎಷ್ಟು ನಷ್ಟ ಗೊತ್ತಾ?

ಕಳೆದ ವಾರ, ಮೈಸೂರು ಸ್ಯಾಂಡಲ್ ಸಾಬೂನುಗಳ ನೈಜ ತಯಾರಕರಾದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ನಿಂದ ಸಿಕ್ಕ ಹಿಂಟ್ ಆಧಾರದಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್‌ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಹೈದರಾಬಾದ್ ಪೊಲೀಸರು ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಅವರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ ಕೆಎಸ್‌ಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್, "ನಕಲಿ ತಯಾರಕರಿಂದ ನಮ್ಮ ಕಂಪನಿಗೆ ಸುಮಾರು 500-600 ಕೋಟಿ ರೂಪಾಯಿ ನಷ್ಟವಾಗಿದೆ. ಏಕೆಂದರೆ ಸುಮಾರು ಒಂದು ದಶಕದಿಂದ ಹೈದರಾಬಾದ್-ಕರ್ನಾಟಕ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತೆಲಂಗಾಣದಲ್ಲಿ ಈ ವಂಚಕರು ಕಾರ್ಯನಿರ್ವಹಿಸುತ್ತಿದ್ದಾರೆ," ಎಂದು ತಿಳಿಸಿದ್ದಾರೆ.

 ನಕಲಿ ಮೈಸೂರು ಸ್ಯಾಂಡಲ್ ಸೋಪ್: ಕೆಎಸ್‌ಡಿಎಲ್‌ಗೆ ನಷ್ಟವೆಷ್ಟು?

ವರದಿಗಳ ಪ್ರಕಾರ, ಕೆಲವು ದಿನಗಳ ಹಿಂದೆ, ಕೆಎಸ್‌ಡಿಎಲ್ ಅಧ್ಯಕ್ಷರೂ ಆಗಿರುವ ಕರ್ನಾಟಕ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರಿಗೆ ಹೈದರಾಬಾದ್‌ನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸಾಬೂನುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಅನಾಮಧೇಯ ಸಂದೇಶ ಬಂದಿದೆ.

ನಂತರ ಸಿಕಂದರಾಬಾದ್‌ನಲ್ಲಿರುವ ಸಂಸ್ಥೆಯ ಅಧಿಕೃತ ಮಾರಾಟ ಕಚೇರಿಯ ಸಿಬ್ಬಂದಿ 5 ಲಕ್ಷ ರೂಪಾಯಿ ಮೌಲ್ಯದ ನಕಲಿ ಉತ್ಪನ್ನಗಳನ್ನು ಖರೀದಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಆದರೆ, ತಯಾರಕರ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಸಂಕ್ರಾಂತಿ ಹಬ್ಬಕ್ಕೂ ಮುನ್ನ ಕೆಎಸ್‌ಡಿಎಲ್‌ ಸಿಬ್ಬಂದಿ 25 ಲಕ್ಷ ರೂಪಾಯಿಗಳ ಸಾಬೂನುಗಳಿಗೆ ಆರ್ಡರ್‌ ಮಾಡಿದ್ದು, ಸರಕನ್ನು ಪಡೆಯುವ ನೆಪದಲ್ಲಿ ನಕಲಿ ಸಾಬೂನು ತಯಾರಿಸುತ್ತಿದ್ದ ಘಟಕಕ್ಕೆ ತಲುಪಿದ್ದಾರೆ.

ನಕಲಿ ತಯಾರಕರು ಮುಖ್ಯವಾಗಿ ಜಾತ್ರೆಗಳು ಮತ್ತು ಹಬ್ಬಗಳ ಸಮಯದಲ್ಲಿ ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಕೆಎಸ್‌ಡಿಎಲ್ ಮೂಲಗಳು ತಿಳಿಸಿವೆ. "ಸಾಮಾನ್ಯವಾಗಿ, ಜನರು ಈ ಸ್ಥಳಗಳಲ್ಲಿ ಬ್ರ್ಯಾಂಡ್‌ನ ರಿಯಾಲಿಟಿಯನ್ನು ನೋಡುವುದಿಲ್ಲ. ಅವರ ವಾರ್ಷಿಕ ವಹಿವಾಟು ಸುಮಾರು 60 ಕೋಟಿ ರೂಪಾಯಿ ಎಂದು ನಮಗೆ ತಿಳಿದುಬಂದಿದೆ. ವರು ಸುಮಾರು ಒಂದು ದಶಕದಿಂದ ಅದನ್ನು ಮಾಡುತ್ತಿದ್ದಾರೆ," ಎಂದು ಮೂಲಗಳು ತಿಳಿಸಿದೆ.

ರಿಟೇಲ್ ವ್ಯಾಪಾರಿಗಳು ಅಥವಾ ವಿತರಕರು ನಕಲಿ ಉತ್ಪನ್ನಗಳನ್ನು ಏಕೆ ಖರೀದಿಸಿದರು ಎಂಬ ಪ್ರಶ್ನೆಗೆ ಕೆಎಸ್‌ಡಿಎಲ್ ಅಧಿಕಾರಿಯೊಬ್ಬರು ಉತ್ತರಿಸಿ, "ನಕಲಿ ತಯಾರಕರು ರಿಟೇಲ್ ವ್ಯಾಪಾರಿಗಳಿಗೆ ಹೆಚ್ಚಿನ ಕಮಿಷನ್ ನೀಡಿದರು. ಉದಾಹರಣೆಗೆ, 75 ಗ್ರಾಂನ ಮೈಸೂರು ಸ್ಯಾಂಡಲ್ ಸೋಪಿನ ಬೆಲೆ 41 ರೂಪಾಯಿ ಆಗಿದ್ದರೆ, ರಿಟೇಲ್ ವ್ಯಾಪಾರಿಯು ಅತ್ಯಲ್ಪ ಲಾಭವನ್ನು ಪಡೆಯುತ್ತಾನೆ," ಎಂದು ಹೇಳಿದರು.

"ಇಲ್ಲಿ ಈ ಜನರು 22 ರೂಪಾಯಿಗೆ ಮಾರಾಟ ಮಾಡಿ ರಿಟೇಲ್ ವ್ಯಾಪಾರಿಗಳು ಭಾರಿ ಲಾಭ ಗಳಿಸಿದ್ದಾರೆ. ಅಂತೆಯೇ, 450 ಗ್ರಾಂ ಮೂರು-ಸೋಪ್ ಬಾಕ್ಸ್ ಬೆಲೆ 200 ರೂಪಾಯಿ ಮತ್ತು ರಿಟೇಲ್ ವ್ಯಾಪಾರಿಗಳು ಹತ್ತು ರೂಪಾಯಿ ಲಾಭ ಪಡೆಯುತ್ತಾರೆ. ಆದರೆ ಈ ನಕಲಿ ಪೂರೈಕೆದಾರರಿಂದ ಖರೀದಿ ಮಾಡಿದರೆ, ವ್ಯಾಪಾರಿಗಳು 50 ರೂಪಾಯಿ ಲಾಭವನ್ನು ಗಳಿಸಬಹುದಾಗಿದೆ," ಎಂದು ತಿಳಿಸಿದ್ದಾರೆ.

"ನಾವು ನಮ್ಮ ಪ್ರಯೋಗಾಲಯದಲ್ಲಿ ನಕಲಿ ಸಾಬೂನುಗಳನ್ನು ಪರಿಶೀಲಿಸಿದ್ದೇವೆ ಮತ್ತು ಅವು ಕ್ಯಾನ್ಸರ್‌ಗೆ ಕಾರಣವಾಗುವ ಕೆಮಿಕಲ್ ಹೊಂದಿದೆ ಎಂದು ತಿಳಿದುಬಂದಿದೆ. ಯಾವುದೇ ಹೊಲೊಗ್ರಾಮ್ ಇಲ್ಲದ ಕಾರಣ ಈ ನಕಲಿ ಸೋಪ್ ಬಾಕ್ಸ್‌ಗಳನ್ನು ಸುಲಭವಾಗಿ ಗುರುತಿಸಬಹುದು," ಎಂದು ಹೇಳಿದರು.

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಅವರು ಚಿತ್ತಾಪುರ ಬಿಜೆಪಿ ನಾಯಕ ಮಣಿಕಾಂತ್ ರಾಥೋಡ್ ಮತ್ತು ಮಾಜಿ ಶಾಸಕ ವಾಲ್ಮೀಕಿ ನಾಯಕ್ ಅವರ ಪುತ್ರ ವಿಠಲ್ ನಾಯಕ್ ಮತ್ತು ಪಕ್ಷದ ಪದಾಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+