ನವದೆಹಲಿ, ಜನವರಿ 28: ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಸಾಮಾನ್ಯ ಭವಿಷ್ಯ ನಿಧಿ(General Provident Fund) ಮೇಲಿನ ಬಡ್ಡಿದರವನ್ನು ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಬಜೆಟ್ ವಿಭಾಗವು ಪ್ರಕಟಿಸಿದೆ. 20 ರ ಜನವರಿ 2020 ರಿಂದ ಮಾರ್ಚ್ ವರೆಗೆ ಜಿಪಿಎಫ್ ಮೇಲಿನ ಬಡ್ಡಿ ಶೇಕಡಾ 7.9 ರಷ್ಟಿದೆ.
ಒಂದು ವರ್ಷ ಉದ್ಯೋಗ ಪೂರ್ಣಗೊಳಿಸುವ ತಾತ್ಕಾಲಿಕ ಉದ್ಯೋಗಿಗಳು, ಎಲ್ಲಾ ಖಾಯಂ ಸರ್ಕಾರಿ ನೌಕರರು ಸಾಮಾನ್ಯ ಭವಿಷ್ಯ ನಿಧಿ ನಿಯಮ 1960 ರ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ಹೇಳಿದೆ.
ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪತ್ರ(ಎನ್ ಎಸ್ ಸಿ) ತ್ರೈಮಾಸಿಕ ಬಡ್ಡಿದರಗಳನ್ನು ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಬಡ್ಡಿದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ. ಬಡ್ಡಿದರವನ್ನು ಶೇಕಡಾ 7.9 ಕ್ಕೆ ಉಳಿಸಲಾಗಿದೆ. ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳಿಗೆ ನೀಡುವ ಬಡ್ಡಿದರವನ್ನು ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ.

ಸದ್ಯ ಜನವರಿ 2020ರಿಂದ ಮಾರ್ಚ್ ತನಕ ಜಿಪಿಎಫ್ ಬಡ್ಡಿದರ 7.9% ಇದ್ದು, ಜನವರಿ 01ರಿಂದಲೇ ಪೂರ್ವನ್ವಯವಾಗಲಿದೆ. ಯಾವೆಲ್ಲ ಭವಿಷ್ಯ ನಿಧಿ ಯೋಜನೆಗೆ ಇದು ಅನ್ವಯ ಇಲ್ಲಿದೆ ಪಟ್ಟಿ:
1. ಸಾಮಾನ್ಯ ಭವಿಷ್ಯ ನಿಧಿ(ಕೇಂದ್ರ ಸೇವೆ)
2. The Contributory Provident Fund
3. ಅಖಿಲ ಭಾರತ ಸೇವಾ ಭವಿಷ್ಯ ನಿಧಿ
4. ರಾಜ್ಯ ರೈಲ್ವೆ ಭವಿಷ್ಯ ನಿಧಿ
5. ಸಾಮಾನ್ಯ ಭವಿಷ್ಯ ನಿಧಿ(ರಕ್ಷಣಾ ಸೇವೆ)
6. The Indian Ordnance Department Provident Fund.
7. The Indian Ordnance Factories Workmen's Provident Fund.
8. ಭಾರತೀಯ ನೌಕಾಪಡೆ ಡಾಕ್ ಯಾರ್ಡ್ ಸಿಬ್ಬಂದಿ ಭವಿಷ್ಯ ನಿಧಿ.
9. ರಕ್ಷಣಾ ಸೇವಾ ಅಧಿಕಾರಿಗಳ ಭವಿಷ್ಯ ನಿಧಿ.
10. ಸಶಸ್ತ್ರ ಬಲ ಸಿಬ್ಬಂದಿ ಭವಿಷ್ಯ ನಿಧಿ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications