ನೀರಿನ ಭಾರೀ ಕೊರತೆ ನಡುವೆ ಬೆಂಗಳೂರಿಗೆ ಮತ್ತೊಂದು ಸಂಕಷ್ಟ!

ಬೆಂಗಳೂರು, ಮಾರ್ಚ್‌ 8: ನೀರಿನ ಕೊರತೆಯು ಪ್ರಸ್ತುತ ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ಎದುರಿಸುತ್ತಿರುವ ದೊಡ್ಡ ಬಿಕ್ಕಟ್ಟಾಗಿದ್ದು, ಈಗ ಭಾರತೀಯ ಹವಾಮಾನ ಇಲಾಖೆ ಮತ್ತೊಂದು ಕಂಟಕ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನ ನಡುವೆ ಬೇಸಿಗೆಯಲ್ಲಿ ಬಿಸಿಲಿನ ಬೇಗೆ ಭಾರೀ ಪ್ರಮಾಣದಲ್ಲಿ ಏರಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸಹ ಎಚ್ಚರಿಸಿದೆ. ಐಎಂಡಿ ಮುನ್ಸೂಚನೆಗಳ ಪ್ರಕಾರ, ಬೇಸಿಗೆಯಲ್ಲಿ ನಗರದ ತಾಪಮಾನವು ಹಿಂದಿನ ವರ್ಷಗಳಿಗಿಂತ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಬಹುದು ಎಂದು ತಿಳಿಸಿದೆ.

ನೀರಿನ ಭಾರೀ ಕೊರತೆ ನಡುವೆ ಬೆಂಗಳೂರಿಗೆ ಮತ್ತೊಂದು ಸಂಕಷ್ಟ!

ಈ ವರ್ಷ ಬೇಸಿಗೆಯ ಬಿಸಿ ಲಕ್ಷಣಗಳನ್ನು ಈಗಾಗಲೇ ಗಮನಿಸಲಾಗಿದೆ. ಫೆಬ್ರವರಿಯಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 3.6 ಡಿಗ್ರಿಗಳಷ್ಟು ಹೆಚ್ಚಾಗಿದೆ. ಹಿರಿಯ ಐಎಂಡಿ ವಿಜ್ಞಾನಿ ಎ ಪ್ರಸಾದ್ ಅವರು ಹೆಚ್ಚುತ್ತಿರುವ ತಾಪಮಾನವನ್ನು ಜಾಗತಿಕ ತಾಪಮಾನದೊಂದಿಗೆ ಅಂದಾಜಿಸಿದ್ದಾರೆ.

ಮಾರ್ಚ್ ನಲ್ಲಿ ಸಾಮಾನ್ಯವಾಗಿ ಸರಾಸರಿ 33.4 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ, ಈ ವರ್ಷ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಇದು 35.5 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು. ಏತನ್ಮಧ್ಯೆ, ಏಪ್ರಿಲ್‌ನಲ್ಲಿ ಸರಾಸರಿ 34.1 ಡಿಗ್ರಿ ಸೆಲ್ಸಿಯಸ್ 36 ಡಿಗ್ರಿ ಸೆಲ್ಸಿಯಸ್‌ಗೆ ಏರಬಹುದು ಎಂದು ತಿಳಿದು ಬಂದಿದೆ.

ಕರ್ನಾಟಕದ ಇತರ ಭಾಗಗಳು ಇದೇ ರೀತಿ ಪರಿಸ್ಥಿತಿ:

ಇದಲ್ಲದೆ, ಈ ಪರಿಣಾಮವು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಈ ಬೇಸಿಗೆಯಲ್ಲಿ ಕರ್ನಾಟಕದ ಇತರ ಭಾಗಗಳು ತಾಪದ ಹವಾಮಾನವನ್ನು ಎದುರಿಸುವ ನಿರೀಕ್ಷೆಯಿದೆ. ಕರ್ನಾಟಕದ ಕರಾವಳಿ ಪ್ರದೇಶಗಳು ಮತ್ತು ಉತ್ತರ ಒಳಭಾಗಗಳು ಮಾರ್ಚ್ ಅಂತ್ಯದ ವೇಳೆಗೆ ಶಾಖದ ಅಲೆಗಳನ್ನು ಎದುರಿಸಬಹುದು, ಇದು ಏಪ್ರಿಲ್ ಮತ್ತು ಮೇವರೆಗೆ ವಿಸ್ತರಿಸಬಹುದು ಎಂದು ಊಹಿಸಲಾಗಿದೆ.

ಸರಾಸರಿಗಿಂತ ಹೆಚ್ಚಿನ ಮಳೆಯ ಮುನ್ಸೂಚನೆ:

ಆದಾಗ್ಯೂ, ಅದೃಷ್ಟವಶಾತ್ ಭಾರತ ಹವಾಮಾನ ಇಲಾಖೆ (ಐಎಂಡಿ) ಮಾನ್ಸೂನ್ ತಿಂಗಳುಗಳಲ್ಲಿ 70 ಪ್ರತಿಶತದಷ್ಟು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಅಂದಾಜಿನ ಪ್ರಕಾರ, ಈ ವರ್ಷ ಬೆಂಗಳೂರಿನಲ್ಲಿ ಮಾರ್ಚ್‌ನಲ್ಲಿ 14.7 ಮಿಮೀ, ಏಪ್ರಿಲ್‌ನಲ್ಲಿ 61.7 ಮಿಮೀ ಮತ್ತು ಮೇನಲ್ಲಿ 128.7 ಮಿಮೀ ಮಳೆಯಾಗಬಹುದು. ಆದಾಗ್ಯೂ, ಶುಷ್ಕ ಹವಾಮಾನವು ಮಾರ್ಚ್ ಮಧ್ಯದವರೆಗೆ ಇರುತ್ತದೆ, ತಿಂಗಳ ಎರಡನೇ ಅಥವಾ ಮೂರನೇ ವಾರದ ವೇಳೆಗೆ ಭಾರತೀಯ ಐಟಿ-ಹಬ್‌ಗೆ ಮಳೆ ಬೀಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರದ ಕ್ರಮ:

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ನೀರಿನ ಸಮಸ್ಯೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಸ್ತುತ ನೀರಿನ ಕೊರತೆಯನ್ನು ನಿಭಾಯಿಸುವ ಸಲುವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ 210 ಕೋಟಿ ರೂ. ಈ 210 ಕೋಟಿ ರೂ.ಗಳಲ್ಲಿ 70 ಕೋಟಿ ರೂ.ಗಳನ್ನು ಅಗತ್ಯವಿರುವ ಕಡೆಗಳಲ್ಲಿ ಹೊಸ ಬೋರ್‌ವೆಲ್‌ಗಳನ್ನು ಕೊರೆಯಲು ಬಳಸಲಾಗುವುದು. ಅಲ್ಲದೆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದಾರೆ. ಯಾವುದೇ ವೆಚ್ಚದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು. ಅಗತ್ಯವಿರುವಷ್ಟು ಹಣವನ್ನು ನಾವು ಒದಗಿಸುತ್ತೇವೆ, "ಎಂದು ಅವರು ಹೇಳಿದರು.

ಅಗತ್ಯವಿರುವಷ್ಟು ಹಣ ನೀಡುತ್ತೇವೆ: ಸಿಎಂ ಸಿದ್ದರಾಮಯ್ಯ

ಕರ್ನಾಟಕದ 98 ತಾಲ್ಲೂಕುಗಳಾದ್ಯಂತ 412 ಗ್ರಾಮ ಪಂಚಾಯಿತಿಗಳು ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿರುವ ಪರಿಸ್ಥಿತಿಯ ತೀವ್ರತೆ ಸ್ಪಷ್ಟವಾಗಿದೆ. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರವು 175 ಗ್ರಾಮಗಳಲ್ಲಿ ಕನಿಷ್ಠ 204 ನೀರಿನ ಟ್ಯಾಂಕರ್‌ಗಳನ್ನು ನಿಯೋಜಿಸಿದೆ. ಬೆಂಗಳೂರು ಒಂದರಲ್ಲೇ ಬಿಬಿಎಂಪಿಯಿಂದ 120 ಮತ್ತು ಬಿಡಬ್ಲ್ಯುಎಸ್‌ಎಸ್‌ಬಿಯಿಂದ 232 ಟ್ಯಾಂಕರ್‌ಗಳು ನಡೆಯುತ್ತಿರುವ ಬಿಕ್ಕಟ್ಟಿನ ಪರಿಣಾಮವನ್ನು ಕಡಿಮೆ ಮಾಡಲು ಹಗಲಿರುಳು ಕೆಲಸ ಮಾಡುತ್ತಿವೆ. ಅಗತ್ಯವಿರುವಷ್ಟು ಹಣವನ್ನು ನಾವು ಒದಗಿಸುತ್ತೇವೆ ಎಂದು ಅವರು ಹೇಳಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+