ಇಂದು ಬಣ್ಣಗಳ ಹಬ್ಬ ಹೋಳಿ (Holi) ಬಣ್ಣಗಳ ಹೋಗಳಿಯಲ್ಲಿ ಜನರು ಮಿಂದೆದ್ದು ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ಹಬ್ಬ ವಿಜಯದ ಸಂಕೇತವಾಗಿ ಆಚರಣೆಯನ್ನು ಮಾಡಲಾಗುತ್ತದೆ. ಚಳಿಗಾಲದ ಅಂತ್ಯದ ದಿನ ಬೇಸಿಗೆಯ ಆರಂಭದ ಹುಣ್ಣಿಮೆ ಆಗಿದೆ. ಈ ಹಬ್ಬವನ್ನು ಹಿಂದಿಯಲ್ಲಿ 'ಗುಲಾಲ್' ಎಂದು ಕರೆಯುತ್ತಾರೆ. ಆದರೆ ಈ ದಿನದಂದು ಬ್ಯಾಂಕ್ಗಳಿಗೆ ರಜೆ ಇರುತ್ತದೆಯೋ ಎಂಬ ಹೆಚ್ಚಿನ ವಿವರ ನೋಡಿ...
ಹೌದು, ಸಾಲು ಸಾಲು ರಜೆ! ನಾಲ್ಕು ದಿನ ಬ್ಯಾಂಕ್ ಬಂದ್.. ಹೋಳಿ ಸಂದರ್ಭದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ಗಳು ಬಂದ್ ಆಗಿರುತ್ತವೆ.ಆದರೆ ಆಯಾ ರಾಜ್ಯದ ಸಂಪ್ರದಾಯಗಳು ಮತ್ತು ನಿಯಮಗಳ ಪ್ರಕಾರ ಬ್ಯಾಂಕ್ ರಜೆಯ ದಿನಾಂಕವು ಸಹವು ಬದಲಾಗಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಬ್ಯಾಂಕ್ ರಜಾದಿನಗಳನ್ನು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ನಿರ್ಧರ ಮಾಡಬೇಕಾಗುತ್ತದೆ.

2025 ರ ಹೋಳಿ ಸಂದರ್ಭದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ಗಳು ಮುಚ್ಚಿರುತ್ತವೆ. ಆದರೆ ಆಯಾ ರಾಜ್ಯದ ಸಂಪ್ರದಾಯಗಳು ಮತ್ತು ನಿಯಮಗಳ ಪ್ರಕಾರ ಬ್ಯಾಂಕ್ ರಜೆಯ ದಿನಾಂಕವು ಬದಲಾಗಬಹುದು. ಹೋಳಿ ಹಬ್ಬ ಮಾರ್ಚ್ 13 ಮತ್ತು 14 ರಂದು ಬರುತ್ತದೆ. ಈ ಎರಡೂ ದಿನಗಳಲ್ಲಿ ಹೆಚ್ಚಿನ ರಾಜ್ಯಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ.
ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಭೋಪಾಲ್, ಚಂಡೀಗಢ, ಡೆಹ್ರಾಡೂನ್, ಗ್ಯಾಂಗ್ಟಾಕ್, ಗುವಾಹಟಿ, ಹೈದರಾಬಾದ್ (ಆಂಧ್ರಪ್ರದೇಶ), ಹೈದರಾಬಾದ್ (ತೆಲಂಗಾಣ), ಇಟಾನಗರ, ಜೈಪುರ, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ್ , ನವದೆಹಲಿ, ಪಣಜಿ, ಪಾಟ್ನಾ, ಶಿಲಾಂಗ್, ರಾಯ್ಪುರ್, ರಾಯ್ಪುರ್ ಸೇರಿದಂತೆ ನಗರಗಳಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತದೆ.
ಬ್ಯಾಂಕುಗಳು ಯಾವಾಗ ಮುಚ್ಚುತ್ತವೆ..?
ಪ್ರಾದೇಶಿಕ ಮತ್ತು ರಾಷ್ಟ್ರೀಯ ಹಬ್ಬಗಳ ಆಧಾರದ ಮೇಲೆ ದೇಶಾದ್ಯಂತ ಬ್ಯಾಂಕ್ ರಜಾದಿನಗಳು ರಾಜ್ಯಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಹಬ್ಬಗಳ ಹೊರತಾಗಿ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರಗಳಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆದ್ದರಿಂದ, ಗ್ರಾಹಕರು ತಮ್ಮ ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ರಜಾದಿನಗಳ ಪಟ್ಟಿಯನ್ನು ಪರಿಶೀಲನೆ ಮಾಡಬೇಕು.
ಬ್ಯಾಂಕ್ ರಜಾದಿನಗಳನ್ನು ನೀವು ಎಲ್ಲಿ ಪರಿಶೀಲಿಸಬೇಕು?
ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಘೋಷಿಸಿದ ವಾರ್ಷಿಕ ರಜಾ ಕ್ಯಾಲೆಂಡರ್ನಲ್ಲಿ ಎಲ್ಲಾ ಬ್ಯಾಂಕ್ ರಜಾದಿನಗಳನ್ನು ನೋಡಬಹುದು. ಈ ಕಾಯ್ದೆಯು ಚೆಕ್ಗಳು ಮತ್ತು ಪ್ರಾಮಿಸರಿ ನೋಟ್ಗಳ ವಿತರಣೆಗೆ ಸಂಬಂಧಿಸಿದೆ.
ಮಾರ್ಚ್ 14 ರಂದು ಬ್ಯಾಂಕ್ ರಜೆ
ಹೋಳಿ ಹಬ್ಬವು ಬಣ್ಣಗಳ ಹಬ್ಬ. ಹಿಂದೂ ಕ್ಯಾಲೆಂಡರ್ ಪ್ರಕಾರ ಇದು ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಬರುತ್ತದೆ. ಈ ಹಬ್ಬವು ಶ್ರೀಕೃಷ್ಣ ಮತ್ತು ರಾಧೆಯ ನಡುವಿನ ದೈವಿಕ ಪ್ರೀತಿಯನ್ನು ಬಣ್ಣಗಳು ಸಾಕ್ಷಿಯಾಗುತ್ತವೆ.
ಈ ದಿನದಂದು, ಜನರು ಬಣ್ಣಗಳೊಂದಿಗೆ ಆಟವಾಡುತ್ತಾರೆ ವಸಂತಕಾಲದ ಆರಂಭವನ್ನು ಗುರುತಿಸಲು ಸಿಹಿ ತಿನಿಸುಗಳನ್ನು ತಯಾರಿಸುತ್ತಾರೆ.
ಹೋಳಿಕಾ ದಹನ್
ಹೋಳಿಗೆ ಒಂದು ದಿನ ಮೊದಲು ಹೋಳಿಕಾ ದಹನ್ ನಡೆಯುತ್ತದೆ, ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುವ ಪವಿತ್ರ ದೀಪೋತ್ಸವ ಸಮಾರಂಭವಾಗಿದೆ.
ಯಾವೋಸಾಂಗ್ ದಿನ 2
ಯಾವೋಸಾಂಗ್ ದಿನದ 2 ರ ಕಾರಣ ಇಟಾನಗರದ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ. ಪಿಚ್ಕರಿ ಎಂದೂ ಕರೆಯಲ್ಪಡುವ ಈ ಹಬ್ಬವನ್ನು ಮಣಿಪುರದಲ್ಲಿ ಬಣ್ಣಗಳು, ಸಂಗೀತ, ನೃತ್ಯ ಮತ್ತು ಹೋಳಿಯಂತೆಯೇ ಸಾಂಪ್ರದಾಯಿಕ ಕ್ರೀಡೆಗಳೊಂದಿಗೆ ಆಚರಿಸಲಾಗುತ್ತದೆ.
ಮಾರ್ಚ್ 15 ರಂದು ಬ್ಯಾಂಕ್ಗಳಿಗೆ ರಜೆ ಎಲ್ಲಿದೆ?
ಮಾರ್ಚ್ 15, 2025 ಶನಿವಾರ ಮತ್ತು ಅದು ತಿಂಗಳ ಮೂರನೇ ಶನಿವಾರ. ಈ ದಿನ ಕೆಲಸದ ದಿನವಾಗಿರುವುದರಿಂದ, ಹೆಚ್ಚಿನ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ. ಆದರೆ ಕೆಲವು ರಾಜ್ಯಗಳಲ್ಲಿ ಹೋಳಿಕಾ ದಹನ್ ಮತ್ತು ಹೋಳಿ ನಂತರವೂ ಮಾರ್ಚ್ 15 ರಂದು ರಜೆ ಇರಲಿದೆ.
ತ್ರಿಪುರ, ಒಡಿಶಾ ಮತ್ತು ಮಣಿಪುರದಲ್ಲಿ ರಜೆ ಇರಲಿದೆ. ಯಾವೋಸಾಂಗ್ ಹಬ್ಬದ ಕಾರಣ ಮಾರ್ಚ್ 15 ಮಣಿಪುರದಲ್ಲಿ ರಜಾದಿನವಾಗಿದೆ. ಯಾವೋಸಾಂಗ್ ಮಣಿಪುರದ ಸಾಂಪ್ರದಾಯಿಕ ಹಬ್ಬವಾಗಿದ್ದು, ಇದನ್ನು ವಸಂತ ಋತುವಿನ ಆರಂಭವನ್ನು ಗುರುತಿಸಲು ಆಚರಿಸಲಾಗುತ್ತದೆ ಆದ್ದರಿಂದ ಮಾರ್ಚ್ 15 ರಂದು ರಜೆ ಇರುತ್ತದೆ.
ಬ್ಯಾಂಕ್ ರಜೆ ದಿನಗಳಲ್ಲಿ ಆನ್ಲೈನ್ ಸೇವೆಗಳು ಲಭ್ಯ..?
ಬ್ಯಾಂಕ್ ರಜಾದಿನಗಳನ್ನು ಲೆಕ್ಕಿಸದೆ ಎಲ್ಲಾ ಬ್ಯಾಂಕುಗಳು ತಮ್ಮ ಆನ್ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳ ಅಪ್ಲಿಕೇಶನ್ಗಳನ್ನು ನಿರ್ವಹಿಸುತ್ತವೆ. ಅಂತಹ ಸೇವೆಗಳ ಲಭ್ಯತೆಗಾಗಿ ಗ್ರಾಹಕರು ಇತ್ತೀಚಿನ ಅಧಿಸೂಚನೆಗಳನ್ನು ಪರಿಶೀಲಿಸಬೇಕು. ಗ್ರಾಹಕರು ಬ್ಯಾಂಕ್ ಎಟಿಎಂಗಳಿಂದಲೂ ಹಣವನ್ನು ಸಹ ಹಿಂಪಡೆಯಬಹುದು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications