ಇದೇ ಮೊದಲ ಬಾರಿಗೆ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ನಿಂದ ವಿಶಿಷ್ಟ ಪ್ರಯತ್ನವೊಂದು ಮಾಡಲಾಗುತ್ತಿದೆ. 48 ದಿನಗಳ ಅವಧಿಗೆ ಬಡ್ಡಿರಹಿತವಾಗಿ ನಗದು ಸಾಲವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಮತ್ತು ಈ ಸಾಲಕ್ಕಾಗಿ ಆಕರ್ಷಕವಾದ ಬಡ್ಡಿ ದರವನ್ನು ಸಹ ನಿಗದಿ ಮಾಡಲಾಗಿದೆ. ಈ ಸೇವೆಗೆ ಕಳೆದ ಶುಕ್ರವಾರ ಚಾಲನೆ ನೀಡಲಾಗಿದೆ.
ಇದು ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಯೋಜನೆ. ಸದ್ಯಕ್ಕೆ ಕ್ರೆಡಿಟ್ ಕಾರ್ಡ್ ಮೇಲೆ ಏನಾದರೂ ನಗದು ಸಾಲವನ್ನು ಪಡೆದರೆ ಬಡ್ಡಿ ದರ ತುಂಬ ಜಾಸ್ತಿ ಆಗುತ್ತದೆ. ಕ್ರೆಡಿಟ್ ಕಾರ್ಡ್ ಮೂಲಕ ನಗದು ವಿಥ್ ಡ್ರಾ ಮಾಡಿದಲ್ಲಿ ಬ್ಯಾಂಕ್ ಗಳು ಪ್ರತಿ ವಹಿವಾಟಿಗೆ 250ರಿಂದ 450 ರುಪಾಯಿ ಶುಲ್ಕ ವಿಧಿಸುತ್ತವೆ. ಇನ್ನು ನಗದು ಮರುಪಾವತಿ ಮಾಡುವ ತನಕ ತಿಂಗಳಿಗೆ 2.5%ನಿಂದ 3.5% ಬಡ್ಡಿ ಹಾಕುತ್ತವೆ.
ಈಗಾಗಲೇ ಇರುವ ಗ್ರಾಹಕರಿಗೆ ಮಾತ್ರ ಅನ್ವಯ
ನಗದು ಹೊರತಾದ ವಹಿವಾಟಿಗೂ ಬಡ್ಡಿ ಬೀಳುತ್ತದೆ. ಆದರೆ ಆ ವಹಿವಾಟಿಗೆ ನಿರ್ದಿಷ್ಟ ಅವಧಿ ತನಕ ಬಡ್ಡಿ ಹಾಕಲ್ಲ. ಐಡಿಎಫ್ ಸಿ ಫಸ್ಟ್ ಬ್ಯಾಂಕ್ ನಿಂದ ಈ ಹೊಸ ಬಡ್ಡಿರಹಿತ ನಗದು ವಿಥ್ ಡ್ರಾ ಅನುಕೂಲವನ್ನು ಈಗಾಗಲೇ ಇರುವ ಗ್ರಾಹಕರಿಗೆ ಮಾತ್ರ ನೀಡಲಾಗುತ್ತಿದೆ. ಅದು ಕೂಡ ಬ್ಯಾಂಕ್ ನ ಆಹ್ವಾನದ ಮೇರೆಗೆ ಮಾತ್ರ. ಮಾರ್ಚ್ ನಂತರ ಇತರ ಗ್ರಾಹಕರಿಗೂ ವಿಸ್ತರಣೆ ಮಾಡಲಾಗುತ್ತದೆ.
ಒಂದು ವಹಿವಾಟಿಗೆ 250 ರುಪಾಯಿ ಶುಲ್ಕ
ಕ್ರೆಡಿಟ್ ಕಾರ್ಡ್ ಮೂಲಕ ನಗದು ವಿಥ್ ಡ್ರಾ ಮಾಡಿದಾಗ ಎಷ್ಟು ಮೊತ್ತ ಎಂಬ ಮಿತಿಯನ್ನೇನೂ ಗಮನಿಸದೆ ಒಂದು ವಹಿವಾಟಿಗೆ 250 ರುಪಾಯಿ ಶುಲ್ಕ ಹಾಕುವುದಕ್ಕೆ ಐಡಿಎಫ್ ಸಿ ಬ್ಯಾಂಕ್ ಬಯಸಿದೆ. ಇದು ಪ್ರಯೋಗ ಮಾತ್ರ. ಹೇಗೆ ಇದು ಕೆಲಸ ಮಾಡುತ್ತದೆ ಎಂಬುದನ್ನು ನೋಡಬೇಕಿದೆ ಎಂದು ಕೂಡ ಹೇಳಲಾಗಿದೆ.
9ರಿಂದ 36% ತನಕ ಬಡ್ಡಿ ದರ
ಇನ್ನು ಬಡ್ಡಿ ದರದ ವಿಚಾರಕ್ಕೆ ಬಂದಲ್ಲಿ ಸದ್ಯಕ್ಕೆ ನಿಶ್ಚಿತವಾದ 36- 40% ಇದೆ. ಆದರೆ ಹೊಸ ಪ್ರಯೋಗದಲ್ಲಿ ಬಡ್ಡಿ ದರವು 9ರಿಂದ 36% ಇರುತ್ತದೆ. ಗ್ರಾಹಕರ ಸಾಲ ತೀರಿಸುವ ಸ್ವಭಾವ ಹೇಗಿದೆ ಎಂಬುದನ್ನೇ ಮಾನದಂಡವನ್ನಾಗಿ ಇಟ್ಟುಕೊಂಡು ಬಡ್ಡಿ ದರವನ್ನು ನಿರ್ಧರಿಸಲಾಗುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications