ನವದೆಹಲಿ: ಸತತ ನಾಲ್ಕು ಲಾಕ್ಡೌನ್ ಘೋಷಣೆಯಾದ ನಂತರ ಜುಲೈ 1 ರಿಂದ ಅನ್ಲಾಕ್ 2.0 ಚಾಲ್ತಿಯಾಗಿ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಕಳೆದ ಮೂರು ತಿಂಗಳು ಕೊರೊನಾವೈರಸ್ ಪರಿಣಾಮ ಲಾಕ್ಡೌನ್ ಸಂಭವಿಸಿ ಉದ್ಯೋಗ ಪ್ರಮಾಣ ಏಕಾಏಕಿ ಕುಸಿದು ಬಿದ್ದಿತ್ತು. ಇದೀಗ ಆರ್ಥಿಕ ಚಟುವಟಿಕೆಗಳು ಪುನಾರಂಭವಾಗಿರುವುದರಿಂದ ಉದ್ಯೋಗ ಪ್ರಮಾಣ ಗಣನೀಯವಾಗಿ ಸುಧಾರಿಸಿಕೊಳ್ಳುತ್ತಿರುವ ವರದಿಗಳು ಬಂದಿವೆ.
ಮೇ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ ಶೇ 23.48 ಕ್ಕೆ ಹೋಲಿಸಿದರೆ ಜೂನ್ ತಿಂಗಳಲ್ಲಿ ನಿರುದ್ಯೋಗ ದರವು ಶೇ 10.99 ಕ್ಕೆ ಇಳಿದಿದೆ.
ಇದು ದೇಶದ ಉದ್ಯೋಗದ ಸನ್ನಿವೇಶದಲ್ಲಿ ಸುಧಾರಣೆಯ ಲಕ್ಷಣಗಳನ್ನು ತೋರಿಸುತ್ತದೆ ಮತ್ತು ಪೂರ್ವ-ಲಾಕ್ಡೌನ್ ಅವಧಿಗೆ ಮರಳುತ್ತದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಹೇಳಿದೆ. ನಗರ ಪ್ರದೇಶಗಳಲ್ಲಿನ ನಿರುದ್ಯೋಗ ದರವು ಶೇ 12.02 ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಇದು ಶೇ 10.52 ರಷ್ಟಿದೆ.
ಸರಾಸರಿ ಶೇ 25.52 ನಿರುದ್ಯೋಗ
ಮಾರ್ಚ್ 25 ರಂದು ಸರ್ಕಾರವು ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದ ನಂತರ ಭಾರತದ ನಿರುದ್ಯೋಗ ದರವು ಜನವರಿಯಿಂದ ಸರಾಸರಿ ಶೇ 25.52 ರಷ್ಟು ದಾಖಲಿಸಲಾಗಿದೆ. ಮೇ ತಿಂಗಳಲ್ಲಿ ನಿರುದ್ಯೋಗ ದರವು ಶೇ 23.48 ರಷ್ಟಿತ್ತು. ಏಪ್ರಿಲ್ನಲ್ಲಿ ಸುಮಾರು 12.2 ಕೋಟಿ ಉದ್ಯೋಗಗಳು ನಷ್ಟವಾಗಿವೆ.
ದೇಶದಲ್ಲಿ ಉದ್ಯೋಗಿಗಳ ಸಂಖ್ಯೆ 37.3 ಕೋಟಿ
ಸಿಎಮ್ಐಇ ಅಂಕಿಅಂಶಗಳ ಪ್ರಕಾರ ಜೂನ್ನಲ್ಲಿ ದೇಶದಲ್ಲಿ ಉದ್ಯೋಗಿಗಳ ಸಂಖ್ಯೆ 37.3 ಕೋಟಿ ಆಗಿದ್ದರೆ, ಉದ್ಯೋಗವನ್ನು ಹುಡುಕುವವರು 46.1 ಕೋಟಿಯಾಗಿದೆ ಎಂದು ಸಿಎಮ್ಐಇ ಹೇಳುತ್ತದೆ.
ಹರಿಯಾಣದಲ್ಲಿ ಅತಿ ಹೆಚ್ಚು
ಹರಿಯಾಣದಲ್ಲಿ ಅತಿ ಹೆಚ್ಚು ನಿರುದ್ಯೋಗ ದರ ಕಂಡು ಬಂದಿದೆ. ಅಲ್ಲಿ ಶೇ 33.6 ನಿರುದ್ಯೋಗ ರದ ಇದ್ದರೆ ರಷ್ಟಿದ್ದರೆ, ಆ ನಂತರ ತ್ರಿಪುರ 21.3 ಮತ್ತು ಜಾರ್ಖಂಡ್ ಶೇ 21 ರಷ್ಟಿದೆ. ಕರ್ನಾಟಕ, ತಮಿಳುನಾಡಿನಲ್ಲಿ ಕಡಿಮೆ ಪ್ರಮಾಣದ ನಿರುದ್ಯೋಗ ಕಂಡು ಬಂದಿದೆ.
ಲಾಕ್ಡೌನ್ ಪೂರ್ವ ಅವಧಿಗೆ ಚೇತರಿಸಿಕೊಂಡಿದೆ
'ಅನ್ಲಾಕ್ 2.0 ದಿಂದ ನಿರುದ್ಯೋಗ ದರವು ಕುಸಿದಿದೆ ಪ್ರಮಾಣವು ಲಾಕ್ಡೌನ್ ಪೂರ್ವ ಅವಧಿಗೆ ಚೇತರಿಸಿಕೊಂಡಿದೆ' ಎಂದು ಸಿಎಮ್ಐಇ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹೇಶ್ ವ್ಯಾಸ್ ಹೇಳಿದ್ದಾರೆ. ಗ್ರಾಮೀಣ ಭಾರತದಾದ್ಯಂತ ನಿರುದ್ಯೋಗ ದರದಲ್ಲಿ ಭಾರೀ ಸುಧಾರಣೆಯಾಗಿದೆ. ಇದರ ಹಿಂದಿನ ಕಾರಣವನ್ನು ಸರ್ಕಾರವು ಎಂಜಿಎನ್ಆರ್ಇಜಿಎ ಎಂದು ಹೇಳುತ್ತದೆ. ಅಲ್ಲದೇ ಖರ್ಚು ಹೆಚ್ಚಳ ಮತ್ತು ಮುಂಗಾರು ಬಿತ್ತನೆಯ ಹೆಚ್ಚಳದಿಂದ ಉದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ವಿವರಿಸಬಹುದು ಎಂದು ಅವರು ಹೇಳುತ್ತಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications