ಮುಂಬೈ ನಿವಾಸಿ ಮಕರಂದ್ ಪಿ ಆದಿವಿರ್ಕರ್ ಇತ್ತೀಚೆಗೆ ಬಂಧನಕ್ಕೊಳಪಟ್ಟಿದ್ದಾನೆ. ಮುಂಬೈ ವಲಯದ ಮಾದಕ ವಸ್ತು ನಿಯಂತ್ರಣ ತಂಡ ಎನ್ ಸಿಬಿ ಅಧಿಕಾರಿಗಳು ಮಕರಂದ್ ನನ್ನು ಬಂಧಿಸಿದ್ದಾರೆ. ಜನಪ್ರಿಯ ಡಿಜಿಟಲ್ ದುಡ್ಡು ಬಿಟ್ ಕಾಯಿನ್ ಬಳಸಿ ಡ್ರಗ್ಸ್ ಖರೀದಿ, ವ್ಯಾಪಾರದಲ್ಲಿ ತೊಡಗಿದ್ದ ಆರೋಪವನ್ನು ಆದಿವಿರ್ಕರ್ ಹೊತ್ತುಕೊಂಡಿದ್ದಾನೆ.
ನಗದನ್ನು ಕ್ರಿಪ್ಟೋಕರೆನ್ಸಿಯಾಗಿ ಬದಲಾಯಿಸಿಕೊಡುವುದು, ಬಿಟ್ ಕಾಯಿನ್ ಬಳಸಿ ವಹಿವಾಟು ನಡೆಸುವುದು ಎಲ್ಲದ್ದಕ್ಕೂ ಕಮಿಷನ್ ಪಡೆದುಕೊಳ್ಳುತ್ತಿದ್ದ ಆದಿವಿರ್ಕರ್, ಇದರ ಲಾಭದಿಂದ ಎಲ್ ಎಸ್ ಡಿ ಮುಂತಾದ ಡ್ರಗ್ಸ್ ಖರೀದಿಸುತ್ತಿದ್ದ. ಡ್ರಗ್ಸ್ ಖರೀದಿಗಾಗಿ ಡಾರ್ಕ್ ವೆಬ್ ಬಳಸುತ್ತಿದ್ದ ಹಾಗೂ ಡಿಜಿಟಲ್ ದುಡ್ಡು ಮೂಲಕ ವ್ಯವಹಾರ ನಡೆಸುತ್ತಿದ್ದ ಹೀಗಾಗಿ, ಈತನ ವ್ಯವಹಾರ ಗೌಪ್ಯವಾಗಿರುತ್ತಿತ್ತು.
ಅಕ್ರಮ ಚಟುವಟಿಕೆಗಳ ಹಣಕಾಸು ವ್ಯವಹಾರಗಳಿಗೆ ಬಿಟ್ ಕಾಯಿನ್ ಬಳಕೆ ಬಗ್ಗೆ ಪೊಲೀಸ್ ಇಲಾಖೆಗೆ ದೂರು ಬಂದಿತ್ತು. ಆದರೆ, ಈ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಿಟ್ ಕಾಯಿನ್ ಸೇರಿದಂತೆ ಡಿಜಿಟಲ್ ದುಡ್ಡು ಚಲಾವಣೆ ಮಾಡಲು ಕಾನೂನಿನ ಮಾನ್ಯತೆ ಇಲ್ಲ. ಆದರೆ, ಅನೈತಿಕ ಚಟುವಟಿಕೆಗಳಿಗೆ ಬಿಟ್ ಕಾಯಿನ್ ಪ್ರಬಲ ವಹಿವಾಟು ಕರೆನ್ಸಿ ಎನಿಸಿಕೊಂಡಿದೆ.

''ವಾಜಿರ್ ಎಕ್ಸ್ ಎಂಬ ಜನಪ್ರಿಯ ಬಿಟ್ ಕಾಯಿನ್ ವಾಲೆಟ್ ಬಳಸಿ ಡಾರ್ಕ್ ವೆಬ್ ಮೂಲಕ ಡ್ರಗ್ಸ್ ಖರೀದಿ ಅವ್ಯಾಹತವಾಗಿ ನಡೆಯುತ್ತಿದೆ, ಭಾರತದ ಅನೇಕ ಡ್ರಗ್ ಡೀಲರ್ ಗಳು ಇದನ್ನು ಬಳಸುತ್ತಿದ್ದಾರೆ,'' ಎಂದು ಆದಿವಿರ್ಕರ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಆದರೆ, ಆತ ನಮ್ಮ ಕ್ರಿಪ್ಟೋಕರೆನ್ಸಿ ವಿನಿಮಯದ ಕ್ಲೈಂಟ್ ಅಲ್ಲ ಎಂದು ವಾಜಿರ್ ಎಕ್ಸ್ ಪ್ರಕಟಣೆ ನೀಡಿದೆ.
ಜೂನ್ 11, 2021ರಂದು ಎನ್ ಸಿಬಿ ಈ ಬಗ್ಗೆ ವಿವರಣೆ ಕೇಳಿ ವಾಜಿರ್ ಎಕ್ಸ್ ಸಂಸ್ಥೆಗೆ ಇಮೇಲ್ ಕಳಿಸಿದೆ. ಮರುದಿನವೇ ಈ ಬಗ್ಗೆ ವಾಜಿರ್ ಎಕ್ಸ್ ಟ್ವೀಟ್ ಮಾಡಿ, ಆರೋಪಿಗೂ ನಮ್ಮ ಸಂಸ್ಥೆಗೂ ಸಂಬಂಧವೇ ಇಲ್ಲ ಎಂದಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮಲಾಡ್ ಪ್ರದೇಶದ ಮಾರ್ವೆ ರಸ್ತೆ ಖರೋಡಿ ಗ್ರಾಮದಲ್ಲಿ ನಡೆಸಲಾದ ದಾಳಿಯಲ್ಲಿ ಯುರೋಪ್ ಮೂಲದ ವ್ಯಕ್ತಿಯಿಂದ 20 ಎಲ್ ಎಸ್ ಡಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆತ ಕೂಡಾ ಬಿಟ್ ಕಾಯಿನ್ ಬಳಸಿ ಡ್ರಗ್ಸ್ ಖರೀದಿಸಿದ್ದ, ಆದರೆ, ಬಿಟ್ ಕಾಯಿನ್ ಬಳಕೆ ವ್ಯವಹಾರಕ್ಕೆ ಆದಿವಿರ್ಕರ್ ರಂಥವರು ನೆರವಾಗಿದ್ದರು ತಿಳಿದು ಬಂದಿದೆ. ಹೀಗಾಗಿ, ನಗದು, ಕರೆನ್ಸಿ ಪಡೆದುಕೊಂಡು ಬಿಟ್ ಕಾಯಿನ್ ಆಗಿ ಪರಿವರ್ತಿಸಿ ನೀಡುವ ಮಾನ್ಯತೆ ಪಡೆದ ವಿನಿಮಯ ವೇದಿಕೆಗಳನ್ನು ಬಳಸಿಕೊಂಡೇ ಅಕ್ರಮ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications