ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಬೇಕೆಂದರೆ ರೈಲು, ವಿಮಾನ ಪ್ರಯಾಣ ಅಗತ್ಯವಾಗಿದೆ. ಇದು ವೇಗದ ಪ್ರಯಾಣದ ಜೊತೆಗೆ, ಆರಾಮದಾಯಕ ಪ್ರಯಾಣವನ್ನು ಜನರಿಗೆ ನೀಡುತ್ತದೆ. ಇನ್ನು ಭಾರತೀಯ ರೈಲ್ವೇ ಇಲಾಖೆ (IRCTC) ತನ್ನ ಪ್ರಯಾಣಿಕರಿಗಾಗಿ ಇತ್ತೀಚೆಗೆ ಹಲವಾರು ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ಇನ್ನು ಮಹಾಮಾರಿ ಕೊರೊನಾ ನಂತರವಂತೂ ಭಾರತೀಯ ರೈಲ್ವೇ (Indian Railways) ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೊಂದು ಆಹಾರ.

ಭಾರತೀಯ ರೈಲ್ವೇಯು ರೈಲುಗಳಲ್ಲಿನ ಆಹಾರ ಆಯ್ಕೆಗಳ ವಿಚಾರದಲ್ಲಿ ಪ್ರಯಾಣಿಕರಿಗೆ ಇದೀಗ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿದೆ. ಕೋವಿಡ್ ನಂತರ, ಪ್ರಯಾಣಿಕರಿಗೆ ರೈಲಿನಲ್ಲಿ ಊಟದ ಆಯ್ಕೆಗಳು ಸ್ವಯಂ ಆಯ್ಕೆಯಾಗಿಬಿಟ್ಟಿದೆ. ಅಂದರೆ ಆನ್ಲೈನ್ನಲ್ಲಿ ರೈಲು ಟಿಕೆಟ್ ಕಾಯ್ದಿರಿಸುವವರು ಟಿಕೆಟ್ ಬುಕ್ ಮಾಡುವಾಗಲೇ ಊಟ ಬೇಕೋ ಬೇಡವೋ ಎಂಬುದನ್ನು ಮೊದಲೇ ಆಯ್ಕೆ ಮಾಡಬಹುದು.
ರಾಜಧಾನಿ ಎಕ್ಸ್ಪ್ರೆಸ್, ಶತಾಬ್ದಿ ಎಕ್ಸ್ಪ್ರೆಸ್ ಮತ್ತು ವಂದೇ ಭಾರತ್ ಎಕ್ಸ್ಪ್ರೆಸ್ನಂತಹ ಪ್ರೀಮಿಯಂ ರೈಲುಗಳಲ್ಲಿ, ಟಿಕೆಟ್ ದರದಲ್ಲೇ ಆಹಾರ ಶುಲ್ಕಗಳು ಸಹ ಸೇರಿರುತ್ತವೆ. ಆದರೂ, ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಊಟವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಆರಂಭದಲ್ಲಿ ಟಿಕೆಟ್ ಮಾಡುವಾಗ ಆಹಾರ ಬೇಡ ಎಂದು ಹೇಳಿದರೂ, ಪ್ರಯಾಣದ ಸಮಯದಲ್ಲಿ ಆಹಾರ ಬೇಕು ಎಂದಾದರೆ, ಆರ್ಡರ್ ಮಾಡುವ ಅವಕಾಶ ಇರುತ್ತದೆ.
ಪ್ರಯಾಣಿಕರಿಗೆ ಮೊದಲ ಆದ್ಯತೆ
ಪ್ರಯಾಣಿಕರು ಊಟವನ್ನು ಆರ್ಡರ್ ಮಾಡಿದರೆ ಅಥವಾ ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ ಮೊದಲೇ ಬುಕ್ ಮಾಡಿದ್ದರೆ, ಕ್ಯಾಟರಿಂಗ್ ಶುಲ್ಕಗಳನ್ನು ಒಟ್ಟು ಟಿಕೆಟ್ ದರಕ್ಕೆ ಸೇರಿಸಲಾಗುತ್ತದೆ. ಒಂದು ವೇಳೆ ಊಟ ಬೇಡ ಎಂದಾದರೆ, ಊಟದ ಶುಲ್ಕಗಳನ್ನು ಮೊದಲೇ ಟಿಕೆಟ್ ದರದಿಂದ ಕಡಿತಗೊಳಿಸಲಾಗುತ್ತದೆ. ಈ ಮೂಲಕ, ಪ್ರಯಾಣಿಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಆಹಾರ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯವಿದೆ.
ಉಚಿತ ನೀರಿನ ಬಾಟಲ್ ಸಿಗುತ್ತಾ?
ರಾಜಧಾನಿ ಮತ್ತು ಇತರ ಪ್ರೀಮಿಯಂ ರೈಲುಗಳಲ್ಲಿ ಉಚಿತ ಒಂದು ಲೀಟರ್ ರೈಲ್ ನೀರ್ ಬಾಟಲಿ ನೀಡುವ ಬಗ್ಗೆ ಪ್ರಯಾಣಿಕರಿಗೆ ಭಾರೀ ಗೊಂದಲವಿದೆ. ಊಟದ ಆಯ್ಕೆ ಸ್ವಇಚ್ಛೆಯಾಗಿರುವುದರಿಂದ, 'ಊಟ ಬೇಡ' ಎಂಬ ಆಯ್ಕೆಯನ್ನು ನೀಡಿದರೆ ಉಚಿತ ನೀರಿನ ಬಾಟಲಿ ಸಿಗುತ್ತಾ? ಎಂಬ ಪ್ರಶ್ನೆ ಬರುತ್ತದೆ. ಈ ಉಚಿತ ನೀರಿನ ಬಾಟಲಿ ಊಟದ ಆಯ್ಕೆಗೆ ಸಂಬಂಧಿಸಿದ್ದೇ ಅಥವಾ ಎಲ್ಲ ಪ್ರಯಾಣಿಕರಿಗೂ ಸಿಗುತ್ತಾ ಎಂಬ ಪ್ರಶ್ನೆ ಇತ್ತು.
ಈ ಕುರಿತು ಮಾಧ್ಯಮವೊಂದಕ್ಕೆ ಹಿರಿಯ ಐಆರ್ಸಿಟಿಸಿ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದು, "ಪ್ರಯಾಣಿಕರು ಊಟವನ್ನು ಆಯ್ಕೆ ಮಾಡಲಿ ಅಥವಾ ಮಾಡದೇ ಇರಲಿ, ಎಲ್ಲರಿಗೂ ಉಚಿತವಾಗಿ ನೀರಿನ ಬಾಟಲಿಯನ್ನು ನೀಡಲಾಗುತ್ತದೆ" ಎಂದು ಹೇಳಿದ್ದಾರೆ. ಆದ್ದರಿಂದ ನೀರಿನ ಬಾಟಲಿಗೂ, ಆಹಾರದ ಆಯ್ಕೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ.
ಊಟ ಖರೀದಿಸಲೇಬೇಕಾ?
ಕಳೆದ ತಿಂಗಳು, ರಾಜಧಾನಿ ಎಕ್ಸ್ಪ್ರೆಸ್, ಶತಾಬ್ದಿ ಎಕ್ಸ್ಪ್ರೆಸ್ ಮತ್ತು ವಂದೇ ಭಾರತ್ ಎಕ್ಸ್ಪ್ರೆಸ್ನಂತಹ ಪ್ರೀಮಿಯಂ ರೈಲುಗಳಲ್ಲಿ ಊಟವನ್ನು ಕಡ್ಡಾಯಗೊಳಿಸಲಾಗಿದೆ ಎಂಬ ವದಂತಿ ಇತ್ತು. ಐಆರ್ಸಿಟಿಸಿ ಅಪ್ಲಿಕೇಶನ್ ಮತ್ತು ವೆಬ್ಸೈಟ್ನಲ್ಲಿ ಟಿಕೆಟ್ ಬುಕ್ ಮಾಡುವಾಗ ಊಟವನ್ನು ಕಡ್ಡಾಯವಾಗಿ ಆಯ್ಕೆ ಮಾಡಲೇಬೇಕು ಎಂಬ ಸುದ್ದಿಗಳು ಹರಿದಾಡಿತ್ತು. ಆದ್ರೆ ಇದೀಗ. ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ಪ್ರೀಮಿಯಂ ರೈಲುಗಳಲ್ಲಿ ಟಿಕೆಟ್ ಬುಕ್ ಮಾಡುವಾಗ 'ಆಹಾರ ಬೇಡ' ಆಯ್ಕೆ ಇನ್ನೂ ಲಭ್ಯವಿದೆ, ಅದರ ಸ್ಥಾನದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.
More From GoodReturns

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Rapido Ownly: ರ್ಯಾಪಿಡೋದಿಂದ ಹೊಸ ಫುಡ್ ಡೆಲಿವರಿ ಆಪ್ ಲಾಂಚ್! ಏನಿದರ ವಿಶೇಷತೆ?

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ



Click it and Unblock the Notifications