ಷೇರು ಮಾರ್ಕೆಟ್ ಬಗ್ಗೆ ಜಗತ್ತಿನಾದ್ಯಂತ ಹೆಸರಾದ ಹೂಡಿಕೆದಾರ ವಾರೆನ್ ಬಫೆಟ್ ಏನು ಹೇಳಿದ್ದಾರೆ ಗೊತ್ತಾ? "ಉಳಿದವರೆಲ್ಲ ಅತ್ಯಾಸೆ ಪಡುವಾಗ ನೀವು ಭಯ ಪಡಬೇಕು, ಹಾಗೇ ಉಳಿದವರು ಭಯ ಪಡುವಾಗ ನೀವು ಆಸೆ ಪಡಬೇಕು" ಎಂದಿದ್ದಾರೆ.
ಈಗಿನ ಷೇರು ಮಾರುಕಟ್ಟೆ ನೋಡಿ ಎಲ್ಲರೂ ಭಯ ಪಡುತ್ತಿದ್ದಾರೆ. ಹಾಗಿದ್ದರೆ ಹೂಡಿಕೆ ಮಾಡುವ ಉದ್ದೇಶ ಇರುವವರು ಏನು ಮಾಡಬೇಕು? ಈ ವಿಚಾರವಾಗಿ ಕನ್ನಡ ಗುಡ್ ರಿಟರ್ನ್ಸ್ ನಿಂದ ಕೆಲವು ಷೇರು ದಲ್ಲಾಳಿಗಳು ಹಾಗೂ ಹೂಡಿಕೆ ಸಲಹೆಗಾರರನ್ನು ಮಾತನಾಡಿಸಲಾಗಿದ್ದು, ಅವರ ಅಭಿಪ್ರಾಯಗಳನ್ನು ದಾಖಲಿಸಲಾಗುತ್ತಿದೆ.
ಸದ್ಯದ ಸನ್ನಿವೇಶದಲ್ಲಿ ಷೇರು ಮಾರ್ಕೆಟ್ ನಲ್ಲಿ ಹಣ ಹೂಡಬಹುದಾ? ಯಾವ ಷೇರುಗಳನ್ನು ಖರೀದಿಸಬೇಕು? ಯಾವ ಸ್ಟ್ರಾಟೆಜಿ ಇರಬೇಕು? ಇತ್ಯಾದಿ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರ ಹೀಗಿದೆ.
ಬ್ಲ್ಯೂ ಚಿಪ್ ಷೇರುಗಳನ್ನು ಆರಿಸಿಕೊಳ್ಳಬಹುದು
ಈಗಿನ ಸನ್ನಿವೇಶದಲ್ಲಿ ಬ್ಲ್ಯೂಚಿಪ್ ಷೇರುಗಳು ನಿಮ್ಮ ಆಯ್ಕೆಯಾಗಿರಲಿ. ರಿಲಯನ್ಸ್, ಎಲ್ ಅಂಡ್ ಟಿ, ಇನ್ಫೋಸಿಸ್, ಟಿಸಿಎಸ್, ಹಿಂದೂಸ್ತಾನ್ ಯುನಿಲಿವರ್... ಇಂಥ ಷೇರುಗಳ ಬೆಲೆಯಲ್ಲಿ ಕಡಿಮೆಯಾಗಿರುವುದು ಹೌದು. ಮಾರ್ಕೆಟ್ ಮೇಲಕ್ಕೆ ಏರಲು ಆರಂಭವಾಗುತ್ತಿದ್ದಂತೆ ಇವುಗಳು ಸಹ ಏರಿಕೆ ಕಾಣಲು ಶುರುವಾಗುತ್ತವೆ. ಇನ್ನು ಮೂಲಭೂತವಾಗಿ ಕಂಪೆನಿಗಳ ಗುಣಮಟ್ಟ ಚೆನ್ನಾಗಿರುವುದರಿಂದ ಒಂದು ವೇಳೆ ಖರೀದಿ ಮಾಡಿದ ಬೆಲೆಗಿಂತ ಮತ್ತೂ ಕುಸಿತ ಕಂಡರೆ ಹೆದರುವ ಅಗತ್ಯ ಇಲ್ಲ. ಉದಾಹರಣೆಗೆ, ಐವತ್ತು ಷೇರು ಖರೀದಿ ಮಾಡಬೇಕು ಅಂದುಕೊಂಡಿದ್ದಲ್ಲಿ 15-15-20 ಹೀಗೆ ಬೆಲೆ ಇಳಿಕೆ- ಏರಿಕೆ ಗಮನಿಸಿ, ಸ್ವಲ್ಪ ಪ್ರಮಾಣದಲ್ಲಿ ಖರೀದಿಯನ್ನು ಶುರು ಮಾಡಬಹುದು. ಇನ್ನು ಒಂದೇ ಕಂಪೆನಿಯ ಮೇಲೆ ಹಣ ಹೂಡುವುದಕ್ಕಿಂತ ವಿವಿಧ ಕ್ಷೇತ್ರದ ಕಂಪೆನಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಉದಾ: ಫಾರ್ಮಾಸ್ಯುಟಿಕಲ್ಸ್, ಐಟಿ, ಎಫ್ ಎಂಸಿಜಿ... ಹೀಗೆ.
ಕಂಪೆನಿಯ ಇತಿಹಾಸವನ್ನು ತಿಳಿದುಕೊಳ್ಳಿ
ಇನ್ನು ಖರೀದಿ ಮಾಡಬೇಕಾದ ಷೇರು ಯಾವ ಕಂಪೆನಿಯದು ಎಂದು ಗೊತ್ತಾದ ಮೇಲೆ ಆ ಕಂಪೆನಿಯ ಇತಿಹಾಸವನ್ನು ಗಮನಿಸಿ. ಅದು ಈವರೆಗೆ ನೀಡಿದ ಡಿವಿಡೆಂಡ್ ಯಾವ ಪ್ರಮಾಣದ್ದು? ಬೋನಸ್ ಷೇರು ನೀಡಲಾಗಿದೆಯಾ? ಕಂಪೆನಿಯ ಆರ್ಥಿಕ ಸ್ಥಿತಿ ಹೇಗಿದೆ? ಮುಖ್ಯವಾಗಿ ಸಾಲದ ಪ್ರಮಾಣ ಎಷ್ಟಿದೆ, ಪ್ರವರ್ತಕರು ಷೇರುಗಳನ್ನು ಅಡಮಾನ ಮಾಡಿದ್ದಾರಾ ಇತ್ಯಾದಿ ವಿಷಯಗಳನ್ನು ಗಮನಿಸಿ. ಸಾಧ್ಯವಾದಲ್ಲಿ ಕಂಪೆನಿ ಆಡಳಿತ ಮಂಡಳಿ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಿ. ಆ ಕಂಪೆನಿ ಮಾಡುತ್ತಿರುವ ವ್ಯವಹಾರ ಯಾವುದಕ್ಕೆ ಸಂಬಂಧಿಸಿದ್ದು ಎಂಬುದು ಸಹ ಮುಖ್ಯವಾಗುತ್ತದೆ. ಏಕೆಂದರೆ ಎನ್ ಬಿಎಫ್ ಸಿ (ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪೆನಿ), ವಿಮಾನಯಾನ, ಬ್ಯಾಂಕಿಂಗ್, ವಾಹನ ಹಾಗೂ ಉಕ್ಕು ಉತ್ಪಾದನೆ ಮಾಡುವ ಕಂಪೆನಿಗಳು ಕಷ್ಟದಲ್ಲಿವೆ. ಆದ್ದರಿಂದ ಅಂಥ ಕಂಪೆನಿಗಳ ಷೇರುಗಳಿಂದ ಸದ್ಯಕ್ಕೆ ದೂರ ಇರುವುದು ಉತ್ತಮ.
ನಿರೀಕ್ಷಿತ ಲಾಭ ಬಂದಲ್ಲಿ ತೆಗೆದುಕೊಳ್ಳಿ
ಹೂಡಿಕೆ ಅಂತ ಮಾಡುವುದು ದೀರ್ಘಾವಧಿಗೆ ಎಂಬುದೇನೋ ನಿಜ. ಆದರೆ ನಿರೀಕ್ಷೆ ಮಾಡಿದಷ್ಟು ಲಾಭ ಅಲ್ಪಾವಧಿಯಲ್ಲೇ ಬಂದಲ್ಲಿ ಷೇರುಗಳನ್ನು ಮಾರಿ, ಲಾಭ ತೆಗೆದುಕೊಳ್ಳುವುದು ಉತ್ತಮ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಮಾರ್ಕೆಟ್ ಏರಿಳಿತ ವಿಪರೀತ ವೇಗವಾಗಿದೆ. ಆದ್ದರಿಂದ ಲಾಭ ಬಂದ ಮೇಲೆ ದೀರ್ಘಾವಧಿ ಎಂದು ಕಾಯುತ್ತಾ ಕೂರುವುದು ಬುದ್ಧಿವಂತಿಕೆ ಅಲ್ಲ. ಷೇರು ಖರೀದಿ ಮಾಡುವಾಗಲೇ ಎಷ್ಟು ಲಾಭ ಬಂದರೆ ಮಾರುವುದು ಎಂಬುದನ್ನು ನಿರ್ಧರಿಸಿಕೊಂಡಿರಿ. ಅಷ್ಟು ಪ್ರಮಾಣದಲ್ಲಿ ಬಂದ ನಂತರ ಷೇರು ಮಾರಿಬಿಡಿ. ಇನ್ನು ಖರೀದಿ- ಮಾರಾಟ ಎರಡೂ ವಿಚಾರಕ್ಕೆ ಸಂಬಂಧಿಸಿದ ಹಾಗೆ ವಾಸ್ತವವನ್ನು ಮಾತ್ರ ನಂಬಿ, ಊಹಾಪೋಹವನ್ನಲ್ಲ. ವದಂತಿಗಳಿಗೆ ಕಿವಿ ಕೊಟ್ಟರೆ ನಷ್ಟದ ಪಾಲಾಗಬೇಕಾಗುತ್ತದೆ. ಅದೇ ರೀತಿಯಲ್ಲಿ ಹಣ ತೊಡಗಿಸಿದ ಹಾಗೂ ತೊಡಗಿಸಬೇಕಾದ ಕಂಪೆನಿಯಲ್ಲಿ ಆಗುವ ಬೆಳವಣಿಗೆಗಳ ಬಗ್ಗೆಯೂ ಲಕ್ಷ್ಯ ಇರಲಿ.
ಅವಕಾಶಗಳಿಗೆ ಯಾವತ್ತೂ ಕೊರತೆ ಇಲ್ಲ
ಷೇರು ಮಾರುಕಟ್ಟೆಯಲ್ಲಿ ಅವಕಾಶಗಳಿಗೆ ಯಾವಾಗಲೂ ಕೊರತೆ ಇರುವುದಿಲ್ಲ. ಮಾರ್ಕೆಟ್ ಬಿದ್ದಿದೆ ಎಂಬ ಕಾರಣಕ್ಕೆ ಸಾಲ ಮಾಡಿ, ಬಡ್ಡಿ ಕಟ್ಟಿ ಹಣವನ್ನು ತೊಡಗಿಸುವುದು ಬುದ್ಧಿವಂತಿಕೆ ಅಲ್ಲ. ಉಳಿತಾಯದ ಹಣವನ್ನು ಸ್ವಲ್ಪ ಪ್ರಮಾಣದಲ್ಲಿ (ಅದಕ್ಕೂ ಇಂತಿಷ್ಟು ಎಂಬ ಮಿತಿ ಅಗತ್ಯ) ಹೂಡಿಕೆ ಮಾಡಿ. ಅದನ್ನು ಬಿಟ್ಟು, ಬಡ್ಡಿಗೆ ಸಾಲ ತಂದು ಹಣ ಹೂಡಿದರೆ ಅದು ಒತ್ತಡಕ್ಕೆ ಕಾರಣವಾಗುತ್ತದೆ. ಇನ್ನು ಷೇರು ಮಾರ್ಕೆಟ್ ಹೇಗೆ ಏರಿದರೆ ಯಾವ ಎತ್ತರಕ್ಕೆ ಬೇಕಾದರೂ ಹೋಗುವ ಸಾಧ್ಯತೆ ಇದೆಯೋ, ಅದೇ ರೀತಿ ತಳ ಕಚ್ಚಿದರೂ ಯಾವ ಮಟ್ಟಕ್ಕಾದರೂ ಕುಸಿಯಬಹುದು. ಯಾವುದಕ್ಕೂ ಇದೇ ಮಿತಿ ಎಂಬುದಿಲ್ಲ. ಇನ್ನು ಯಾವುದೇ ಕೆಲಸ ಮಾಡುವ ಮುನ್ನ ಅದರ ಬಗ್ಗೆ ತಿಳಿವಳಿಕೆ ಪಡೆದಿರಬೇಕು, ಅಗತ್ಯ ಕಂಡುಬಂದಲ್ಲಿ ತಜ್ಞರು- ಅನುಭವಿಗಳ ಸಲಹೆ ಪಡೆಯಬೇಕು. ಆದ್ದರಿಂದ ಹೂಡಿಕೆ ತಜ್ಞರ ಸಲಹೆ- ಮಾರ್ಗದರ್ಶನ ಪಡೆದುಕೊಳ್ಳಿ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications