ಚೆನ್ನೈ, ಮಾರ್ಚ್ 7: ಚುನಾವಣೆ ಎದುರಿಸಲು ಸಜ್ಜಾಗಿರುವ ತಮಿಳುನಾಡಿನಲ್ಲಿ ಅತಿ ದೊಡ್ಡ ಆದಾಯ ತೆರಿಗೆ ದಾಳಿ ನಡೆದಿದೆ. ದಕ್ಷಿಣ ಭಾರತದ ಅತಿದೊಡ್ಡ ಆಭರಣ ಮಳಿಗೆ ಮೇಲೆ ಭಾನುವಾರ ಐಟಿ ದಾಳಿ ನಡೆಸಲಾಗಿದೆ.
ಅತಿದೊಡ್ಡ ಚಿನ್ನದ ಮಳಿಗೆ ಜಾಲ ಹೊಂದಿರುವ ಸಂಸ್ಥೆ ಮೇಲೆ ದಾಳಿ ನಡೆಸಲಾಗಿದ್ದು, ಸುಮಾರು 1,000 ಕೋಟಿ ರು ಮೌಲ್ಯದ ಅಕ್ರಮ ಆದಾಯ ಗಳಿಕೆ ಪತ್ತೆಯಾಗಿದೆ, 1.2 ಕೋಟಿ ರು ವಶ ಪಡಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ. ಆದರೆ, ದಾಳಿಗೊಳಗಾದ ವ್ಯಕ್ತಿಗಳ ಬಗ್ಗೆ ಇನ್ನೂ ವಿವರ ಬಹಿರಂಗಪಡಿಸಿಲ್ಲ.
ಚೆನ್ನೈ ಅಲ್ಲದೆ, ಕೊಯಮತ್ತೂರು, ಮದುರೈ, ತಿರುಚನಾಪಲ್ಲಿ, ತ್ರಿಶ್ಶೂರ್, ನೆಲ್ಲೂರ್, ಜೈಪುರ, ಮುಂಬೈ, ಇಂದೋರ್ ನಲ್ಲೂ ಕಳೆದ ಕೆಲ ದಿನಗಳಿಂದ ಐಟಿ ದಾಳಿ ನಡೆದಿದೆ.

ಆಭರಣ ಮಳಿಗೆಗಳಲ್ಲಿ ನಗದು ವಹಿವಾಟು, ಬೋಗಸ್ ನಗದು ಕ್ರೆಡಿಟ್, ಬೋಗಸ್ ಖಾತೆಗಳಿಂದ ಕ್ರೆಡಿಟ್ ಬಳಕೆ ಹೀಗೆ ನಾನಾ ರೀತಿಯಲ್ಲಿ ಅಕ್ರಮವಾಗಿ ಕಲೆ ಹಾಕಿದ ಮೊತ್ತ ಸಾವಿರಾರು ಕೋಟಿ ರು ದಾಟುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರಿಯ ನೇರ ತೆರಿಗೆ ಬೋರ್ಡ್ (ಸಿಬಿಡಿಟಿ) ಪ್ರಕಾರ, ಸ್ಥಳೀಯ ಸಣ್ಣ ಪುಟ್ಟ ಹಣಕಾಸು ಸಂಸ್ಥೆಗಳನ್ನು ಬಳಸಿಕೊಂಡು, ರಿಯಲ್ ಎಸ್ಟೇಟ್ ಬಿಲ್ಡರ್ಸ್ ಗಳಿಗೆ ಈ ಮೊತ್ತ ತಲುಪುತ್ತಿದ್ದು, ಭೂಮಿ ಮೇಲೆ ಹೂಡಿಕೆಯಾಗುತ್ತಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
More From GoodReturns

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Middle East tensions: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ…ಈ ಹೊತ್ತಲ್ಲಿ ಚಿನ್ನ-ಬೆಳ್ಳಿ ಹೂಡಿಕೆದಾರರು ಏನು ಮಾಡಬೇಕು?



Click it and Unblock the Notifications