ಜಪಾನ್ ನ ಉತ್ಪಾದಕರು ಚೀನಾದಿಂದ ಹೊರಗೆ ಅಂದರೆ, ಭಾರತ ಅಥವಾ ಬಾಂಗ್ಲಾದೇಶ್ ಗೆ ಉತ್ಪಾದನಾ ಘಟಕವನ್ನು ಸ್ಥಳಾಂತರ ಮಾಡಿದರೆ ಅಂಥ ಕಂಪೆನಿಗಳಿಗೆ ಪ್ರೋತ್ಸಾಹ ಧನ ನೀಡಲು ತೀರ್ಮಾನ ಮಾಡಿದೆ. ಸರ್ಕಾರದ ವಿಸ್ತರಣೆ ಕಾರ್ಯಕ್ರಮದ ಭಾಗವಾಗಿ ಪೂರೈಕೆ ಜಾಲದಲ್ಲಿ ವೈವಿಧ್ಯ ತರಲು ಮುಂದಾಗಿದೆ.
ಒಂದು ನಿರ್ದಿಷ್ಟ ಪ್ರಾದೇಶಿಕ ವಲಯದ ಮೇಲೆ ಅವಲಂಬನೆ ಆಗದಿರಲು ಉದ್ದೇಶ ಹೊಂದಿರುವ ಜಪಾನ್, ತುರ್ತು ಸಮಯದಲ್ಲೂ ವೈದ್ಯಕೀಯ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಬಿಡಿಭಾಗಗಳು ಸ್ಥಿರವಾಗಿ ಪೂರೈಕೆ ಆಗುವ ನಿಟ್ಟಿನಲ್ಲಿ ಆಲೋಚಿಸುತ್ತಿದೆ ಎಂದು ನಿಕೈ ಏಷ್ಯನ್ ರಿವ್ಯೂವ್ ವರದಿ ಮಾಡಿದೆ.
2350 ಕೋಟಿ ಯೆನ್ ಮೀಸಲು
ಜಪಾನ್ ಸರ್ಕಾರವು 2350 ಕೋಟಿ ಯೆನ್ (2.21 ಕೋಟಿ USD) ಹಣವನ್ನು 2020ನೇ ಇಸವಿಯ ಪೂರಕ ಬಜೆಟ್ ನಲ್ಲಿ ಇದಕ್ಕಾಗಿ ಮೀಸಲಿಡಲು ನಿರ್ಧರಿಸಿದೆ. ಜಪಾನ್ ಮೂಲದ ಕಂಪೆನಿಗಳು ASEAN ವಲಯದಾದ್ಯಂತ ಉತ್ಪಾದನಾ ಘಟಕಗಳನ್ನು ಶುರು ಮಾಡುವುದಕ್ಕೆ ಉತ್ತೇಜನ ನೀಡುವುದು ಪ್ರೋತ್ಸಾಹ ಧನ ಕೊಡುವುದರ ಉದ್ದೇಶವಾಗಿದೆ.
ಎರಡನೇ ಹಂತದ ಅರ್ಜಿ ಸೆಪ್ಟೆಂಬರ್ 3ರಿಂದ
ಎರಡನೇ ಹಂತದ ಅರ್ಜಿಗಳನ್ನು ಸ್ವೀಕರಿಸುವ ಕಾರ್ಯ ಸೆಪ್ಟೆಂಬರ್ 3ರಿಂದ ಶುರುವಾಗಿದೆ. ASEAN- ಜಪಾನ್ ಪೂರೈಕೆ ಜಾಲಕ್ಕೆ ಕೊಡುಗೆ ನೀಡುವ ಯೋಜನೆಗಳನ್ನು ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಅವುಗಳ ಉತ್ಪಾದನಾ ಘಟಕಗಳನ್ನು ಭಾರತ ಹಾಗೂ ಬಾಂಗ್ಲಾದೇಶ್ ನಲ್ಲಿ ಶುರು ಮಾಡುವ ಉದ್ದೇಶ ಹೊಂದಿದೆ ಎಂದು ಭಾವಿಸಲಾಗುತ್ತದೆ.
ಚೀನಾದ ಮೇಲೆ ಅವಲಂಬನೆ
ಸದ್ಯಕ್ಕೆ ಪೂರೈಕೆ ಜಾಲದ ಜಪಾನ್ ಕಂಪೆನಿಗಳು ಬಹುವಾಗಿ ಚೀನಾದ ಮೇಲೆ ಅವಲಂಬಿತವಾಗಿವೆ. ಕೊರೊನಾ ಸಂದರ್ಭದಲ್ಲಿ ಪೂರೈಕೆ ಕಡಿತವಾಗಿತ್ತು. ಅಂದ ಹಾಗೆ ಜಪಾನ್ ನಿಂದ ಮೊದಲ ಹಂತದಲ್ಲಿ ಪ್ರೋತ್ಸಾಹ ಧನ ವಿತರಣೆಗೆ ಅರ್ಜಿ ಸ್ವೀಕೃತಿ ಜೂನ್ ನಲ್ಲಿ ಕೊನೆಯಾಗಿತ್ತು. ಮೂವತ್ತು ಉತ್ಪಾದನಾ ಯೋಜನೆಗಳಿಗೆ ಅನುಮತಿ ಸಿಕ್ಕಿತ್ತು. ಅದರಲ್ಲಿ ಹೋಯಾಸ್ ಮ್ಯಾನುಫ್ಯಾಕ್ಚರಿಂಗ್ ಸಹ ಸೇರಿತ್ತು. ಅದು ಎಲೆಕ್ಟ್ರಾನಿಕ್ ಬಿಡಿ ಭಾಗಗಳನ್ನು ಉತ್ಪಾದಿಸುವ ಕಂಪೆನಿ. ವಿಯೆಟ್ನಾಂ ಮತ್ತು ಲಾವೋಸ್ ನಲ್ಲಿ ಆರಂಭಿಸಿತು. ಅದಕ್ಕಾಗಿ 10 ಬಿಲಿಯನ್ ಯೆನ್ ಪ್ರೋತ್ಸಾಹ ಧನ ಸಿಕ್ಕಿತು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications