ಬೆಂಗಳೂರು, ಜನವರಿ 10: ಬೆಂಗಳೂರಿನಲ್ಲಿ 10 ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ಗಳನ್ನು ಓಡಿಸುವ ಪ್ರಸ್ತಾವನೆಗೆ ಕರ್ನಾಟಕ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಬಸ್ಗಳು ಪುನರಾಗಮನವಾಗಲಿವೆ. ಬಿಎಂಟಿಸಿ ಶೀಘ್ರದಲ್ಲೇ ಟೆಂಡರ್ಗಳನ್ನು ಕರೆಯಲಿದೆ. ನಗರದಲ್ಲಿ ಐದು ಮಾರ್ಗಗಳನ್ನು ಈ ಬಸ್ಗಳಿಗಾಗಿ ಯೋಜಿಸಲಾಗಿದೆ. ಹೆಚ್ಚಿನ ಜನಸಂದಣಿ ಇರುವ ರಸ್ತೆಗಳಲ್ಲಿ ಬಸ್ಗಳನ್ನು ಓಡಿಸುವುದು ಇದರ ಉದ್ದೇಶವಾಗಿದೆ ಎಂದು ಘೋಷಿಸಿದ್ದರು.

ಡಬಲ್ ಡೆಕ್ಕರ್ ಬಸ್ಗಳು ಅಂಡರ್ಪಾಸ್ಗಳು ಮತ್ತು ಇತರ ಅಡೆತಡೆಗಳನ್ನು ತಪ್ಪಿಸುವ ರೀತಿಯಲ್ಲಿ ಮಾರ್ಗಗಳನ್ನು ಯೋಜಿಸಬೇಕಾಗುತ್ತದೆ. ಇದು ಪ್ರವಾಸಿಗರಿಗೆ ಸಹಾಯ ಮಾಡುತ್ತದೆ. ನಾವು ಚಿಕ್ಕವರಿದ್ದಾಗ ಇಂತಹ ಬಸ್ಸುಗಳು ನಗರದಲ್ಲಿ ಓಡುತ್ತಿದ್ದವು. ಯಾರೋ ನನಗೆ ಜಪಾನೀಸ್ ಮಾದರಿ (ಬಸ್ಸಿನ) ಕಳುಹಿಸಿದ್ದಾರೆ. ಮಾದರಿಯನ್ನು ಅನುಕರಿಸಲು ನಾನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರನ್ನು ಕೇಳಿದ್ದೇನೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಏತನ್ಮಧ್ಯೆ, ಬೆಂಗಳೂರಿನಲ್ಲಿ 120 ನಾನ್ ಎಸಿ ಎಲೆಕ್ಟ್ರಿಕ್ ಬಸ್ಗಳಿಗೆ ಬಿಡ್ಗಳನ್ನು ಆಹ್ವಾನಿಸುವ ಟೆಂಡರ್ಗಳನ್ನು ಕರೆಯಲು ಬಿಎಂಟಿಸಿ ಸಿದ್ಧವಾಗಿದೆ. ಬಸ್ಗಳಲ್ಲಿ ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಮ್ಯಾನೇಜ್ಮೆಂಟ್ ಸಿಸ್ಟಮ್, ಪ್ಯಾಸೆಂಜರ್ ಡಿಸ್ಪ್ಲೇ ಬೋರ್ಡ್ಗಳು, ಸಿಸಿಟಿವಿ ವ್ಯವಸ್ಥೆಗಳು ಮತ್ತು ಪ್ಯಾನಿಕ್ ಬಟನ್ಗಳು ಇತ್ಯಾದಿಗಳನ್ನು ಅಳವಡಿಸಲಾಗಿದೆ. ಫೆಬ್ರವರಿ 13 ರಂದು ಟೆಂಡರ್ ತೆರೆಯುವ ನಿರೀಕ್ಷೆಯಿದೆ.
ಪ್ರಸ್ತುತ, ಬಿಎಂಟಿಸಿ 90 ನಾನ್-ಎಸಿ ಮಿಡಿ (9ಮೀ) JBM-NTPC ಬಸ್ಗಳು ಮತ್ತು ಅಶೋಕ್ ಲೇಲ್ಯಾಂಡ್ನ ಅಂಗಸಂಸ್ಥೆಯಾದ ಸ್ವಿಚ್ ಮೊಬಿಲಿಟಿ ಲಿಮಿಟೆಡ್ನಿಂದ 300 12m ಬಸ್ಗಳು ಸೇರಿದಂತೆ 390 ಇ-ಬಸ್ಗಳನ್ನು ನಿರ್ವಹಿಸುತ್ತಿದೆ. ಕಳೆದ ತಿಂಗಳು ಬೆಂಗಳೂರಿನಲ್ಲಿ 100 ಎಲೆಕ್ಟ್ರಿಕ್ ಬಸ್ಗಳಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2024ರ ಏಪ್ರಿಲ್ ವೇಳೆಗೆ ನಗರದಲ್ಲಿ 1,400 ಎಲೆಕ್ಟ್ರಿಕ್ ಬಸ್ಗಳನ್ನು ಹೊಂದುವುದಾಗಿ ಭರವಸೆ ನೀಡಿದ್ದರು.

ಕೆಟ್ಟು ನಿಂತ ಬಸ್:
ಮುಂಬೈನಲ್ಲಿ ಸಂಚರಿಸುವ ಎಸಿ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಎಲೆಕ್ಟ್ರಾನಿಕ್ ಸಮಸ್ಯೆಯಿಂದಾಗಿ ಸೋಮವಾರ ರಾತ್ರಿ ಮಂತ್ರಾಲಯದ ಬಳಿ ಕೆಟ್ಟುಹೋಗಿತ್ತು. ಬಸ್ನಲ್ಲಿ ಯಾವುದೇ ಯಾಂತ್ರಿಕ ದೋಷ ಕಂಡುಬಂದಿಲ್ಲ. ಈ ಬಗ್ಗೆ ಮುಂಬೈನಲ್ಲಿ ಎಸಿ ಡಬಲ್ ಡೆಕ್ಕರ್ಗಳು ಒಂದು ವರ್ಷವೂ ಪೂರೈಸಿಲ್ಲ. ಈ ಅನಗತ್ಯವಾದ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಬಿಎಂಸಿ ಮಾಜಿ ವಿರೋಧ ಪಕ್ಷದ ನಾಯಕ ರವಿ ರಾಜಾ ಆಗ್ರಹಿಸಿದ್ದಾರೆ.
ಹಲವಾರು ವರ್ಷಗಳಿಂದ ಬೆಸ್ಟ್ ಕಮಿಟಿಯಲ್ಲಿದ್ದ ರಾಜಾ, ಈ ಕಾರ್ಯವು ಸಂಪೂರ್ಣವಾಗಿ ಖಾಸಗಿ ನಿರ್ವಾಹಕರನ್ನು ಅವಲಂಬಿಸಬಾರದು. ಸರಿಯಾದ ನಿರ್ವಹಣೆಗಾಗಿ ವೆಟ್ ಲೀಸ್ ಬಸ್ಗಳನ್ನು ನಿರಂತರವಾಗಿ ಪರಿಶೀಲಿಸುವ ಸ್ವಂತ ಸಿಬ್ಬಂದಿಯನ್ನು ಹೊಂದಿರಬೇಕು ಎಂದು ಹೇಳಿದರು. ಎಸಿ ಡಬಲ್ ಡೆಕ್ಕರ್ಗಳನ್ನು ವೆಟ್ ಲೀಸ್ನಲ್ಲಿ ತೆಗೆದುಕೊಳ್ಳಲಾಗಿದೆ ಮತ್ತು ದಕ್ಷಿಣ ಮುಂಬೈ, ಕುರ್ಲಾ, ಬಿಕೆಸಿ, ಬಾಂದ್ರಾ ಮತ್ತು ಅಂಧೇರಿಯಲ್ಲಿ 47 ಬಸ್ಗಳು ಕಾರ್ಯನಿರ್ವಹಿಸುತ್ತಿವೆ.
More From GoodReturns

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Karnataka Weather: ಅಯ್ಯೋ, ಎಂಥಾ ಬಿಸಿಲು? ಜನರೇ ಹೊರಹೋಗುವ ಮುನ್ನ ಎಚ್ಚರ

Indane cylinder: ಇಂಡೇನ್ ಸಿಲಿಂಡರ್ ಬುಕಿಂಗ್ ಈಗ ಸುಲಭ; ವಾಟ್ಸಾಪ್ ಮೂಲಕ ಬುಕ್ ಮಾಡೋದೇಗೆ ತಿಳಿಯಿರಿ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

IPL 2026: ಐಪಿಎಲ್ ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಇನ್ನೂ ಯಾಕೆ ಕಂಫರ್ಮ್ ಆಗಿಲ್ಲ ಎಂದು ತಿಳಿಯಿರಿ

Karnataka Ration Card: ಪಡಿತರ ಚೀಟಿ ಪಡೆಯಲು ದೊಡ್ಡ ಬದಲಾವಣೆ.. ಆದಾಯ ಮಿತಿ 3 ಲಕ್ಷಕ್ಕೆ ಹೆಚ್ಚುವ ಸಾಧ್ಯತೆ

Bengaluru LPG Cylinder: ಬೆಂಗಳೂರಿನಲ್ಲಿ ಗೃಹಬಳಕೆ LPG ಸಿಲಿಂಡರ್ ಬುಕ್ಕಿಂಗ್ ಏರಿಕೆ: ಪೂರೈಕೆ ಸುರಕ್ಷಿತ, ಆತಂಕ ಬೇಡ

Eid-ul-Fitr 2026: ಭಾರತದಲ್ಲಿ ರಂಜಾನ್ ಹಬ್ಬ ಯಾವಾಗ? ಇದೇ ದಿನ ಕಾಣಿಸಲಿದೆ ಚಂದ್ರ

LPG: ಮತ್ತೆ ಬೆಂಗಳೂರಿನಲ್ಲಿ ಶುರುವಾಗುತ್ತಾ Work From Home? ಎಲ್ಪಿಜಿ ಕೊರತೆ ಬೆನ್ನಲ್ಲೇ ಉದ್ಯೋಗಿಗಳ ಹೊಸ ಡಿಮ್ಯಾಂಡ್

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Weather Today: ಮುಂದಿನ ವಾರದಿಂದ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು; ಜನರೇ ಎಚ್ಚರ



Click it and Unblock the Notifications