2024-25ನೇ ಸಾಲಿನಲ್ಲಿ ರಾಜ್ಯದಲ್ಲಿ ಪವನ ವಿದ್ಯುತ್ ಕ್ಷೇತ್ರಕ್ಕೆ 1331.48 ಮೆಗಾವ್ಯಾಟ್ ಸೇರ್ಪಡೆಗೊಳಿಸುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ 'ಗ್ಲೋಬಲ್ ವಿಂಡ್ ಡೇ 2025 ಪವನ್-ಉರ್ಜಾ ಪವರಿಂಗ್ ದಿ ಪ್ಯೂಚರ್ ಆಫ್ ಇಂಡಿಯಾ" ಸಮಾರಂಭದಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರಶಸ್ತಿ ಸ್ವೀಕರಿಸಿದ್ದಾರೆ.
ನಮ್ಮ ಕರ್ನಾಟಕವನ್ನು ಅನುಸರಿಸಿ ತಮಿಳುನಾಡು ಮತ್ತು ಗುಜರಾತ್ ಕ್ರಮವಾಗಿ 1,136.37 ಮೆಗಾವ್ಯಾಟ್ ಮತ್ತು 954.76 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿವೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿಕೆಯನ್ನು ನೀಡಿದ್ದಾರೆ.

ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಇಂಧನ ಸಚಿವ ಕೆ.ಜೆ ಜಾರ್ಜ್ ಇದು ಕೇವಲ ಒಂದು ಸಂಖ್ಯೆಯಲ್ಲ ಇದು ಕರ್ನಾಟಕದ ಶುದ್ಧ ಇಂಧನದ ಅಚಲ ಬದ್ಧತೆಯ ಪ್ರತಿಬಿಂಬ ಎಂದು ಹೇಳಿದ್ದಾರೆ.
ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿ
ಇಂಧನ ಕ್ಷೇತ್ರದಲ್ಲಿ ಪೂರ್ವಭಾವಿ ನೀತಿಗಳು, ಅನುಷ್ಠಾನ ಸಾಮರ್ಥ್ಯಗಳು ಮತ್ತು ದೂರದೃಷ್ಟಿಯು ಕರ್ನಾಟಕವನ್ನು ನವೀಕರಿಸಬಹುದಾದ ಇಂಧನ ಮುಂಚೂಣಿಯಲ್ಲಿ ಇರಿಸಿಸಲಾಗಿದೆ ಎಂದಿದ್ದಾರೆ. ಒಂದೇ ವರ್ಷದಲ್ಲಿ ರಾಜ್ಯದಲ್ಲಿ 1,331 ಮೆಗಾವ್ಯಾಟ್ ವಿದ್ಯುತ್ ಸೇರ್ಪಡೆಯು ಸುಸ್ಥಿರ ಭವಿಷ್ಯಕ್ಕಾಗಿ ಪವನ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ರಾಜ್ಯದ ವಿದ್ದುತ್ ವೇಗ ಹೆಚ್ಚಾಗುತ್ತದೆ. ಒಟ್ಟು ಸ್ಥಾಪಿತ ಪವನ ವಿದ್ಯುತ್ ಸಾಮರ್ಥ್ಯವು ರಾಜ್ಯದಲ್ಲಿ ಈಗ 7,351 ಮೆಗಾವ್ಯಾಟ್ ಆಗಿದ್ದು, ನವೀಕರಿಸಬಹುದಾದ ಇಂಧನದಲ್ಲಿ ಅದರ ಸ್ಥಿರ ನಾಯಕತ್ವಕ್ಕೆ ಇದು ಸಾಕ್ಷಿಯಾಗಿದೆ. ಈ ಸಾಧನೆಯು ದೊಡ್ಡ ಪ್ರಮಾಣದ ಯೋಜನೆಗಳನ್ನು ಕಾರ್ಯಗತಗೊಳಿಸುವ ಮತ್ತು ಕೈಗಾರಿಕೆಗಳು, ರೈತರು ಮತ್ತು ಮನೆಗಳಿಗೆ ಶುದ್ಧ ವಿದ್ಯತ್ ಶಕ್ತಿಯನ್ನು ಒದಗಿಸುವ ನಮ್ಮ ಸಾಮರ್ಥ್ಯದ ಸಂಕೇತವಾಗಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
2030ರ ವೇಳೆಗೆ 500 ಗಿಗಾವ್ಯಾಟ್ ತಲುಪುವ ಗುರಿ
ನಮ್ಮ ರಾಜ್ಯದಲ್ಲಿ 2030ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನದ ರಾಷ್ಟ್ರೀಯ ಗುರಿಗೆ ಕರ್ನಾಟಕದ ಬೆಂಬಲವನ್ನು ನೀಡುತ್ತದೆ. ಇದರಲ್ಲಿ 100 ಗಿಗಾವ್ಯಾಟ್ ಪವನ ಶಕ್ತಿಯಿಂದ ಉತ್ಪಾದಿಸಲಾಗುತ್ತದೆ.
ಈಗಾಗಲೇ ರಾಜ್ಯದಲ್ಲಿ 12 ಗಿಗಾವ್ಯಾಟ್ ಪವನ ವಿದ್ಯುತ್ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಿದ್ಧತೆ ನಡೆಸುತ್ತಿದೆ. ನವೀಕರಿಸಬಹುದಾದ ಇಂಧನ ಕ್ಲಸ್ಟರ್ ಕಾರ್ಯಕ್ರಮದಡಿಯಲ್ಲಿ 5 ಗಿಗಾವ್ಯಾಟ್ ಗಿಂತ ಹೆಚ್ಚು ವಿದ್ಯುತ್ ಯೋಜನೆ ರೂಪಿಸಲಾಗಿದೆ.
20ಕ್ಕೂ ಹೆಚ್ಚು ಸಬ್ಸ್ಟೇಷನ್ಗಳು, 400 ಕೆವಿ ಕಾರಿಡಾರ್ಗಳು ಮತ್ತು ನವೀಕರಿಸಬಹುದಾದ ಇಂಧನ ಮೀಸಲು ವಲಯವನ್ನು ಸ್ಥಾಪಿಸುವ ಮೂಲಕ ಮೂಲಸೌಕರ್ಯವನ್ನು ಬಲಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
2025 ರ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ, ರಾಜ್ಯವು ನವೀಕರಿಸಬಹುದಾದ ಇಂಧನಕ್ಕಾಗಿ ನಾಲ್ಕು ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಜಾರ್ಜ್ ಹೇಳಿದರು.ಇದು ರಾಜ್ಯದ ಒಟ್ಟು ಹೂಡಿಕೆಯ ಸುಮಾರು 40 ಪ್ರತಿಶತದಷ್ಟಿದೆ,ಇದು ಕರ್ನಾಟಕದ ಹಸಿರು ಇಂಧನ ದೃಷ್ಟಿಕೋನದಲ್ಲಿ ಜಾಗತಿಕ ಮತ್ತು ದೇಶೀಯ ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಸಲಾಗುತ್ತದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪವನ ಶಕ್ತಿಯ ಮೂಲ ಸಂಕೇತವಾದ ಹನುಮಂತನ ಭೂಮಿಯಾದ ಕರ್ನಾಟಕದಲ್ಲಿ ಜಾಗತಿಕ ಪವನ ದಿನವನ್ನು ಆಚರಿಸುವುದು ವಿಶೇಷವಾಗಿ ಅರ್ಥಪೂರ್ಣವಾಗಿದೆ ಎಂದು ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ ಹಂಪಿ ಪ್ರಾಚೀನ ಕಿಷ್ಕಿಂಧ, ರಾಮಾಯಣ ಯುಗದ ವಾನರ ಸಾಮ್ರಾಜ್ಯ, ಅಲ್ಲಿ ಹನುಮ ಜನಿಸಿದ ಎಂಬ ನಂಬಿಕೆಯನ್ನು ಪ್ರಹ್ಲಾದ್ ಜೋಶಿ ವ್ಯಕ್ತಪಡಿಸಿದ್ದಾರೆ. 51.5 GW ಸ್ಥಾಪಿತ ಸಾಮರ್ಥ್ಯದೊಂದಿಗೆ ಭಾರತದ ನಾಲ್ಕನೇ ಅತಿದೊಡ್ಡ ಪವನ ವಿದ್ಯುತ್ ಉತ್ಪಾದಕ ಜಾಗತಿಕ ಸ್ಥಾನವನ್ನು ಕೇಂದ್ರ ಸಚಿವರು ಒತ್ತಿ ಹೇಳಿದ್ದಾರೆ.
2030 ರ ವೇಳೆಗೆ 500 GW ನವೀಕರಿಸಬಹುದಾದ ಶಕ್ತಿಯನ್ನು ತಲುಪುವುದು ರಾಷ್ಟ್ರೀಯ ಗುರಿಯಾಗಿದೆ. ಇದರಲ್ಲಿ 100 GW ಪವನ ಶಕ್ತಿಯಿಂದ ಬರುತ್ತದೆ. ಇದರಲ್ಲಿ 30 GW ಕಡಲಾಚೆಯ ಮೂಲಗಳಿಂದ ಬರುತ್ತದೆ. ಹೆಚ್ಚುವರಿಯಾಗಿ, ಭಾರತವು ಪ್ರಸಕ್ತ ಹಣಕಾಸು ವರ್ಷದಲ್ಲಿ 3.5 ರಿಂದ 4 GW ಮೌಲ್ಯದ ಪವನ ಟರ್ಬೈನ್ಗಳು ಮತ್ತು ಮಾಡ್ಯೂಲ್ಗಳನ್ನು ರಫ್ತು ಮಾಡಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಪವನ, ಸೌರ ಮತ್ತು ಪಂಪ್ ಮಾಡಿದ ಶೇಖರಣಾ ವ್ಯವಸ್ಥೆಗಳ ಏಕೀಕರಣದ ಮೂಲಕ 24 ಗಂಟೆಯೂ ವಿದ್ಯುತ್ ಸರಬರಾಜು ಮತ್ತು ಗ್ರಿಡ್ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವುದು ಮುಂದಿನ ಪ್ರಮುಖ ಸವಾಲುಗಳ ಬಗ್ಗೆಯೂ ಸಹ ಹೇಳಿದ್ದರು.
ಹಸಿರು ಇಂಧನ ಆರ್ಥಿಕತೆ ನಿರ್ಮಾಣ
ಭಾರತದ ಹಸಿರು ಇಂಧನ ಆರ್ಥಿಕತೆಯನ್ನು ನಿರ್ಮಿಸಲು ವಿದ್ಯುತ್ ಸುಂಕಗಳಿಗೆ ಆದ್ಯತೆ ನೀಡುವುದು ಮತ್ತು ದೇಶೀಯ ಉತ್ಪಾದನೆ ಮತ್ತು ರಫ್ತುಗಳ ಮೇಲೆ ಕೇಂದ್ರೀಕರಿಸುವುದರ ಬಗ್ಗೆಯೂ ಕೇಂದ್ರ ಪ್ರಹ್ಲಾದ್ ಜೋಶಿ ಮಾತನಾಡಿದ್ದಾರೆ
ಭಾರತದಲ್ಲಿ ಪವನ ಟರ್ಬೈನ್ಗಳಿಗಾಗಿ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುವುದು ಎಂಬ ವರದಿಯನ್ನು ಬಿಡುಗಡೆ ಮಾಡಿದರು.ಇದು ದೇಶೀಯ ಪವನ ಟರ್ಬೈನ್ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಮಾರ್ಗಸೂಚಿಯನ್ನು ವಿವರಿಸಿದ್ದಾರೆ.
ರಾಜ್ಯದ ಸ್ಥಾಪಿತ ಪವನ ವಿದ್ಯುತ್ ಸಾಮರ್ಥ್ಯವು ಈಗ ದಕ್ಷಿಣ ಆಫ್ರಿಕಾ, ಪೋರ್ಚುಗಲ್ ಮತ್ತು ನ್ಯೂಜಿಲೆಂಡ್ನಂತಹ ದೇಶಗಳ ಸಂಯೋಜಿತ ಸಾಮರ್ಥ್ಯವನ್ನು ಮೀರಿದೆ ಎಂದು ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಹೇಳಿದ್ದಾರೆ.
More From GoodReturns

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Highway: ರಾಜ್ಯದ ಈ ಭಾಗಕ್ಕೆ ಹೈವೇ ಡಿಮ್ಯಾಂಡ್…ಕೇಂದ್ರಕ್ಕೆ ಮನವಿ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್!

Gruha Lakshmi: ಅಯ್ಯಯ್ಯೊ..79 ಕೋಟಿ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮಾ… 2.3 ಲಕ್ಷ ಫಲಾನುಭವಿಗಳ ಖಾತೆ ತಡೆ!

Rain-Summer: ರಾಜ್ಯದಲ್ಲಿ ಮತ್ತೆ ವರುಣನ ಅಬ್ಬರ ಶುರು! ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Total Lunar Eclipse: ಭಾರತದಲ್ಲಿ ಅಪರೂಪದ ರಕ್ತ ಚಂದ್ರಗ್ರಹಣ…ಮಾರ್ಚ್ 3ರಂದು ಯಾವಾಗ ವೀಕ್ಷಿಸಬೇಕು? ತಿಳಿಯಿರಿ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Karnataka Property: ಕರ್ನಾಟಕದಲ್ಲಿ ದುಬಾರಿಯಾಗಲಿದೆ ಜಾಗದ ಮೌಲ್ಯ! ಯಾವಾಗದಿಂದ ಗೊತ್ತಾ?

Silver Rate Today: 3 ದಿನದ ನಂತರ ಗಗನಕ್ಕೇರಿದ ಬೆಳ್ಳಿ ದರ! ದಿಢೀರ್ 10,000 ರೂ. ಹೆಚ್ಚಳ

Saudi Arabia-India: ಭಾರತ ಸೇರಿ 40 ದೇಶಗಳಿಂದ ಸೌದಿಗೆ ಹೋಗಲ್ಲ ಕೋಳಿ ಮಾಂಸ, ಮೊಟ್ಟೆ! ನಿಷೇಧ ಹೇರಿದ ಸರ್ಕಾರ

Silver Rate Today: ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ; ಬೆಳ್ಳಿ ಬೆಲೆ ಇಂದೂ ಸ್ಥಿರ

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ



Click it and Unblock the Notifications