ಕಾದು ಕೆಂಡವಾಗಿದ್ದ ಭೂಮಿಗೆ ಮಳೆಯ ಸ್ಪರ್ಶ ಹೌದು, ರಾಜ್ಯದಲ್ಲಿ ಇಂದಿನಿಂದ (ಏಪ್ರಿಲ್ 3) ನಾಲ್ಕು ದಿನಗಳ ಕಾಲ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುತ್ತದೆ ಎಂದು ಎಂದು ಹವಾಮಾನ ಇಲಾಖೆ ಸೂಚಿಸಿದೆ. ಮಳೆಯಾಗುವ ಪ್ರದಶಗಳಿಗೆ ಯೆಲ್ಲೋ ಅಲರ್ಟ್ ಜಾರಿ ಮಾಡಿದ್ದು, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾಸನ, ಮುಂಗಾರಿ, ಶಿವಮೊಗ್ಗ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ.
ಬೆಸಿಲಿನ ಬೇಗೆಗೆ ಬೆಂದಿದ್ದ ಭೂಮಿ ಇನ್ಮುಂದೆ ತಂಪು ಆಗುತ್ತಿದೆ. ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಮಳೆ ಇನ್ನೂ ನಾಲ್ಲ ದಿನಗಳ ಕಾಲ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಬಗ್ಗೆ ಸಾರ್ವಜನಿಕರು ಹೆಚ್ಚಿನ ಗಮನಕೊಟ್ಟ ಸುರಂಕ್ಷಿತವಾಗಿ ಮನೆಯ ಒಳಗೆ ಇರಿ ಎಂದು ಎಚ್ಚರಿಕೆಯನ್ನು ಸಹ ನೀಡಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್?
ಹವಾಮಾನ ಇಲಾಖೆ ನೀಡಿರುವ ಯೆಲ್ಲೋ ಅಲರ್ಟ್ ಪ್ರಕಾರ, ಕೆಳಗಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ.
ಏಪ್ರಿಲ್ 3 ರಂದು : ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಏಪ್ರಿಲ್ 4 ರಂದು: ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು ವಿಜಯಪುರ ಈ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ, ಹವಾಮಾನ ಇಲಾಖೆ ಹೆಚ್ಚಿನ ಎಚ್ಚರಿಕೆಯನ್ನು ಕೈಗೊಂಡಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತದೆ ಎಮದು ಸೂಚನೆಯನ್ನು ನೀಡಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಏಪ್ರಿಲ್ 5 ಮತ್ತು ಏಪ್ರಿಲ್ 6 ರಂದು, ಬೆಳಗಾವಿ, ಧಾರವಾಡ, ಮತ್ತು ಹಾವೇರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ದಿನಗಳಲ್ಲಿ ಉಳಿದ ಭಾಗಗಳಲ್ಲಿ ಕಡಿಮೆ ಶಾಖದ ವಾತವರಣ ಇರುತ್ತದೆ. ಅಂದರೆ ಮಳೆಯಿಲ್ಲದೆ ಹವಾಮಾನ ಶಾಂತವಾಗಿರುತ್ತದೆ.
ಹೀಗಾಗಿ, ಈ ದಿನಗಳಲ್ಲಿ ಉತ್ತಮ ಎಚ್ಚರಿಕೆಯಿಂದ ಇರುವುದರಿಂದ, ಧಾರವಾಡ, ಬೆಳಗಾವಿ ಮತ್ತು ಹಾವೇರಿಗೆ ಹೋಗುವವರು ಗಮನದಲ್ಲಿ ಈ ಮಾಹಿತಿಯನ್ನು ಇಟ್ಟಿಕೊಳ್ಳಬೇಕು.
ದಕ್ಷಿಣ ಒಳನಾಡು ಭಾಗದಲ್ಲಿ ನಾಲ್ಕು ದಿನಗಳ ಕಾಲ ವರುಣಾರ್ಭಟ
ಹವಾಮಾನ ಇಲಾಖೆಯ ಪ್ರಕಾರ, ದಕ್ಷಿಣ ಒಳನಾಡು ಭಾಗದಲ್ಲಿ ನಾಲ್ಕು ದಿನಗಳ ಕಾಲ ಹೆಚ್ಚಿನ ಮಳೆಯಾಗಲಿದ್ದು ಕೆಳಗಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ:
ಏಪ್ರಿಲ್ 3: ಚಾಮರಾಜನಗರ, ಕೊಡಗು, ಮೈಸೂರು ಭಾಗದಲ್ಲಿ ಮಳೆಯಾಗುತ್ತದೆ.
ಏಪ್ರಿಲ್ 4:ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಪ್ರದೇಶದಲ್ಲಿ ಮಳೆಯಾಗಲಿದೆ.
ಏಪ್ರಿಲ್ 5 ಮತ್ತು 6:ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ತುಮಕೂರುನಈ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ, ಆದ್ದರಿಂದ ಸ್ಥಳೀಯರಿಗೆ ಎಚ್ಚರಿಕೆಯಿಂದ ಇರುಬೇಕು ಎಂದು ಹವಾಮಾನ ಇಲಾಖೆ ಸಲಹೆಯನ್ನು ನೀಡಿದೆ.
ಮಳೆಗಾಲದಲ್ಲಿ ರಕ್ಷಣೆ ಮಾಡಿಕೊಳ್ಳಲು, ಕೆಲವೊಂದು ಎಚ್ಚರಿಕೆ ಮತ್ತು ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅವಶ್ಯಕ ಅವುಗಳು ಯಾವುವು ಎಂಬುದು ಈ ಕೆಳಗಿನಂತೆ ಇದೆ.
ಹವಾಮಾನ ಮುನ್ಸೂಚನೆಗಳ ಕಡೆ ಗಮನ ಕೊಡಿ: ಪ್ರತಿದಿನವೂ ಹವಾಮಾನ ಅಧಿಸೂಚನೆಗಳನ್ನು ಪರಿಶೀಲಿಸಿ. ಸರಕಾರದಿಂದ ಅಥವಾ ಹವಾಮಾನ ಇಲಾಖೆಯಿಂದ ನೀಡಲಾಗುವ ಮುನ್ಸೂಚನೆಗಳನ್ನು ಅನುಕರಣೆ ಮಾಡಿ. ಯೆಲ್ಲೋ ಅಲರ್ಟ್ ಅಥವಾ ಆರಂಜ್ ಅಲರ್ಟ್ ಇದ್ದರೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಮಳೆಗಾಲದ ಸಣ್ಣ ಬೀದಿಗಳಿಂದ ದೂರವಿರಿ: ಮಳೆಗಾಲದಲ್ಲಿ ಬೀದಿಗಳು ಮತ್ತು ಬಲುಪಾತಿ ಪ್ರದೇಶಗಳಲ್ಲಿ ಪ್ರವಾಹ ಹಾಗೂ ಜೋರ್ಪು ಪ್ರಲಯಗಳಾಗಬಹುದು. ಅವುಗಳಲ್ಲಿ ಹೋಗುವುದರಿಂದ ಅನಾಹುತಗಳನ್ನು ತಲುಪಬಹುದು. ಆದ್ದರಿಂದ, ಆ ಪ್ರದೇಶಗಳಲ್ಲಿ ಮುಂದುವರಿಯಲು ಜಾಗರೂಕವಾಗಿರಿ.
ಮನೆಗೆ ಮುಚ್ಚಳ ಅಳವಡಿಕೆ: ನಿಮ್ಮ ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಚೆನ್ನಾಗಿ ಮುಚ್ಚಿರಿ. ಗಾಳಿಗೆ ಹಾನಿಯಾಗದಂತೆ ನೋಡಿಕೊಳ್ಳಿ ಮೇಲ್ಚಾವಣಿ ಪರಿಶೀಲಿಸಿ: ಹೆಚ್ಚಿನ ಮಳೆಯಾಗುವ ಸಮಯದಲ್ಲಿ ಕಿಟಕಿಗಳು ಮತ್ತು ದ್ವಾರಗಳನ್ನು ಮುಚ್ಚಿ.ನೀವು ಸೇರುವ/ಹೋಗುವ ಸ್ಥಳಗಳಲ್ಲಿ ನೀರಿನ ಅಡ್ಡತೆಯನ್ನು ಪರಿಶೀಲಿಸಿ. ನದಿಗಳ, ಕೆರೆಗಳನ್ನು, ಹಳ್ಳಿಗಳ ಕಡೆ ಗಮನ ಕೊಡಿ.
ಸುರಕ್ಷಿತ ಸ್ಥಳಗಳ ಬಗ್ಗೆ ತಿಳಿದುಕೊಳ್ಳಿ: ಗಾಳಿಯ ಪ್ರಭಾವ ಮಳೆಯ ಪ್ರಭಾವವನ್ನು ಅರಿಯಿರಿ. ಮಳೆಯ ಸಮಯದಲ್ಲಿ ಗಾಳಿಬಲ ಹೆಚ್ಚಾಗಬಹುದು. ಸ್ತಂಭಗಳು, ಮರಗಳು, ವಿದ್ಯುತ್ ಕಂಬಗಳೀಂದ ದೂರವಿರಿ. ಕೃಷಿ ಹಾಗೂ ಪಶುಪಾಲನೆ ಕಾರ್ಯಗಳಿಗೆ ಸಂಬಂಧಿಸಿದವರು ನೀರಿನ ಭಾರದಿಂದ ಹೊತ್ತೊಯ್ಯಲ್ಪಟ್ಟ ಸ್ಥಳಗಳಲ್ಲಿ ತಮ್ಮ ಕೆಲಸಗಳನ್ನು ಸರಿಪಡಿಸಿಕೊಳ್ಳಿ. ಈ ಹಂತಗಳನ್ನು ಅನುಸರಿಸುವ ಮೂಲಕ, ನೀವು ಮಳೆಗಾಲದಲ್ಲಿ ನಿಮ್ಮ ಮನೆಯ ಹಾಗೂ ಕುಟುಂಬದ ಸುರಕ್ಷತೆಯನ್ನು ಮಾಡಬಹುದು.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Rapido Ownly: ರ್ಯಾಪಿಡೋದಿಂದ ಹೊಸ ಫುಡ್ ಡೆಲಿವರಿ ಆಪ್ ಲಾಂಚ್! ಏನಿದರ ವಿಶೇಷತೆ?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ



Click it and Unblock the Notifications