KIADB ಮೆಗಾ ಪ್ಲಾನ್! ಐಟಿಐಆರ್ಗೆ ಕಾವೇರಿ ನೀರು ಹೌದು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಯಲಹಂಕದಿಂದ ಮಾಹಿತಿ ತಂತ್ರಜ್ಞಾನ ಮತ್ತು ಹೂಡಿಕೆ ಪ್ರದೇಶಕ್ಕೆ ಕಾವೇರಿ ನೀರನ್ನು ಪೂರೈಸಲು ಯೋಜನೆಯನ್ನು ಮಾಡಿದೆ.
ಹೌದು,ಬಿಡಬ್ಲ್ಯೂಎಸ್ಎಸ್ಬಿಯ ಯಲಹಂಕ ಪಂಪಿಂಗ್ ಸ್ಟೇಷನ್ ನಿಂದ ಮಾಹಿತಿ ತಂತ್ರಜ್ಞಾನ ಮತ್ತು ಹೂಡಿಕೆ ಪ್ರದೇಶ ಗಳಂದೇ (ಐಟಿಐಆರ್) ಪ್ರಸಿದ್ಧವಾಗಿರುವ ದೇವನಹಳ್ಳಿ ಸಾಮಾನ್ಯ ಕೈಗಾರಿಕಾ ಪ್ರದೇಶಕ್ಕೆ ಕುಡಿಯುವ ಕಾವೇರಿ ನೀರನ್ನು ಪೂರೈಸಲು ಕೆಐಎಡಿಬಿ ಯೋಜನೆಗಳನ್ನು ಈ ಯೋಜನೆಯನ್ನು ರೂಪಿಸಲಾಗಿದೆ ಎಂದೇ ಹೇಳಬಹುದು.
ಆಪಲ್ ಐಫೋನ್ಗಳನ್ನು ಜೋಡಿಸುವ ಎಲೆಕ್ಟ್ರಾನಿಕ್ಸ್ ಉತ್ಪಾದನಾ ದೈತ್ಯ ಫಾಕ್ಸ್ಕಾನ್, ಬೆಂಗಳೂರು ಗ್ರಾಮಾಂತರ ಡಿಸಿ ಕಚೇರಿ ಬಳಿಯ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರದ ನಡುವೆ ಇರುವ ಐಟಿಐಆರ್ನಲ್ಲಿ 300 ಎಕರೆ ವಿಸ್ತೀರ್ಣದ ಘಟಕದಲ್ಲಿ ಈಗಾಗಲೇ ಕಾರ್ಯಾಚರಣೆಗಳನ್ನು ಸಹ ಮಾಡಲಾಗಿದೆ.
ಈ ಪ್ರದೇಶದಲ್ಲಿ ಯಾವುದೇ ಕಾರ್ಯಸಾಧ್ಯವಾದ ನೀರಿನ ಮೂಲವಿಲ್ಲದ ಮತ್ತು ಅಂತರ್ಜಲ ಮಟ್ಟ 1,000 ಅಡಿಗಳಿಗಿಂತ ಹೆಚ್ಚು ಆಳವಿಲ್ಲದ ಕಾರಣ, ಹೂಡಿಕೆದಾರರು ತಮ್ಮ ಘಟಕಗಳಿಗೆ ಕುಡಿಯುವ ನೀರಿನ ಬೇಡಿಕೆಯನ್ನು ಮುಂದಿಟ್ಟಾಗ KIADB (ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ) ಸರ್ಕಾರದ ಸಹಾಯದ ಕೋರಿಕೆಯನ್ನು ಸಹ ಮಾಡಿತ್ತು.
ರಾಜ್ಯ ಸರ್ಕಾರ ಇತ್ತೀಚೆಗೆ ITIR ಗೆ 0.25 ಟಿಎಂಸಿ ಅಡಿ ಅಂದರೆ ಸುಮಾರು 708 ಕೋಟಿ ಲೀಟರ್ ಕುಡಿಯುವ ನೀರನ್ನು ಅನುಮೋದನೆಯನ್ನು ಸಹ ನೀಡಲಾಗಿತ್ತು.ಈ ಪ್ರದೇಶದಲ್ಲಿ ಹೂಡಿಕೆದಾರರು ಕುಡಿಯುವ ನೀರಿಗೆ ಬೇಡಿಕೆಯನ್ನು ಸಹ ಮಂಡಳಿಯ ಮುಂದೆ ಇಟ್ಟಿದ್ದಾರೆ. ಆದ್ದರಿಂದ ಕೆಐಎಡಿಬಿ ಸರ್ಕಾರವನ್ನು ಸಂಪರ್ಕಿಸಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.
ಯಲಹಂಕದ ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಐಟಿಐಆರ್ ಮತ್ತು ಪಿನಾಕಿನಿ ಭವನ ನಡುವೆ 25 ಕಿ.ಮೀ ಪೈಪ್ಲೈನ್ ಹಾಕಲು ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧವನ್ನು ಕೂಡ ಮಾಡಲಾಗಿದೆ. ಐಟಿಐಆರ್ನಲ್ಲಿ ಕುಡಿಯುವ ನೀರಿನ ಕೊರತೆಯಿದೆ, ಆದ್ದರಿಂದ ಮಂಡಳಿಯು ಯಲಹಂಕದಿಂದ ಅದನ್ನು ಪೂರೈಸಲು ಯೋಜಿಸುತ್ತಿದೆಎಂದು ಕೆಐಎಡಿಬಿಯ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಕುಮಾರ್ ಅವರು ಮಾಹಿತಿಯನ್ನು ತಿಳಿಸಿದ್ದಾರೆ.
ನಾವು ಬಿಡಬ್ಲ್ಯೂಎಸ್ಎಸ್ಬಿಯಿಂದ ಐಟಿಐಆರ್ಗೆ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಕಾವೇರಿ ನೀರನ್ನು ಪೂರೈಸುತ್ತೇವೆ. ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ ಮಹೇಶ್ ಈ ಯೋಜನೆಯನ್ನು ಬಗ್ಗೆ ಮಾಹಿತಿಯನ್ನು ಧೃಢಪಡಿಸಿದ್ದಾರೆ. ಮಂಡಳಿಯು ಯಲಹಂಕದಿಂದ ಫಾಕ್ಸ್ಕಾನ್ಗೆ ಕುಡಿಯುವ ನೀರನ್ನು ಪೂರೈಕೆಯನ್ನು ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೈರದೇನಹಳ್ಳಿ, ದೊಡ್ಡಗೊಲ್ಲಹಳ್ಳಿ, ಚಪ್ಪರದಹಳ್ಳಿ, ರಾಮನಾಥಪುರ, ಅರುವನಹಳ್ಳಿ, ರಬ್ಬನಹಳ್ಳಿ, ಲಿಂಗನಹಳ್ಳಿ ಮತ್ತು ಕೋನಘಟ್ಟ-ಎಂಬ ಎಂಟು ಗ್ರಾಮಗಳಲ್ಲಿ 2,072 ಎಕರೆ ಪ್ರದೇಶದಲ್ಲಿ ಐಟಿಐಆರ್ ಅನ್ನು ಕೂಡ ಕಲ್ಲನೆಯನ್ನು ಸಹ ಮಾಡಲಾಗಿದೆ.

ಮೊದಲ ಹಂತದಲ್ಲಿ ಫಾಕ್ಸ್ಕಾನ್ ಕಾರ್ಯಾಚರಣೆ ಆರಂಭಿಸಿರುವುದರಿಂದ, ಎರಡನೇ ಹಂತದ ಐಟಿಐಆರ್ ಅನ್ನು ಪ್ರಾರಂಭಿಸಲು ಕೆಐಎಡಿಬಿ ಈಗ ಹೆಚ್ಚಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆಗಳನ್ನು ಸಹ ಹೊರಡಿಸಲಾಗಿದೆ. ಫಾಕ್ಸ್ಕಾನ್ ಪ್ರವೇಶದ ನಂತರ ಈ ಪ್ರದೇಶದಲ್ಲಿ ಭೂಮಿಯ ಬೇಡಿಕೆ ವೇಗವಾಗಿ ಬೆಳೆಯುತ್ತಿದೆಎಂದು ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.
ಈ ಪ್ರದೇಶವು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR), ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದೊಡ್ಡಬಳ್ಳಾಪುರ ರೈಲು ನಿಲ್ದಾಣಕ್ಕೆ ಹತ್ತಿರವಾಗಿರುವುದರಿಂದ, ಉತ್ಪಾದನಾ ಕೇಂದ್ರವಾಗಿ ಅದರ ಆಕರ್ಷಣೆ ಕೂಡ ಹೆಚ್ಚಾಗುತ್ತದೆ.
More From GoodReturns

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Tejasvi Surya: ಹೋಟೆಲ್ ಉದ್ಯಮದ ಬೆಂಬಲಕ್ಕೆ ನಿಂತ ತೇಜಸ್ವಿ ಸೂರ್ಯ; LPG ಗ್ಯಾಸ್ ಪೂರೈಸುವಂತೆ ಮನವಿ

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

LPG Gas Cylinder: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತ, ಹೋಟೆಲ್ ಉದ್ಯಮಕ್ಕೆ ಅಡ್ಡಿ; ಪ್ರಧಾನಿಗೆ ಪತ್ರ

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications