ಹಾಲಿನ ಚಂದಾದಾರಿಕೆ ಬೇಡವೆಂದು 99 ಸಾವಿರ ಕಳೆದುಕೊಂಡ, ಹೇಗಪ್ಪ?

ಆನ್‌ಲೈನ್ ಕಿರಾಣಿ ಅಂಗಡಿಯಿಂದ ಹಾಲು ಖರೀದಿಸುತ್ತಿದ್ದ 68 ವರ್ಷದ ಬ್ಯಾಂಕ್‌ನ ನಿವೃತ್ತ ಮುಖ್ಯ ಪ್ರಧಾನ ವ್ಯವಸ್ಥಾಪಕರು ಇತ್ತೀಚೆಗೆ ಸೈಬರ್‌ಕ್ರೂಕ್‌ಗಳ ಜಾಲಕ್ಕೆ ಬಲಿಯಾಗಿದ್ದಾರೆ. ನನಗಿನ್ನ ಹಾಲು ಬೇಡವೆಂದು ಚಂದಾದಾರಿಕೆಯನ್ನು ನಿಲ್ಲಿಸಲು ಪ್ರಯತ್ನಿಸಿದ ವ್ಯಕ್ತಿ ಬರೋಬ್ಬರಿ 99,000 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಮಾಧವ್ (ಹೆಸರು ಬದಲಾಯಿಸಲಾಗಿದೆ) ಹುಳಿಮಾವು ಪೊಲೀಸರಿಗೆ ನೀಡಿದ ದೂರಿನಲ್ಲಿ, ತಾನು ಮೂರು ವರ್ಷಗಳಿಂದ ಆನ್‌ಲೈನ್ ಸ್ಟೋರ್‌ನಿಂದ ಪ್ರತಿದಿನ ಒಂದು ಲೀಟರ್ ಹಾಲು ಖರೀದಿಸುತ್ತಿದ್ದೇನೆ. ಫೆಬ್ರವರಿ 2 ರಂದು ಚಂದಾದಾರಿಕೆಯನ್ನು ನಿಲ್ಲಿಸಲು ಪ್ರಯತ್ನಿಸಿದ್ದೇನೆ ಎಂದು ಹೇಳಿದರು.

 ಹಾಲಿನ ಚಂದಾದಾರಿಕೆ ಬೇಡವೆಂದು 99 ಸಾವಿರ ಕಳೆದುಕೊಂಡ, ಹೇಗಪ್ಪ?

ಟೈಮ್ಸ್ ಆಫ್ ಇಂಡಿಯಾಕ್ಕೆ ಈ ಬಗ್ಗೆ ಮಾಹಿತಿ ನೀಡಿದ ಮಾಧವ್, "ನನ್ನ ಬಳಿ ಕಿರಾಣಿ ಅಂಗಡಿಯ ಎರಡು ಸಂಪರ್ಕ ಸಂಖ್ಯೆಗಳಿವೆ, ಆದರೆ ಎರಡೂ ಕೂಡಾ ಅರ್ಧ ಘಂಟೆಯವರೆಗೆ ಕಾರ್ಯನಿರತವಾಗಿವೆ. ಹಾಗಾಗಿ, ನಾನು ಇಂಟರ್ನೆಟ್‌ನಲ್ಲಿ ಪರ್ಯಾಯ ಸಂಖ್ಯೆಗಳನ್ನು ಹುಡುಕಿದೆ. ಫೋನ್ ಸಂಖ್ಯೆ '7388823702' ನನಗೆ ಸಿಕ್ಕಿದೆ. ನಾನು ಸಂಖ್ಯೆಗೆ ಡಯಲ್ ಮಾಡಿದೆ. ಸೀವರ್ ತನ್ನನ್ನು ಅಂಗಡಿಯ ಕಾರ್ಯನಿರ್ವಾಹಕ ಎಂದು ಪರಿಚಯಿಸಿಕೊಂಡ," ಎಂದು ತಿಳಿಸಿದರು.

"ನಾನು ಕೆಲವು ದಿನಗಳಿಂದ ಊರಿನಿಂದ ಹೊರಗೆ ಹೋಗುತ್ತಿದ್ದೇನೆ ಮತ್ತು ಹಾಲಿನ ಚಂದಾವನ್ನು ನಿಲ್ಲಿಸಬೇಕೆಂದು ನಾನು ಅವನಿಗೆ ಹೇಳಿದೆ. ರಿಸೀವರ್ ಅವರು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುವುದಿಲ್ಲ ಎಂದು ನನಗೆ ತಿಳಿಸಿದರು. ಅವರೊಂದಿಗೆ ಹಿಂದಿಯಲ್ಲಿ ಸಂವಹನ ನಡೆಸಲು ವಿನಂತಿಸಿದರು. ನಾನು ಅವನಿಗೆ ಹಿಂದಿಯಲ್ಲಿ ವಿವರಿಸಿದೆ," ಎಂದು ದೂರಿನಲ್ಲಿ ಹೇಳಿದರು.

"ಚಂದಾದಾರಿಕೆಯನ್ನು ನಿಲ್ಲಿಸಲು ರಿಮೋಟ್ ಆಕ್ಸೆಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ದುಷ್ಕರ್ಮಿ ನನಗೆ ಹೇಳಿದನು. ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ನನ್ನ ಡಿಜಿಟಲ್ ಪಾವತಿ ಅಪ್ಲಿಕೇಶನ್ (ಡಿಪಿಎ) ಫೋನ್‌ಪೇ ತೆರೆಯುವುದು ಸೇರಿದಂತೆ ಇನ್ನೂ ಕೆಲವು ಹಂತಗಳನ್ನು ಅನುಸರಿಸಲು ಅವನು ನನಗೆ ತಿಳಿಸಿದ," ಎಂದು ಮಾಧವ್ ತಿಳಿಸಿದರು.

"ಚಂದಾದಾರಿಕೆಯನ್ನು ರದ್ದುಗೊಳಿಸಲು ಈ ವಿಧಾನವು ಅವಶ್ಯಕವಾಗಿದೆ ಎಂದು ಅವರು ನನಗೆ ಮನವರಿಕೆ ಮಾಡಿದರು. ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ಡಿಪಿಎಯಲ್ಲಿನ 'ಟ್ರಾನ್ಸ್‌ಫರ್ ಮನಿ ಟು ಮೊಬೈಲ್ ನಂಬರ್' ಆಯ್ಕೆಯಲ್ಲಿ ನಮೂದಿಸಲು ನನ್ನ ಬಳಿ ಹೇಳಿದರು. ನಂತರ ಅವರು ನನ್ನ ಹೆಸರು ಮತ್ತು ನನ್ನ ಮೊದಲ ಐದು ಅಂಕೆಗಳನ್ನು ನಮೂದಿಸಲು ಹೇಳಿದರು," ಎಂದು ದೂರಿನಲ್ಲಿ ವಿವರಿಸಿದ್ದಾರೆ.

"ನಾನು '98868' ಅನ್ನು ನಮೂದಿಸಿದ್ದೇನೆ ಮತ್ತು ಕೆಲವೇ ಸೆಕೆಂಡುಗಳಲ್ಲಿ ನನ್ನ ಖಾತೆಯಿಂದ ಮೊತ್ತವನ್ನು ಡೆಬಿಟ್ ಮಾಡಲಾಗಿದೆ," ಎಂದು ಮಾಧವ್ ಹೇಳಿದರು. ಮಾಧವ್ ಹಣ ವರ್ಗಾವಣೆಯ ಬಗ್ಗೆ ಕರೆಯಲ್ಲಿದ್ದವರಲ್ಲಿ ಪ್ರಶ್ನಿಸಿದರು. ಕಾರ್ಯನಿರ್ವಾಹಕರು ಮಾಧವ್ ಅವರಿಗೆ ಅದು ತಪ್ಪಾಗಿದೆ, ಸರಿಪಡಿಸುವುದಾಗಿ ಭರವಸೆ ನೀಡಿದರು. "ಮರುಪಾವತಿ ಪಡೆಯಲು ನಾಲ್ಕು ಗಂಟೆಗಳ ಕಾಲ ಕಾಯುವಂತೆ ಅವರು ನನ್ನನ್ನು ಕೇಳಿದರು," ಎಂದು ಮಾಧರ್ ತಿಳಿಸಿದರು.

"ರಾತ್ರಿಯ ವೇಳೆಯಲ್ಲಿ ನನಗೆ ಅನುಮಾನ ಬಂದು ನನ್ನ ಖಾತೆಯನ್ನು ಫ್ರೀಜ್ ಮಾಡಲು ಬ್ಯಾಂಕ್‌ಗೆ ಕರೆ ಮಾಡಿದೆ. ಮಧ್ಯರಾತ್ರಿ ಮತ್ತೆ ದುಷ್ಕರ್ಮಿ ನನಗೆ ಕರೆ ಮಾಡಿ ಅದೇ ರೀತಿ ಮಾಡಲು ಹೇಳಿದ. ಆಗ ನನಗೆ ಆತ ವಂಚಕ ಎಂದು ತಿಳಿದುಬಂದಿದೆ. ಮರುದಿನ ನಾನು ಪೊಲೀಸರಿಗೆ ದೂರು ನೀಡಿದೆ," ಎಂದು ಮಾಧವ್ ಟೈಮ್ಸ್ ಆಫ್ ಇಂಡಿಯಾ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+