ಕ್ಯಾಬ್ ಬುಕ್ಕಿಂಗ್ ಕಂಪೆನಿಯಾದ ಓಲಾದಿಂದ ಮಂಗಳವಾರ ಮಹತ್ವದ ಘೋಷಣೆ ಮಾಡಲಾಗಿದೆ. ನಗದು ಅಗತ್ಯ ಇರುವ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ಚಾಲಕರಿಗೆ ಬಡ್ಡಿರಹಿತವಾಗಿ ಕಿರು ಸಾಲ ಒದಗಿಸಲು ಮುಂದಾಗಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಎದುರಾಗಿರುವ ಆರ್ಥಿಕ ಸವಾಲು ಎದುರಿಸಲು ಈ ಹೊಸ ಯೋಜನೆ ಘೋಷಿಸಿದೆ.
'ಅರ್ಹ ಚಾಲಕರಿಗೆ' 3600 ರುಪಾಯಿ ತನಕದ ಸಾಲವನ್ನು ಮೂರು ವಾರದೊಳಗೆ ವಿತರಿಸಲಾಗುವುದು. ಆ ಮೊತ್ತವನ್ನು ಮನೆಯ ಖರ್ಚು ಅಥವಾ ಯಾವುದಾದರೂ ಮರುಪಾವತಿಗೆ ಬಳಸಬಹುದು ಎಂದು ಕಂಪೆನಿ ತಿಳಿಸಿದೆ. ಈ ಯೋಜನೆ ಅಡಿಯಲ್ಲಿ ವಾರಕ್ಕೆ 1200 ರುಪಾಯಿಯನ್ನು ನೀಡಲಾಗುವುದು.
ಈ ಸಾಲವನ್ನು ಮುಂದೆ, ಎಲ್ಲ ವ್ಯವಹಾರ ಸಹಜ ಸ್ಥಿತಿಗೆ ಬಂದ ಮೇಲೆ ತಮ್ಮ ದುಡಿಮೆಯಲ್ಲಿ ತೀರಿಸಬಹುದು. ಓಲಾ ಕಂಪೆನಿಯು ಈ ಸಾಲವನ್ನು ಮೈಕ್ರೋ ಫೈನಾನ್ಸ್ ಕಂಪೆನಿ ಮೂಲಕ ವಿತರಿಸಲಿದೆ. ಓಲಾ ಆಟೋ, ಓಲಾ ರೆಂಟಲ್ಸ್ ಮತ್ತು ಔಟ್ ಸ್ಟೇಷನ್ಸ್ ಹೀಗೆ ಎಲ್ಲ ವಿಭಾಗದವರೂ ಇದರ ಅನುಕೂಲ ಪಡೆಯಬಹುದು. ಆದರೆ ಈ ಸಾಲದ ಪ್ರಯೋಜನ ಪಡೆಯಲು ಚಾಲಕರ 'ಅರ್ಹತಾ ಮಾನದಂಡ' ಏನು ಎಂಬುದನ್ನು ತಿಳಿಸಿಲ್ಲ.

ಲಾಕ್ ಡೌನ್ ಕಾರಣಕ್ಕೆ ಓಲಾದ ಎಲ್ಲ ಸೇವೆಯನ್ನು ಸ್ಥಗಿತ ಮಾಡಲಾಗಿದೆ. ಕರ್ನಾಟಕದಲ್ಲಿ ಚಾಲಕರ ಲೀಸ್ ರೆಂಟಲ್ ಕೂಡ ಓಲಾದಿಂದ ಮನ್ನಾ ಮಾಡಲಾಗಿದೆ. ಕೊರೊನಾಗೆ ಸಂಬಂಧಿಸಿದ ಚಟುವಟಿಕೆಗಳಿಗೆ ವೈದ್ಯರ ಸಂಚಾರಕ್ಕೆ ಬಳಸಿಕೊಳ್ಳಲು ಐನೂರು ವಾಹನಗಳನ್ನು ರಾಜ್ಯ ಸರ್ಕಾರಕ್ಕೆ ನೀಡಲಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications