ಗೂಗಲ್ ಪ್ಲೇ ಸ್ಟೋರ್ ನ ಆಪ್ ಗಳ ಸುರಕ್ಷತೆ ಬಗ್ಗೆ ಈಗಾಗಲೇ ಸಾಕಷ್ಟು ಲೇಖನಗಳು ಬಂದಿವೆ. ವರದಿಗಳ ಪ್ರಕಾರ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಅಪ್ಲಿಕೇಷನ್ ಗಳ ಮಾಲ್ ವೇರ್ ನಿಂದ ಆಗುತ್ತಿರುವ ಹಾನಿಯನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯವಾಗಿ ಗೂಗಲ್ ನಿಂದ ಆಗಾಗ್ಗೆ ಅಂಥ ಕೆಲವು ಅಪ್ಲಿಕೇಷನ್ ಗಳನ್ನು ಕಿತ್ತೊಗೆಯಲಾಗುತ್ತದೆ.
ಆದರೆ, ಅದೇ ಥರದ್ದು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇದೀಗ ಅಂಥದ್ದಕ್ಕೆ ಹೊಸ ಸೇರ್ಪಡೆ ಕೀ ಬೋರ್ಡ್ ಅಪ್ಲಿಕೇಶನ್. ಇದು ನಿಮ್ಮ ಎಲ್ಲ ಹಣವನ್ನು ಕಳುವು ಮಾಡಬಲ್ಲದು. "ai.type keyboard" ಎಂಬುದು ಈ ಅಪ್ಲಿಕೇಷನ್ ನ ಹೆಸರು. ಇದು ಬಳಕೆದಾರರನ್ನು ಅಕ್ಷರಶಃ ದೋಚಿಬಿಡುತ್ತದೆ ಎಂದು ವರದಿಗಳು ಹೇಳುತ್ತಿವೆ.
ಫೋನ್ ಬಳಸುತ್ತಿರುವ ಸಂದರ್ಭದಲ್ಲೇ ಬಳಕೆದಾರರ ಗಮನಕ್ಕೂ ಬಾರದೆ ಈ ಅಪ್ಲಿಕೇಷನ್ ತನ್ನ ಚಟುವಟಿಕೆ ಶುರು ಮಾಡುತ್ತದೆ. ಅನಧಿಕೃತ ವ್ಯವಹಾರದ ಮೂಲಕ ಬಳಕೆದಾರರ ಹಣವನ್ನು ಕಳುವು ಮಾಡುತ್ತದೆ. ಇಂಥ ಒಂದೂವರೆ ಕೋಟಿಯಷ್ಟು ಮನವಿಯನ್ನು ಗುರುತಿಸಲಾಗಿದೆ. ಡಿ- ಪ್ಲಾಟ್ ಫಾರ್ಮ್ ಮೂಲಕ ಸಂಶೋಧಕರು ಅದನ್ನು ಬ್ಲಾಕ್ ಮಾಡಿದ್ದಾರೆ.

ಗೂಗಲ್ ನ ಪ್ರಕಾರ, ಈ ವರ್ಷದ ಜೂನ್ ನಲ್ಲೇ ಈ ಅಪ್ಲಿಕೇಷನ್ ಅನ್ನು ಕಿತ್ತೊಗೆಯಲಾಗಿದೆ. ಆದರೂ ಇದು ಸ್ಮಾರ್ಟ್ ಫೋನ್ ಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೂ ಈ ಅಪ್ಲಿಕೇಷನ್ ಈಗಲೂ ವಿವಿಧ ಥರ್ಡ್ ಪಾರ್ಟಿ ಆಪ್ ಸ್ಟೋರ್ಸ್ ಹಾಗೂ ವೆಬ್ ಸೈಟ್ ಗಳಲ್ಲಿ ಡೌನ್ ಲೋಡ್ ಗೆ ಲಭ್ಯವಿದೆ.
ಸಂಶೋಧನೆ ಪ್ರಕಾರ, ಈ ಅಪ್ಲಿಕೇಷನ್ ಹತ್ತಾರು ಡಿವೈಸ್ ಗಳಲ್ಲಿ ಇನ್ ಸ್ಟಾಲ್ ಆಗಿದೆ. ಗೂಗಲ್ ನಿಂದ ಅಪ್ಲಿಕೇಷನ್ ಸ್ಥಗಿತವಾದ ನಂತರ ಇದು ಮತ್ತಷ್ಟು ಖತರ್ನಾಕ್ ಚಟುವಟಿಕೆಯಲ್ಲಿ ತೊಡಗಿದೆ. ಆಗಿನಿಂದ ಹಲವಾರು ವಂಚನೆ ವ್ಯವಹಾರಗಳು ವರದಿಯಾಗಿವೆ.
ನಿಮ್ಮ ಮೊಬೈಲ್ ಪರಿಶೀಲಿಸಿ. ಒಂದು ವೇಳೆ ಕೀ ಬೋರ್ಡ್ ಅಪ್ಲಿಕೇಷನ್ ನೀವು ಬಳಸುವ ಡಿವೈಸ್ ನಲ್ಲಿ ಅಪ್ಪಿತಪ್ಪಿ ಇನ್ ಸ್ಟಾಲ್ ಆಗಿದ್ದರೆ ತಕ್ಷಣ ಅದನ್ನು ಡಿಲೀಟ್ ಮಾಡುವುದು ಉತ್ತಮ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications