ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಿಂದ (ಎನ್ ಎಸ್ ಇ) ಮಂಗಳವಾರ ತಿಳಿಸಿರುವ ಪ್ರಕಾರ, ಕಾರ್ವಿ ಸ್ಟಾಕ್ ಬ್ರೋಕಿಂಗ್ ಬಳಿ ಹಣ- ಷೇರುಗಳು ಸಿಲುಕಿಕೊಂಡಿದ್ದ 2.35 ಲಕ್ಷ ಹೂಡಿಕೆದಾರರಿಗೆ ಒಟ್ಟಾರೆಯಾಗಿ 2,300 ಕೋಟಿ ರುಪಾಯಿ ತೀರುವಳಿಯಾಗಿ ನೀಡಲಾಗಿದೆ. ಕಾರ್ವಿ ಸ್ಟಾಕ್ ಬ್ರೋಕಿಂಗ್ ನ ಯಾರೆಲ್ಲ ಗ್ರಾಹಕರಿಗೆ 30,000 ರುಪಾಯಿ ತನಕದ ಬಾಕಿ ಇತ್ತೋ ಅಂಥವರಿಗೆ ಸಂದಾಯ ಆಗಿದೆ.
ಸೆಬಿ ಮಾರ್ಗದರ್ಶನದಲ್ಲಿ ಇದು ಪೂರ್ಣವಾಗುತ್ತಿದ್ದು, ಆಯಾ ಗ್ರಾಹಕರಿಗೆ ಷೇರುಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಕ್ಲಿಯರಿಂಗ್ ಕಾರ್ಪೊರೇಷನ್ ಗಳ ಬಳಿ ಇದ್ದ ಬ್ಯಾಂಕ್ ಖಾತ್ರಿ ಠೇವಣಿ ಬಳಕೆ ಹಾಗೂ ಕಾರ್ವಿ ಗ್ರೂಪ್ ಕಂಪೆನೀಸ್ ಬಳಿ ಇರುವ ಸೆಕ್ಯೂರಿಟಿಗಳನ್ನು ನಗದು ಮಾಡಲಾಗಿದೆ ಎಂದು ಎನ್ ಎಸ್ ಇ ವಕ್ತಾರರು ತಿಳಿಸಿದ್ದಾರೆ.
ಸೆಬಿ ಆದೇಶದಂತೆ 2019ರ ಡಿಸೆಂಬರ್ ನಿಂದ ಎನ್ ಎಸ್ ಇ ಹಾಗೂ ಬಿಎಸ್ ಇಯಲ್ಲಿ ಕಾರ್ವಿ ಸ್ಟಾಕ್ ಬ್ರೋಕಿಂಗ್ ಗೆ ಟ್ರೇಡಿಂಗ್ ಅವಕಾಶ ನಿಲ್ಲಿಸಲಾಗಿದೆ. ಇದರಿಂದಾಗಿ ಅಪಾರ ಸಂಖ್ಯೆಯಲ್ಲಿ ಬ್ರೋಕರ್ ಗ್ರಾಹಕರಿಗೆ ತಮ್ಮ ಹಣ, ಸೆಕ್ಯೂರಿಟೀಸ್ ಅಥವಾ ಎರಡೂ ಪಡೆಯುವುದು ಆಗುತ್ತಿರಲಿಲ್ಲ.

ಈಗಿನ ಗಮನ ಮುಖ್ಯವಾಗಿ ಸಣ್ಣ ಹೂಡಿಕೆದಾರರ ಮೇಲಿದೆ. ಯಾರಿಗೆ ಕಾರ್ವಿ ಸ್ಟಾಕ್ ಬ್ರೋಕಿಂಗ್ ನಿಂದ 30,000 ರುಪಾಯಿ ತನಕ ಬಾಕಿ ನೀಡಬೇಕೋ ಅಂಥವರಿಗೆ ಹಿಂತಿರುಗಿಸಲಾಗುತ್ತಿದೆ ಎಂದು ಎನ್ ಎಸ್ ಇ ಹೇಳಿಕೆಯಲ್ಲಿ ತಿಳಿಸಲಾಗಿದೆ.
2019ರ ಆಗಸ್ಟ್ ನಲ್ಲಿ ಎನ್ ಎಸ್ ಇಯಿಂದ ಕಾರ್ವಿ ಸ್ಟಾಕ್ ಬ್ರೋಕಿಂಗ್ ವ್ಯವಹಾರದ ಪುಸ್ತಕಗಳ ಲೆಕ್ಕ ಪರಿಶೋಧನೆ ಮಾಡಲಾಗಿತ್ತು. ಹಲವು ವರ್ಷಗಳಿಂದ ಗ್ರಾಹಕರ ಹಣವನ್ನು ಸಮೂಹದ ಇತರ ವ್ಯವಹಾರಗಳಿಗೆ ಕಾರ್ವಿ ಬಳಸುತ್ತಿದೆ ಎಂಬುದು ಆ ವೇಳೆ ಬಯಲಾಗಿತ್ತು.
More From GoodReturns

Liquor policy: ಕರ್ನಾಟಕ ಹೊಸ ಮದ್ಯ ನೀತಿ..ಯುನೈಟೆಡ್ ಬ್ರೂವರೀಸ್ ಮತ್ತು ಯುನೈಟೆಡ್ ಸ್ಪಿರಿಟ್ಸ್ ಷೇರುಗಳಲ್ಲಿ 5% ಏರಿಕೆ!

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications