ಪಾಕಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏರ್ ಲೈನ್ಸ್ ಗಳು 188 ದೇಶಗಳಲ್ಲಿ ಹಾರಾಟದಿಂದ ನಿಷೇಧ ಎದುರಿಸುವ ಸಾಧ್ಯತೆ ಇದೆ. ಪೈಲಟ್ ಲೈಸೆನ್ಸ್ ವಿಚಾರ ಹಾಗೂ ಅಂತರರಾಷ್ಟ್ರೀಯ ಗುಣಮಟ್ಟವನ್ನು ತಲುಪಲು ವಿಫಲವಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗುವ ಸಾಧ್ಯತೆ ಇದೆ. ಇಂಟರ್ ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಷನ್ ನಿಯಮದ ಅನುಸಾರ ಗುಣಮಟ್ಟವನ್ನು ತಲುಪಲು ವಿಫಲವಾಗಿದೆ ಎಂಬ ಮಾತು ಬಂದಿದೆ.
ಲೈಸೆನ್ಸ್ ಹಗರಣದ ಕಾರಣಕ್ಕೆ ಈಗಾಗಲೇ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ (ಪಿಐಎ) ಅನ್ನು ಯುಕೆ ಹಾಗೂ ಯುರೋಪಿಯನ್ ಒಕ್ಕೂಟಗಳಿಂದ ನಿಷೇಧಿಸಲಾಗಿದೆ. ಕಳೆದ ಆಗಸ್ಟ್ ನಲ್ಲಿ ಸ್ವತಃ ಪಾಕಿಸ್ತಾನದ ವಿಮಾನ ಯಾನ ಸಚಿವರು ಈ ವಿಷಯವನ್ನು ಬಹಿರಂಗ ಮಾಡಿದ್ದರು.
ಪಿಐಎಯ ನೂರಾ ನಲವತ್ತೊಂದು ಸೇರಿದಂತೆ ಇನ್ನೂರಾ ನಲವತ್ತೆರಡು ಪೈಲಟ್ ಗಳ ಬಳಿ ನಕಲಿ ದಾಖಲೆ ಇವೆ ಎಂದಿದ್ದರು. ಇನ್ನು ಐಸಿಎಒದಿಂದ ಪಾಕಿಸ್ತಾನ ನಾಗರಿಕ ವಿಮಾನ ಪ್ರಾಧಿಕಾರಕ್ಕೆ ಸುರಕ್ಷತೆಗೆ ಸಂಬಂಧಿಸಿದಂತೆ ಗಂಭೀರ ಎಚ್ಚರಿಕೆಯನ್ನು ನೀಡಲಾಗಿತ್ತು.

ನವೆಂಬರ್ ಮೂರರಂದು ಐಸಿಎಒ ಪಿಸಿಎಎಗೆ ಪತ್ರ ಬರೆದಿದೆ. ಲೈಸೆನ್ಸ್ ಹಾಗೂ ಪೈಲಟ್ ಗಳ ತರಬೇತಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟ ಕಾಪಾಡಿಕೊಳ್ಳಲು ವಿಫಲವಾಗಿರುವ ಬಗ್ಗೆ ಗಮನ ಸೆಳೆದಿದೆ. ಆ ಕಾರಣಕ್ಕೆ ಪಾಕಿಸ್ತಾನದ ವಿಮಾನಗಳು, ಪೈಲಟ್ ಗಳಿಗೆ 188 ದೇಶಗಳಲ್ಲಿ ಹಾರಾಟದಿಂದ ನಿಷೇಧ ಹಾಕುವ ಸಾಧ್ಯತೆ ಇದೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಪಾಕಿಸ್ತಾನ ಏರ್ ಲೈನ್ಸ್ ಪೈಲಟ್ಸ್ ಅಸೋಸಿಯೇಷನ್ ವಕ್ತಾರ ಈ ಬಗ್ಗೆ ಮಾತನಾಡಿ, ಇದರ ಪರಿಣಾಮ ಗಂಭೀರವಾಗಿ ಇರುತ್ತದೆ. ಪಾಕಿಸ್ತಾನದ ವಿಮಾನ ಯಾನ ಕ್ಷೇತ್ರವೇ ನಾಶವಾಗುತ್ತದೆ. ಈ ಬಗ್ಗೆ ಕಳೆದ ಜೂನ್ ನಿಂದಲೇ ಒಕ್ಕೂಟ ಧ್ವನಿ ಎತ್ತುತ್ತಿದೆ. ಆದರೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದಿದ್ದಾರೆ.
ತುರ್ತಾಗಿ ಟಾಸ್ಕ್ ಫೋರ್ಸ್ ವೊಂದನ್ನು ರಚಿಸಿ, ಈ ಸಮಸ್ಯೆ ಬಗೆಹರಿಸಲು ಪ್ರಧಾನಿ ಇಮ್ರಾನ್ ಖಾನ್ ಪ್ರಯತ್ನಿಸಬೇಕು ಎಂದು ಒಕ್ಕೂಟ ಮನವಿ ಮಾಡಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications