ನೀವು ಟ್ರಾಫಿಕ್ ನಿಯಮ ಮೀರಿ ದಂಡವನ್ನು ಇನ್ನು ಕೂಡಾ ಪಾವತಿ ಮಾಡಿಲ್ವ?. ಹಾಗಿದ್ದರೆ ನೀವು ಈಗಲೇ ಪಾವತಿ ಮಾಡಿಬಿಡುವುದು ಒಳ್ಳೆಯದು. 50,000 ರೂಪಾಯಿಗಿಂತ ಅಧಿಕ ದಂಡ ಬಾಕಿ ಇದ್ದರೆ, ವಾಹನಗಳ ಮಾಲೀಕರ ವಿರುದ್ಧ ವಿಶೇಷ ಅಭಿಯಾನದಲ್ಲಿ ದಕ್ಷಿಣ ವಿಭಾಗದ ಸಂಚಾರ ಪೊಲೀಸರು ಕಾರು ಸೇರಿದಂತೆ 85 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈಗ, ಮಾಲೀಕರು ತಮ್ಮ ವಾಹನಗಳನ್ನು ಮತ್ತೆ ಪಡೆಯಬೇಕಾದರೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ ಅಥವಾ ದಂಡದಲ್ಲಿ ಸ್ವಲ್ಪ ರಿಯಾಯಿತಿ ಕೋರಿ ಸಂಬಂಧಿಸಿದ ಸಂಚಾರ ನ್ಯಾಯಾಲಯವನ್ನು ಸಂಪರ್ಕಿಸಬೇಕು. ಏನೇ ಆಗಲಿ ದಂಡ ಕಟ್ಟಲೇಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಜಯನಗರ, ಬನಶಂಕರಿ, ಕೆಎಸ್ ಲೇಔಟ್, ಬಸವನಗುಡಿ, ವಿವಿ ಪುರಂ, ಹುಳಿಮಾವು, ಆಡುಗೋಡಿ, ಮೈಕೋ ಲೇಔಟ್, ಮಡಿವಾಳ, ಎಚ್ಎಸ್ಆರ್ ಲೇಔಟ್, ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಬೆಳ್ಳಂದೂರಿನಲ್ಲಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ ಪೊಲೀಸ್ ಇಲಾಖೆ, ಮೀರಿದರೆ ದಂಡ
ಜಯನಗರ ಒಂದರಲ್ಲೇ 26 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಸಿಪಿ (ಟ್ರಾಫಿಕ್-ದಕ್ಷಿಣ) ಶಿವಪ್ರಕಾಶ್ ದೇವರಾಜ್ ಮಾತನಾಡಿ, ನಗರದ ದಕ್ಷಿಣ ಭಾಗದಲ್ಲಿ ಕನಿಷ್ಠ 850 ವಾಹನಗಳು 50,000 ಮತ್ತು ಅದಕ್ಕಿಂತ ಹೆಚ್ಚಿನ ದಂಡ ಬಾಕಿ ಉಳಿದಿದೆ ಎಂದು ಹೇಳಿದ್ದಾರೆ.
"ಈಗ, ನಾವು ಅಂತಹ ವಾಹನಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿದ್ದೇವೆ. ಈಗ ಅರ್ಧದಷ್ಟು ಹಣ ಪಾವತಿಸಿ ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಬಹುದೇ ಎಂದು ಮಾಲೀಕರು ಕೇಳುತ್ತಿದ್ದಾರೆ. ಅದು ಸಾಧ್ಯವಿಲ್ಲ," ಎಂದು ಶಿವಪ್ರಕಾಶ್ ದೇವರಾಜ್ ತಿಳಿಸಿದರು.
ದಂಡದ ಮೊತ್ತವು ವಾಹನದ ಪ್ರಸ್ತುತ ಬೆಲೆಗಿಂತ ಹೆಚ್ಚಿದ್ದರೆ ಏನು ಮಾಡಬೇಕು ಎಂದು ದೇವರಾಜ್ರನ್ನು ಮಾಧ್ಯಮಗಳನ್ನು ಪ್ರಶ್ನಿಸಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಕೆಲವು ಮಾಲೀಕರು ವಾಹನವನ್ನು ಒಪ್ಪಿಸಿ ಮತ್ತೆ ಪೊಲೀಸ್ ಠಾಣೆಗೆ ಬಿಡುವುದಾಗಿ ಹೇಳಿದರು. ಇದು ಸಂಭವಿಸಲು ಸಾಧ್ಯವಿಲ್ಲ. ಹೇಗಾದರೂ, ಅವರು ದಂಡವನ್ನು ಪಾವತಿಸಬೇಕು. ನಾವು ಎರಡು ವಾರಗಳ ಕಾಲ ಕಾಯುತ್ತೇವೆ ಮತ್ತು ನಂತರ ಸಂಬಂಧಪಟ್ಟ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸುತ್ತೇವೆ," ಎಂದು ಹೇಳಿದ್ದಾರೆ.
ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಮಾತನಾಡಿ, ನಗರದಲ್ಲಿ ಕನಿಷ್ಠ 2,681 ವಾಹನಗಳಿದ್ದು, 50,000 ರೂಪಾಯಿ ಅಥವಾ ಅದಕ್ಕಿಂತ ಅಧಿಕ ದಂಡ ಪಾವತಿಸಬೇಕಾದ ವಾಹನಗಳಿವು ಎಂದಿದ್ದಾರೆ.
"ನಾವು ಎಲ್ಲಾ ಮಾಲೀಕರನ್ನು ತಲುಪುತ್ತೇವೆ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳುತ್ತೇವೆ. ಅನೇಕ ಸಂದರ್ಭಗಳಲ್ಲಿ, ವಿಳಾಸಗಳನ್ನು ಬದಲಾಯಿಸಿರಬಹುದು ಅಥವಾ ವಾಹನವನ್ನು ಮಾರಾಟ ಮಾಡಿರಬಹುದು. ಅಂತಹ ಸಂದರ್ಭಗಳಲ್ಲಿ, ನಾವು ಮೊದಲ ಮಾಲೀಕರು ಮತ್ತು ಪ್ರಸ್ತುತ ಮಾಲೀಕರನ್ನು ಸಂಪರ್ಕಿಸುತ್ತೇವೆ. ಆದರೆ, ದಂಡವನ್ನು ಪಾವತಿಸುವ ಜವಾಬ್ದಾರಿಯು ಪ್ರಸ್ತುತ ಮಾಲೀಕರ ಮೇಲಿರುತ್ತದೆ," ಎಂದು ತಿಳಿಸಿದರು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications