ನೀವು ಯುಪಿಐ ಪೇಮೆಂಟ್ ಬಳಸುತ್ತಿದ್ದೀರಾ? ಹಾಗಿದ್ದಲ್ಲಿ ಈ ಸುದ್ದಿ ನಿಮ್ಮ ಗಮನಕ್ಕೆ ಬಂದಿದೆಯಾ? ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್) ಮೂಲಕ ಮಾಡಿದ ಪರ್ಸನ್ ಟು ಪರ್ಸನ್ (P2P) ಪಾವತಿಗೆ ದೇಶದ ದೊಡ್ಡ ಖಾಸಗಿ ಬ್ಯಾಂಕ್ ಗಳು ಶುಲ್ಕ ಹಾಕುತ್ತಿವೆ ಎಂದು ವರದಿ ಆಗಿದೆ. ಒಂದು ತಿಂಗಳಲ್ಲಿ 20 ವ್ಯವಹಾರಗಳು ದಾಟಿದಲ್ಲಿ 2.5 ರುಪಾಯಿಯಿಂದ 5 ರುಪಾಯಿ ತನಕ ಶುಲ್ಕ ಹಾಕಲಾಗುತ್ತಿದೆಯಂತೆ.
ಬೇಕಾಬಿಟ್ಟಿ ವ್ಯವಹಾರಗಳನ್ನು ಮಾಡುತ್ತಾಮ್ ವ್ಯವಸ್ಥೆ ಮೇಲೆ ಹೊರೆ ಹಾಕುವವರಿಗೆ ಕಡಿವಾಣ ಬೀಳಬೇಕು ಎಂಬ ಕಾರಣಕ್ಕೆ ಈ ಶುಲ್ಕ ಹಾಕಲಾಗುತ್ತಿದೆ ಎಂದು ಬ್ಯಾಂಕ್ ಗಳು ಹೇಳಿವೆ. ಆದರೆ, ಸರ್ಕಾರದಿಂದ ಯುಪಿಐ ಉಚಿತವಾಗಿ ಒದಗಿಸಲಾಗುತ್ತಿದೆ. 1000 ರುಪಾಯಿ ಅಥವಾ ಅದರೊಳಗಿನ ಮೊತ್ತಕ್ಕೆ 2.5 ರುಪಾಯಿ ಮತ್ತು 1000 ರುಪಾಯಿ ಮೇಲ್ಪಟ್ಟ ಮೊತ್ತಕ್ಕೆ 5 ರುಪಾಯಿ ಶುಲ್ಕ ಇದೆ. ಜಿಎಸ್ ಟಿ ಪ್ರತ್ಯೇಕವಾಗಿ ಹಾಕಲಾಗುತ್ತದೆ.
ಪಾವತಿ ಪುಕ್ಕಟೆ, ವರ್ಗಾವಣೆಗೆ ಶುಲ್ಕ ವಿಧಿಸುವ ಮೂಲಕ ಕಾನೂನನ್ನು ತಮ್ಮಿಷ್ಟಕ್ಕೆ ತಕ್ಕಂತೆ ಬ್ಯಾಂಕ್ ಗಳು ವ್ಯಾಖ್ಯಾನಿಸುತ್ತಿವೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಬ್ಯಾಂಕಿಂಗ್ ವಲಯದ ಇತರ ಬ್ಯಾಂಕ್ ಗಳನ್ನು ದಾರಿ ತಪ್ಪಿಸಿದಂತಾಗುತ್ತದೆ ಎಂದು ವರದಿಯೊಂದರಲ್ಲಿ ಹೇಳಲಾಗಿದೆ.

ಇಂಥ ವ್ಯವಹಾರಗಳ ನಿರ್ವಹಣೆಗೆ ಎಲ್ಲಿಯ ತನಕ ಬ್ಯಾಂಕ್ ಗಳಿಗೆ ವೆಚ್ಚ ಬರುವುದಿಲ್ಲವೋ ಅಲ್ಲಿಯ ತನಕ ಅದನ್ನು ಗ್ರಾಹಕರ ಮೇಲೆ ಹಾಕಬಾರದು ಎಂಬುದು ವಾದವಾಗಿದೆ. ಬ್ಯಾಂಕ್ ಗಳು ನಗದು ವ್ಯವಹಾರ ನಡೆಸಲು ತಗುಲುವ ವೆಚ್ಚಕ್ಕಿಂತ ಯುಪಿಐ ಸೇವೆಗೆ ಆಗುವ ಖರ್ಚು ಸಿಕ್ಕಾಪಟ್ಟೆ ಕಡಿಮೆ ಎಂದು ಹೇಳಳಾಗಿದೆ.
ವರದಿಗಳ ಪ್ರಕಾರ, ನಗದಿನ ನಂತರ ಅತಿ ಹೆಚ್ಚು ಬಳಕೆ ಮಾಡುವ ಪಾವತಿ ಮಾಡುವುದು ಯುಪಿಐ ಮೂಲಕ. ಲಾಕ್ ಡೌನ್ ಅವಧಿಯಲ್ಲಿ ಒಂದು ತಿಂಗಳಿಂದ ಮತ್ತೊಂದು ತಿಂಗಳಿಗೆ 8%ನಂತೆ ಬಳಕೆ ಹೆಚ್ಚುತ್ತಲೇ ಇದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications