ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ವ್ಯವಹಾರಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಆರ್ಥಿಕ ಪ್ಯಾಕೇಜ್ ಗಳನ್ನು ಕೇಂದ್ರ ಸರ್ಕಾರ ಘೋಷಿಸುತ್ತಾ ಬಂದಿದೆ. ಇತ್ತೀಚೆಗೆ ಸರ್ಕಾರಿ ನೌಕರರ ಕೊಳ್ಳುವಿಕೆ, ಪ್ರಯಾಣ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ವಿಶೇಷ ಯೋಜನೆ ಪ್ರಕಟಿಸಿದ್ದರು. ಈಗ ಈ ಯೋಜನೆಯ ಲಾಭವನ್ನು ಗುರುವಾರ(ಅ.29)ದಿಂದ ಖಾಸಗಿ ವಲಯಕ್ಕೂ ವಿಸ್ತರಣೆಗೊಳಿಸಲಾಗಿದೆ.
ಎಲ್ ಟಿಸಿ ನಗದು ವೋಚರ್ ಯೋಜನೆಯಡಿ ಸಿಗುವ ಆದಾಯ ತೆರಿಗೆ ವಿನಾಯತಿ ಸೌಲಭ್ಯವು ರಾಜ್ಯ ಸರ್ಕಾರಿ ನೌಕರರು, ಖಾಸಗಿ ವಲಯ ಸಿಬ್ಬಂದಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೂ ಈಗ ಅನ್ವಯವಾಗಲಿದೆ.
ಎಲ್ ಟಿಸಿ ನಗದು ವೋಚರ್ ಯೋಜನೆಯಡಿ ಪ್ರಯಾಣದ ದರ ತೆರಿಗೆ ರಹಿತವಾಗಿರುತ್ತದೆ. ವಿಮಾನ ಅಥವಾ ರೈಲು ಪ್ರಯಾಣ ದರ ದಿನದ ಲೆಕ್ಕದಲ್ಲಿ ಮರು ಪಾವತಿ ಹಾಗೂ 10 ದಿನಗಳ ಪೇಯ್ಡ್ ಲೀವ್ ಸಿಗಲಿದೆ. ಗರಿಷ್ಠ 36, 000 ಪ್ರತಿ ವ್ಯಕ್ತಿಗೆ ನಿಗದಿತ ಮೊತ್ತಕ್ಕೆ ವಿನಾಯತಿ ಪಡೆಯಬಹುದು.

ಸೌಲಭ್ಯ ಪಡೆಯುವುದು ಹೇಗೆ?
* 3 ಪಟ್ಟು ಹೆಚ್ಚು ದರದ ಉತ್ಪನ್ನ ಹಾಗೂ ಸೇವೆ ಬಳಸಬೇಕು, ಒಂದು ಬಾರಿ ರಜೆ ಎನ್ ಕ್ಯಾಶ್ ಮೆಂಟ್ ಲಭ್ಯ
* ಡಿಜಿಟಲ್ ಪೇಮೆಂಟ್, ಜಿಎಸ್ಟಿ ರಸೀತಿ ಪಡೆದುಕೊಳ್ಳಬೇಕು.
* ಶೇ 12ರಷ್ಟು ಜಿಎಸ್ಟಿಯುಳ್ಳ ಉತ್ಪನ್ನಗಳನ್ನು ನೋಂದಾಯಿತ ಮಳಿಗೆ, ಸೇವಾದಾರರಿಂದ ಪಡೆಯಬೇಕು.
* ಮಾರ್ಚ್ 31, 2021ರೊಳಗೆ ಈ ಸೌಲಭ್ಯ ಬಳಸಿ ಖರ್ಚು ಮಾಡಬೇಕು.

ಡೀಮ್ಡ್ ಎಲ್ ಟಿಸಿ ದರ 80,000 ರು(20,000 X 4) ಇದ್ದರೆ ಈ ಯೋಜನೆಯ ಲಾಭ ಪಡೆಯಲು 2,40,000 ರು ಖರ್ಚು ಮಾಡಬೇಕಾಗುತ್ತದೆ. ಆಗ ಮಾತ್ರ ಪೂರ್ತಿ ಲಾಭ, ಐಟಿ ವಿನಾಯತಿ ಸಿಗಲಿದೆ. ಒಂದು ವೇಳೆ 1,80,000 ರು ಮಾತ್ರ ಖರ್ಚು ಮಾಡಿದ್ದರೆ, ಅಂಥ ಸಿಬ್ಬಂದಿಗೆ ಶೇ 75ರಷ್ಟು (ಸುಮಾರು 60,000 ರು) ತನಕ ಮಾತ್ರ ಡೀಮ್ಡ್ ಎಲ್ ಟಿಸಿ ದರ ಹಾಗೂ ಸಂಬಂಧಪಟ್ಟ ಐಟಿ ವಿನಾಯತಿ ಸಿಗಲಿದೆ. ಉದ್ಯೋಗಿಗಳ ಒಟ್ಟು ಖರ್ಚಿನ ಮೇಲೆ ಐಟಿ ವಿನಾಯಿತಿ ಶೇ6 ರಿಂದ 9 ರಷ್ಟು ಸಿಗಲಿದೆ ಎಂದು ನಂಗಿಯಾ ಅಂಡ್ ಕೋ ಎಲ್ ಎಲ್ ಪಿ ಪಾರ್ಟ್ನರ್ ಶೈಲೇಶ್ ಕುಮಾರ್ ಹೇಳಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications