ಜನವರಿ 1, 2025 ರಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶಾದ್ಯಂತ ಲಕ್ಷಾಂತರ ಬ್ಯಾಂಕ್ ಖಾತೆಗಳ ಮೇಲೆ ಪರಿಣಾಮ ಬೀರುವ ನಿರ್ಣಾಯಕ ಬದಲಾವಣೆಗಳನ್ನು ಜಾರಿಗೆ ತರಲು ನಿರ್ಧಾರ ಮಾಡಿದೆ.
ಹೌದು, ಬ್ಯಾಂಕ್ ವಲಯದಲ್ಲಿ ಆಗುವ ವಂಚನೆಯನ್ನು ತಡೆಯಲು, ಡಿಜಿಟಲ್ ಬ್ಯಾಂಕಿಂಗ್ ಅನ್ನು ಸುಧಾರಿಸಲು ಮತ್ತು ಹಣಕಾಸಿನ ಅಕ್ರಮಗಳನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಜನವರಿ 1 ರಿಂದ ನಿಷ್ಕ್ರಿಯ ಬ್ಯಾಂಕ್ ಖಾತೆಗಳನ್ನು ಮುಚ್ಚಲು ನಿರ್ಧಾರ ಮಾಡಿದೆ.

ನಿಷ್ಕ್ರಿಯ, ಸುಪ್ತ ಮತ್ತು ಶೂನ್ಯ ಬ್ಯಾಲೆನ್ಸ್ ಖಾತೆಗಳಿಗೆ ಖಾತೆಗಳನ್ನು ಮುಚ್ಚಲು ನಿರ್ಧಾರ ಮಾಡಿದೆ. ನೀವು ಇನ್ನೂ ಮುಂದೆ ನಿಮ್ಮ ಖಾತೆಗಳನ್ನು ಸಕ್ರಿಯವಾಗಿರಿಸಿಕೊಳ್ಳಬೇಕು ಅಥವಾ ಅನಗತ್ಯವಾದವುಗಳನ್ನು ಮುಚ್ಚಬೇಕು. ಅನೇಕರು ಬ್ಯಾಂಕ್ನಲ್ಲಿ ಹಲವಾರು ಖಾತೆಗಳನ್ನು ತೆರೆದು ನಿರ್ವಹಣೆ ಮಾಡದೇ ಆಗಿ ಬಿಟ್ಟಿರುತ್ತಾರೆ ಇದರಿಂದ ಹ್ಯಾಂಕರ್ ಗಳು ಇದನ್ನು ದುರುಪಯೋಗ ಮಾಡಿಕೊಳ್ಳಹುದು ಇದನ್ನು ತಡೆಯಲು ರಿಸರ್ವ್ ಬ್ಯಾಂಕ್ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.
RBI ಆದೇಶ
ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ಆದೇಶದಲ್ಲಿ ದೇಶಾದ್ಯಂತ ಲಕ್ಷಾಂತರ ಬ್ಯಾಂಕ್ ಖಾತೆಗಳನ್ನು ಜನವರಿ 1 ರಿಂದ ಮುಚ್ಚಬಹುದು. ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ವಂಚನೆ ಚಟುವಟಿಕೆಗಳನ್ನು ತಡೆಯಲು ನಡೆಯುತ್ತಿರುವ ಪ್ರಯತ್ನಗಳಲ್ಲಿ, ಮೂರು ನಿರ್ದಿಷ್ಟ ರೀತಿಯ ಬ್ಯಾಂಕ್ ಖಾತೆಗಳನ್ನು ಮುಚ್ಚುವ ಯೋಜನೆಗಳನ್ನು RBI ಘೋಷಿಸಿದೆ.
ಈ ಹೊಸ ಪ್ರಯತ್ನವು ಆಧುನೀಕರಣವನ್ನು ಉತ್ತೇಜಿಸುವುದು ಮತ್ತು ಡಿಜಿಟಲ್ ಬ್ಯಾಂಕಿಂಗ್ ಅಭ್ಯಾಸಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಬ್ಯಾಂಕ್ ಖಾತೆ
ಮುಚ್ಚಲಾಗುವ ಖಾತೆಗಳಲ್ಲಿ ಒಂದು ವಿಧವೆಂದರೆ ನಿಷ್ಕ್ರಿಯ ಮತ್ತು ಸುಪ್ತ ಖಾತೆಗಳನ್ನು ಒಳಗೊಂಡಿದೆ.
ನಿಷ್ಕ್ರಿಯ ಖಾತೆಗಳು
ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಯಾವುದೇ ವಹಿವಾಟುಗಳನ್ನು ಮಾಡದ ಖಾತೆಗಳು
ಸುಪ್ತ ಖಾತೆಗಳು
ಒಂದು ವರ್ಷದವರೆಗೆ ಸ್ಪರ್ಶಿಸದ ಖಾತೆಗಳನ್ನು ಮುಚ್ಚಲು ನಿರ್ಧಾರ ಮಾಡಿದೆ.
ಶೂನ್ಯ ಬ್ಯಾಲೆನ್ಸ್ ಖಾತೆ
ನಿಮ್ಮ ದಿನ ನಿತ್ಯದ ವಹಿವಾಟುಗಳು ನಿಮ್ಮ ಖಾತೆಗಳನ್ನು ಸಕ್ರಿಯವಾಗಿ ಮತ್ತು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿರುವ ಶೂನ್ಯ ಬ್ಯಾಲೆನ್ಸ್ ಖಾತೆಗಳನ್ನು ಮುಚ್ಚುವ ನಿರ್ಧಾರವನ್ನು ಸಹ RBI ಘೋಷಿಸಿದೆ.
ಹಣಕಾಸಿನ ಅಕ್ರಮಗಳನ್ನು ತಡೆಯುವ ಗುರಿ
ಖಾತೆಗಳು ಹಾಗೇ ಇದ್ದರೆ ದುರುಪಯೋಗಕ್ಕೆ ಬಳಕೆಯಾಗಬಹುದು, ಸೈಬರ್ ಹ್ಯಾಕರ್ಗಳು ಮತ್ತು ಕಾನೂನುಬಾಹಿರ ಹಣ ವರ್ಗಾವಣೆಗಳಿಗೆ ಸಂಭಾವ್ಯ ಗುರಿಯನ್ನು ಸೃಷ್ಟಿಸುತ್ತವೆ. ಈ ಖಾತೆಗಳನ್ನು ಮುಚ್ಚುವ ಮೂಲಕ, RBI ಹಣಕಾಸಿನ ಅಕ್ರಮಗಳನ್ನು ತಡೆಯುವ ಗುರಿಯನ್ನು ಹೊಂದಿದೆ.
ನೀವು ಬಹು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಮುಂದಿನ ದಿನಮಾನಗಳಲ್ಲಿ ನಿಮಗೆ ಅಗತ್ಯವಿರುವ ಖಾತೆಯನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು, ಅನಗತ್ಯವಾದವುಗಳನ್ನು ಮುಚ್ಚುವುದು ಅಥವಾ ನಿಮ್ಮ ಎಲ್ಲಾ ಖಾತೆಗಳನ್ನು ಸಕ್ರಿಯವಾಗಿ ಬಳಕೆ ಮಾಡವುದನ್ನು ಪ್ರಾರಂಭಿಸುವುದು ಒಳ್ಳೆಯದು.
ಭಾರತೀಯ ರಿಸರ್ವ್ ಬ್ಯಾಂಕ್
ಹಣಕಾಸಿನ ವಹಿವಾಟುಗಳಿಗೆ ಬ್ಯಾಂಕ್ ಖಾತೆಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು.ಕೇವಲ ಬಳಕೆಯಾಗದೆ ಇರುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ದೀರ್ಘಕಾಲದವರೆಗೆ ಬಳಸದ ಶೂನ್ಯ ಬ್ಯಾಲೆನ್ಸ್ ಹೊಂದಿರುವ ಖಾತೆಯನ್ನು ನೀವು ಹೊಂದಿದ್ದರೆ, ಅದನ್ನು ಮತ್ತೆ ಸಕ್ರಿಯಗೊಳಿಸಲು ನೀವು ಕ್ರಮ ತೆಗೆದುಕೊಳ್ಳಬಹುದು.
ಬ್ಯಾಂಕ್ ಖಾತೆದಾರರು ತಮ್ಮ ಖಾತೆಗಳನ್ನು ತೆರೆದಿಡಲು ಬಯಸಿದರೆ, ಪ್ರಕ್ರಿಯೆಯು ಸರಳವಾಗಿದೆ. ನಿಮ್ಮ ಬ್ಯಾಂಕ್ಗೆ ಭೇಟಿ ನೀಡಿ ಮತ್ತು ಖಾತೆಯನ್ನು ಸಕ್ರಿಯಗೊಳಿಸಲು ವಿನಂತಿಯನ್ನು ಸಲ್ಲಿಸುವುದು ಮುಖ್ಯವಾಗುತ್ತದೆ.
2025 ರಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಆಗುವ ಬದಲಾವಣೆಗಳು
KYC (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಕಾರ್ಯವಿಧಾನಗಳನ್ನು ಮರುಪೂರ್ಣಗೊಳಿಸುವುದನ್ನು ಒಳಗೊಂಡಿರುತ್ತದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ, ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು ಮತ್ತು ನಿಯಮಿತ ಬಳಕೆಗೆ ತರಬಹುದು.
ನಿಷ್ಕ್ರಿಯ, ಸುಪ್ತ ಮತ್ತು ಶೂನ್ಯ ಬ್ಯಾಲೆನ್ಸ್ ಖಾತೆಗಳಿಗೆ ಸಂಬಂಧಿಸಿದ ಅಪಾಯಗಳನ್ನು ಪರಿಹರಿಸುವ ಮೂಲಕ, RBI ದುರುಪಯೋಗವನ್ನು ತಡೆಯಲು ಮತ್ತು ಖಾತೆದಾರರನ್ನು ಮುನ್ನೆಚ್ಚರಿಕೆಯ ಬ್ಯಾಂಕಿಂಗ್ ಅಭ್ಯಾಸಗಳನ್ನು ಅನುಸರಿಸಲು ಈ ಮೇಲಿನ ಕ್ರಮನ್ನು ಕೈಗೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧಾರ ಮಾಡಿದೆ.
ಗ್ರಾಹಕರಿಗೆ ಮುನ್ನೆಚ್ಚರಿಕೆ ಕ್ರಮಗಳು
ತಮ್ಮ ಖಾತೆಯು ಎರಡು ವರ್ಷಗಳಿಂದ ನಿಷ್ಕ್ರಿಯವಾಗಿದ್ದರೆ, ಅದನ್ನು ಮರುಸಕ್ರಿಯಗೊಳಿಸಲು ತಕ್ಷಣದ ಕ್ರಮವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
KYC ಪ್ರಕ್ರಿಯೆಯನ್ನು ಈಗಾಗಲೇ ಪೂರ್ಣಗೊಳಿಸದಿದ್ದರೆ ಮೊದಲು ಪೂರ್ಣಗೊಳಿಸಿ, ನೀವು ನಿಮ್ಮ ಬ್ಯಾಂಕ್ಗೆ ಭೇಟಿ ನೀಡಬೇಕಾಗಬಹುದು ಅಥವಾ ಆನ್ಲೈನ್ನಲ್ಲಿ ನಿಮ್ಮ ವಿವರಗಳನ್ನು ಸೇರಿಸಬಹುದು.
ನಿಮ್ಮ ಖಾತೆಯನ್ನು ನಿಷ್ಕ್ರಿಯವೆಂದು ಫ್ಲ್ಯಾಗ್ ಮಾಡುವುದನ್ನು ತಪ್ಪಿಸಲು, ನಿಮ್ಮ KYC ವಿವರಗಳನ್ನು ನಿಯಮಿತವಾಗಿ ನವೀಕರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಅಗತ್ಯವಿದ್ದಾಗ ಬ್ಯಾಂಕ್ನೊಂದಿಗೆ ನಿಮ್ಮ ಗುರುತು ಮತ್ತು ವಿಳಾಸವನ್ನು ಪರಿಶೀಲಿಸುವುದು ಮುಖ್ಯವಾಗತ್ತದೆ.
ಸಾಮಾನ್ಯವಾಗಿ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗುತ್ತದೆ. ನಿಮ್ಮ ಖಾತೆಯನ್ನು ನಿಷ್ಕ್ರಿಯವೆಂದು ಪರಿಗಣಿಸುವುದನ್ನು ತಡೆಯಲು ನಿಮ್ಮ ಬ್ಯಾಂಕ್ನ ನಿರ್ದಿಷ್ಟ ಮಾರ್ಗಸೂಚಿಗಳನ್ನು ಪರೀಕ್ಷಿಸಲು ಮತ್ತು ಅಗತ್ಯವಿರುವ ಬ್ಯಾಲೆನ್ಸ್ ಅನ್ನು ನಿರ್ವಹಿಸಲು ಮರೆಯದಿರಿ.
ಆರ್ಬಿಐನ 26ನೇ ಗವರ್ನರ್ ಆಗಿ ಇತ್ತೀಚೆಗೆ ಸಂಜಯ್ ಮಲ್ಹೋತ್ರಾ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿ ಡಿಸೆಂಬರ್ 10 ರಂದು ಕೊನೆಗೊಂಡಿತ್ತು. ಹೀಗಾಗಿ, ಮಲ್ಹೋತ್ರಾ ಅವರನ್ನು 26ನೇ ಆರ್ಬಿಐ ಗವರ್ನರ್ ಆಗಿ ಆಯ್ಕೆ ಮಾಡಲಾಗಿದೆ. ಇವರು ಮುಂದಿನ ಮೂರು ವರ್ಷ ಕಾಲ ಆರ್ಬಿಐನ ಗವರ್ನರ್ ಆಗಿ ಕೆಲಸ ನಿರ್ವಹಿಸಲಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications