ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮತ್ತೆ ಎರಡು ಬ್ಯಾಂಕ್ಗಳ ಲೈಸೆನ್ಸ್ (ಪರವಾನಗಿ) ರದ್ದು ಮಾಡಿದ್ದು, ಈ ಪೈಕಿ ಒಂದು ಬ್ಯಾಂಕ್ ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಆರ್ಬಿಐ ಎರಡು ಕೋಪರೇಟಿವ್ ಬ್ಯಾಂಕ್ಗಳ ಲೈಸೆನ್ಸ್ ರದ್ದು ಮಾಡಿದೆ. ಮಹಾರಾಷ್ಟ್ರದ ಸತಾರದ ಹರೀಹರೇಶ್ವರ ಸಹಕಾರಿ ಬ್ಯಾಂಕ್ ಲಿಮಿಟೆಡ್ ಮತ್ತು ಕರ್ನಾಟಕದ ಶ್ರೀ ಶಾರದ ಮಹಿಳಾ ಕೋಆಪರೇಟಿವ್ ಬ್ಯಾಂಕ್ ಮಿಲಿಟೆಡ್ ತನ್ನ ಲೈಸೆನ್ಸ್ ಅನ್ನು ಕಳೆದುಕೊಂಡಿದೆ.
ಈ ಎರಡು ಕೋಆಪರೇಟಿವ್ ಬ್ಯಾಂಕ್ಗಳ ಲೈಸೆನ್ಸ್ ಅನ್ನು ರದ್ದು ಮಾಡಿ, ಬ್ಯಾಂಕಿಂಗ್ ವಹಿವಾಟನ್ನು ನಿಲ್ಲಿಸುವಂತೆ ಜುಲೈ 11, 2023ರ ದಿನಾಂಕವನ್ನು ಉಲ್ಲೇಖಿಸಿ ಎರಡು ಪ್ರತ್ಯೇಕ ಆದೇಶ ಪತ್ರವನ್ನು ಆರ್ಬಿಐ ಬಿಡುಗಡೆ ಮಾಡಿದೆ. ಈ ಸಹಕಾರಿ ಬ್ಯಾಂಕ್ಗಳು ಸಾಕಷ್ಟು ಬಂಡವಾಳ ಮತ್ತು ಗಳಿಕೆಯನ್ನು ಹೊಂದಿಲ್ಲ. ಹಾಗೆಯೇ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನು ಅನುಸರಿಸುವಲ್ಲಿ ವಿಫಲವಾಗಿದೆ ಎಂದು ಆರ್ಬಿಐ ಹೇಳಿದೆ.

ಆರ್ಬಿಐ ಏನು ಹೇಳುತ್ತದೆ?
"ಈ ಎರಡು ಬ್ಯಾಂಕುಗಳ ಕಾರ್ಯನಿರ್ವಹಣೆ ಮುಂದುವರಿಕೆಯಾಗುವುದು ಬ್ಯಾಂಕ್ಗಳ ಗ್ರಾಹಕರ ಹಿತಾಸಕ್ತಿಗೆ ಹಾನಿಕಾರಕವಾಗಿದೆ. ಈ ಬ್ಯಾಂಕುಗಳು ಪ್ರಸ್ತುತ ಇರುವ ಸ್ಥಿತಿಯಲ್ಲಿ ತನ್ನ ಗ್ರಾಹಕರು ಬ್ಯಾಂಕ್ನಲ್ಲಿ ಡೆಪಾಸಿಟ್ ಮಾಡಿದ ಸಂಪೂರ್ಣ ಮೊತ್ತವನ್ನು ಮರುಪಾವತಿನ ಮಾಡಲು ಸಾಧ್ಯವಾಗದು. ಈ ಬ್ಯಾಂಕುಗಳಿಗೆ ಬ್ಯಾಂಕಿಂಗ್ ವಹಿವಾಟನ್ನು ಮುಂದುವರಿಸಲು ಅವಕಾಶ ನೀಡಿದರೆ, ಸಾರ್ವಜನಿಕರ ಹಿತಾಸಕ್ತಿಗೆ ಇನ್ನಷ್ಟು ಧಕ್ಕೆ ಉಂಟಾಗಲಿದೆ," ಎಂದು ಆರ್ಬಿಐ ತಿಳಿಸಿದೆ.
ಕೇಂದ್ರ ಬ್ಯಾಂಕ್ ಪ್ರಕಾರ, ದಿವಾಳಿಯಾದ ಈ ಎರಡು ಬ್ಯಾಂಕ್ಗಳ ಪ್ರತಿ ಡೆಪಾಸಿಟ್ದಾರರು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ಡಿಐಸಿಜಿಸಿ) ದಿಂದ ಐದು ಲಕ್ಷ ರೂಪಾಯಿವರೆಗೆ ಡೆಪಾಸಿಟ್ ಮೇಲಿನ ವಿಮೆಯನ್ನು ಕ್ಲೈಮ್ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಹರೀಹರೇಶ್ವರ ಸಹಕಾರಿ ಬ್ಯಾಂಕ್ ಲಿಮಿಟೆಡ್
ಹರೀಹರೇಶ್ವರ ಸಹಕಾರಿ ಬ್ಯಾಂಕ್ ಲಿಮಿಟೆಡ್ ಸಲ್ಲಿಕೆ ಮಾಡಿದ ಡೇಟಾ ಪ್ರಕಾರ ಇದರ ಒಟ್ಟು ಗ್ರಾಹಕರ ಪೈಕಿ ಸುಮಾರು ಶೇಕಡ 99.96ರಷ್ಟು ಗ್ರಾಹಕರು ಡಿಐಸಿಜಿಸಿಯಿಂದ ತಮ್ಮ ಡೆಪಾಸಿಟ್ನ ಸಂಪೂರ್ಣ ಮೊತ್ತವನ್ನು ಪಡೆಯಲು ಅರ್ಹರಾಗಿದ್ದಾರೆ. ಡಿಐಸಿಜಿಸಿ ಈಗಾಗಲೇ ಸತಾರಾ ಮೂಲದ ಬ್ಯಾಂಕ್ನ ಡೆಪಾಸಿಟ್ದಾರರಿಗೆ ಒಟ್ಟು ವಿಮಾ ಡೆಪಾಸಿಟ್ಗಳಿಗೆ 57.24 ಕೋಟಿ ರೂಪಾಯಿ ಪಾವತಿ ಮಾಡಿದೆ.
ಶ್ರೀ ಶಾರದ ಮಹಿಳಾ ಕೋಆಪರೇಟಿವ್ ಬ್ಯಾಂಕ್
ತುಮಕೂರು ಮೂಲದ ಶ್ರೀ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ನಲ್ಲಿ, ಶೇಕಡ 97.82ರಷ್ಟು ಡೆಪಾಸಿಟ್ದಾರರು ತಮ್ಮ ಡೆಪಾಸಿಟ್ನ ಪೂರ್ಣ ಮೊತ್ತವನ್ನು ಡಿಐಸಿಜಿಸಿಯಿಂದ ಸ್ವೀಕರಿಸಲು ಅರ್ಹರಾಗಿದ್ದಾರೆ. 12 ಜೂನ್ 2023 ರಂತೆ, ಕರ್ನಾಟಕ ಮೂಲದ ಬ್ಯಾಂಕ್ನ ಡೆಪಾಸಿಟ್ದಾರರಿಗೆ ಡಿಐಸಿಜಿಸಿ 15.06 ಕೋಟಿ ರೂಪಾಯಿಯನ್ನು ಪಾವತಿ ಮಾಡಿದೆ. ಈ ಹಿಂದೆ ಆರ್ಬಿಐ ಬೆಂಗಳೂರಿನ ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತದ ಲೈಸನ್ಸ್ ಅನ್ನು ರದ್ದುಗೊಳಿಸಿತ್ತು.
ಏಪ್ರಿಲ್ನಲ್ಲಿ ಆರ್ಬಿಐ ಸುಮಾರು ಕೋಪರೇಟಿವ್ ಬ್ಯಾಂಕ್ಗಳ ಲೈಸೆನ್ಸ್ ರದ್ದುಗೊಳಿಸಿದೆ. ಸೇವಾ ವಿಕಾಸ್ ಕೋಪರೇಟಿವ್ ಬ್ಯಾಂಕ್, ಡೆಕ್ಕಾನ್ ಅರ್ಬನ್ ಕೋಪರೇಟಿವ್, ಮಿಲ್ಲತ್ ಕೋಆಪರೇಟಿವ್ ಬ್ಯಾಂಕ್, ಮುದೋಲ್ ಕೋಆಪರೇಟಿವ್ ಬ್ಯಾಂಕ್, ಶ್ರೀ ಆನಂದ್ ಕೋಆಪರೇಟಿವ್ ಬ್ಯಾಂಕ್, ರುಪೀ ಕೋಆಪರೇಟಿವ್ ಬ್ಯಾಂಕ್, ಬಾಬಾಜಿ ಡೇಟ್ ಮಹಿಳಾ ಅರ್ಬನ್ ಬ್ಯಾಂಕ್ ಮತ್ತು ಲಕ್ಷ್ಮೀ ಕೋಆಪರೇಟಿವ್ ಬ್ಯಾಂಕ್ ಬ್ಯಾಂಕಿಂಗ್ ವಹಿವಾಟು ಮಾಡುವ ಪರವಾನಗಿಯನ್ನು ಕಳೆದುಕೊಂಡ ಬ್ಯಾಂಕ್ಗಳಾಗಿದೆ.
More From GoodReturns

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Weather Today: ಮುಂದಿನ ವಾರದಿಂದ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು; ಜನರೇ ಎಚ್ಚರ

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ



Click it and Unblock the Notifications