ಆರ್ಥಿಕ ದುಸ್ಥಿತಿಗೆ ತಲುಪಿರುವ ದೇಶದ ಐದನೇ ಬಹುದೊಡ್ಡ ಖಾಸಗಿ ಬ್ಯಾಂಕ್, ಯೆಸ್ ಬ್ಯಾಂಕ್ನ ಈ ಸ್ಥಿತಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಉತ್ತರಿಸಬೇಕಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಹೇಳಿದೆ.
ಕೇಂದ್ರ ಸರ್ಕಾರವು ಆರ್ಬಿಐ ಅನ್ನು ಪ್ರಾಂಪ್ಟ್ ಕರೆಕ್ಟಿವ್ ಆ್ಯಕ್ಷನ್ (ಪಿಸಿಎ) ಅಡಿಯಲ್ಲಿ ತರುವ ಸಮಯ ಇದಾಗಿದೆ. ಏಕೆಂದರೆ ಬ್ಯಾಂಕುಗಳು ಈ ಮಟ್ಟಿಗೆ ತಲುಪಲು, ಸಮಯೋಚಿತ ಕ್ರಮ ಕೈಗೊಳ್ಳಲು ಆರ್ಬಿಐ ಸಮಯ ತೆಗೆದುಕೊಂಡಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಉನ್ನತ ಮುಖಂಡರು ತಿಳಿಸಿದ್ದಾರೆ.

ಇದರ ಜೊತೆಗೆ ಯೆಸ್ ಬ್ಯಾಂಕ್ನಲ್ಲಿರುವ ಸಮಸ್ಯೆಗಳಿಗೆ ಸರ್ಕಾರ ಆರ್ಬಿಐ ಅನ್ನು ಉತ್ತರದಾಯಿ ಮತ್ತು ಹೊಣೆಗಾರಿಕೆ ನೀಡಬೇಕು ಎಂದಿದ್ದಾರೆ.
''ಯೆಸ್ ಬ್ಯಾಂಕ್ ಕೆಟ್ಟ ಸಾಲಗಳನ್ನು ಹೆಚ್ಚಿಸುವುದು, ಅಸಮರ್ಪಕ ಬಂಡವಾಳ, ಬಂಡವಾಳವನ್ನು ಹೆಚ್ಚಿಸಲು ಅಸಮರ್ಥವಾಗಿರುವುದು ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ ಎಂಬ ಅಂಶ ಗೊತ್ತಿದೆ. ಆದರೆ ಆರ್ಬಿಐ ತನ್ನದೇ ಆದ ಸಮಯವನ್ನು ತೆಗೆದುಕೊಂಡು ಈ ಕ್ರಮಕ್ಕೆ ಮುಂದಾಯಿತು ಮತ್ತು ಸಾಕಷ್ಟು ಹಾನಿಯ ನಂತರ, ನಿಷೇಧವನ್ನು ಹೇರುವ ಮೂಲಕ ಠೇವಣಿದಾರರಲ್ಲಿ ಆತಂಕವನ್ನು ಉಂಟುಮಾಡಿದೆ'' ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಶುಕ್ರವಾರ ತಿಳಿಸಿದ್ದಾರೆ.
''ಆರ್ಬಿಐ, ಬ್ಯಾಂಕಿಂಗ್ ವಲಯದ ನಿಯಂತ್ರಕನಾಗಿರುವುದರಿಂದ, ಯೆಸ್ ಬ್ಯಾಂಕಿನಲ್ಲಿ ನಡೆಯುತ್ತಿರುವ ಕಾರ್ಯಗಳ ಬಗ್ಗೆ ತಿಳಿದಿರಲು ಸಾಧ್ಯವಿಲ್ಲ. ಇಂದು, ದುರುಪಯೋಗದ ಕಾರಣದಿಂದಾಗಿ ಬ್ಯಾಂಕ್ ಅನ್ನು ಮುಚ್ಚಬೇಕಾಗಿದ್ದರೆ, ಆರ್ಬಿಐ ತನ್ನನ್ನು ಜವಾಬ್ದಾರಿಯಿಂದ ಹೊರಹಾಕಲು ಸಾಧ್ಯವಿಲ್ಲ. ಯುನೈಟೆಡ್ ವೆಸ್ಟರ್ನ್ ಬ್ಯಾಂಕ್ ಮತ್ತು ಗ್ಲೋಬಲ್ ಟ್ರಸ್ಟ್ ಬ್ಯಾಂಕ್ನಲ್ಲೂ ಇದೇ ವಿಷಯವನ್ನು ಗಮನಿಸಲಾಗಿದೆ. ಪುನರಾವರ್ತಿತ ಲೆಕ್ಕಪರಿಶೋಧನಾ ವರದಿಗಳು ಕೊರತೆಗಳನ್ನು ಎತ್ತಿ ತೋರಿಸಿದವು. ಆದರೆ ಇನ್ನೂ ಆರ್ಬಿಐ ಕಾರ್ಯನಿರ್ವಹಿಸಲಿಲ್ಲ. ಈಗ ಅದೇ ಸಂಭವಿಸಿದೆ" ಎಂದು ವೆಂಕಟಾಚಲಂ ಹೇಳಿದ್ದಾರೆ.
ಅವರ ಪ್ರಕಾರ, ಸರ್ಕಾರದಿಂದ ವೈಭವೀಕರಿಸಲ್ಪಟ್ಟ ಖಾಸಗಿ ಬ್ಯಾಂಕುಗಳು ಒಂದರ ನಂತರ ಒಂದರಂತೆ ವಿಫಲವಾಗುತ್ತಿವೆ.


Click it and Unblock the Notifications