ಕೇಂದ್ರ ಬಜೆಟ್ ಬಳಿಕ ಈಗ ಎಲ್ಲರ ಚಿತ್ತ ಆರ್ಬಿಐನತ್ತ ನೆಟ್ಟಿದೆ. ಮಂಗಳವಾರ (ಫೆ. 4) ಮೂರು ದಿನಗಳ ಕಾಲ ಆರ್ಬಿಐನ ಎಂಪಿಸಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಡ್ಡಿದರ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೋ ಇಲ್ಲವೋ ಎಂಬುದು ಎಲ್ಲರಿಗೂ ಇರುವ ಕುತೂಹಲವಿದೆ.
ಹೌದು, ನೂತನ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ನೇತೃತ್ವದ ಹೊಸ ಹಣಕಾಸು ನೀತಿ ಸಮಿತಿಯು ಫೆಬ್ರವರಿ 4 ರಿಂದ ಪ್ರಮುಖ ಚರ್ಚೆಗಳನ್ನು ನಡೆಸಲಿದೆ. ಫೆಬ್ರವರಿ 7 ರ ಘೋಷಣೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಗವರ್ನರ್ ಮಲ್ಹೋತ್ರಾ ಪ್ರಮುಖ ದರಗಳಲ್ಲಿ ಬದಲಾವಣೆಯನ್ನು ಘೋಷಿಸಬಹುದು. ಫೆಬ್ರವರಿ 7 ರಂದು 25 ಬಿಪಿಎಸ್ ದರ ಕಡಿತದ ನಿರೀಕ್ಷೆಗಳಿವೆ ಎಂದು ಎಂಸಿ ಸಮೀಕ್ಷೆಯೊಂದು ಹೇಳಿಕೆ ನೀಡಿದೆ. ಪ್ರಸುತ್ತ ಇರುವ ಸಾಲ ದರವು ಶೇ. 6.5ರಷ್ಟು ರಿಂದ ಶೇ.6.25ರಷ್ಟು ಕಡಿಮೆಯಾಗಬಹುದು.

ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿ ಮುಗಿದ ನಂತರ ಸಂಜಯ್ ಮಲ್ಹೋತ್ರಾ ಅವರು ಕಳೆದ ವರ್ಷ ಡಿಸೆಂಬರ್ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ ಮೊದಲ MPC ಸಭೆಯಾಗಿರುವುದರಿಂದ ಭಾರೀ ನಿರೀಕ್ಷೆಗಳು ಈ ಸಭೆಯ ಮೇಲೆ ಇದೆ.
ದರ ಕಡಿತದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದರೂ, ಕೇಂದ್ರ ಬ್ಯಾಂಕ್ ಹೆಚ್ಚಿಸಲು ನಿರ್ಣಾಯಕ ಕ್ರಮಗಳನ್ನು ತಗೆದುಕೊಳ್ಳಬೇಕಾಗುತ್ತದೆ.
ಇನ್ನೂ ಕಳೆದ ತಿಂಗಳು RBI 1.5 ಲಕ್ಷ ಕೋಟಿ ರೂಪಾಯಿಗಳ ದ್ರವ್ಯತೆಯನ್ನು ಸೇರಿಸುವ ಕ್ರಮಗಳನ್ನು ಘೋಷಿಸಿತ್ತು. ಇದಕ್ಕೂ ಮೊದಲು, ಕಳೆದ ವರ್ಷ ಡಿಸೆಂಬರ್ನಲ್ಲಿ, 50 BPS ನ CRR ಕಡಿತದಿಂದಾಗಿ ಕೇಂದ್ರ ಬ್ಯಾಂಕ್ 1.16 ಲಕ್ಷ ಕೋಟಿ ರೂಪಾಯಿಗಳ ದ್ರವ್ಯತೆಯನ್ನು ಪರಿಚಯಿಸಿತ್ತು. ಪ್ರಮುಖ ನಿರ್ಧಾರಕ್ಕಾಗಿ ಕಾಯುತ್ತಿರುವಾಗ, ಮುಂಬರುವ RBI MPC ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.
RBI ಹಣಕಾಸು ನೀತಿಯ ದಿನಾಂಕ ಮತ್ತು ಸಮಯ ಯಾವಾಗ?
ಫೆಬ್ರವರಿ 4 ರಿಂದ ಫೆಬ್ರವರಿ 7 ರವರೆಗೆ ಆರ್ಬಿಐ ಎಂಪಿಸಿ ನಡೆಯಲಿದ್ದು, ಫೆಬ್ರವರಿ 7 ರಂದು ಬೆಳಿಗ್ಗೆ 10:00 ಗಂಟೆಗೆ ರೆಪೊ ದರದ ಕುರಿತು ಅಧಿಕೃತ ಘೋಷಣೆ ನಡೆಯಲಿದೆ. ಲೆಕ್ಕಪತ್ರದ ನಂತರ, ಗವರ್ನರ್ ಮಲ್ಹೋತ್ರಾ ಮಧ್ಯಾಹ್ನ 12:00 ಗಂಟೆಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಅಲ್ಲಿ ಅವರು ಎಂಪಿಸಿ ನಿರ್ಧಾರದ ಹಿಂದಿನ ಕಾರಣಗಳು, ಭಾರತದ ಆರ್ಥಿಕತೆಯ ಪ್ರಸ್ತುತ ಸ್ಥಿತಿ ಮತ್ತು 2025 ರ ಕೇಂದ್ರ ಬಜೆಟ್ ಕುರಿತು ಅವರ ಆಲೋಚನೆಗಳ ಬಗ್ಗೆ ಮಾತನಾಡಲಿದ್ದಾರೆ.
ಆರ್ಬಿಐ ಹಣಕಾಸು ನೀತಿಯನ್ನು ಎಲ್ಲಿ ವೀಕ್ಷಿಸಬಹುದು?
ಆರ್ಬಿಐ ಪ್ರಕಟಣೆಯ ನೇರಪ್ರಸಾರವು ಹಲವಾರು ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ವೀಕ್ಷಣೆ ಮಾಡಬಹುದು. ಆರ್ಬಿಐನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಾದ ಎಕ್ಸ್ (ಟ್ವಿಟರ್) ಮತ್ತು ಯೂಟ್ಯೂಬ್ ಸಹ ಈ ಕಾರ್ಯಕ್ರಮವನ್ನು ನೇರಪ್ರಸಾರ ಇರುತ್ತದೆ. ಆರ್ಬಿಐ ಗವರ್ನರ್ ಮಲ್ಹೋತ್ರಾ ಅವರ ಮಧ್ಯಾಹ್ನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.
5: ಕಳೆದ MPC ಯಲ್ಲಿ ಏನೆಲ್ಲಾ ಬದಲಾವಣೆ ಆಗಿತ್ತು?
MPC ಯಲ್ಲಿ, ಆಗಿನ RBI ಗವರ್ನರ್ ಶಕ್ತಿಕಾಂತ ದಾಸ್ ಅವರು ರೆಪೊ ದರವನ್ನು ಶೇ6.5 ರಷ್ಟು ಬದಲಾಗದೆ ಆಗಿ ಉಳಿಸಿದ್ದರು. ನಗದು ಮೀಸಲು ಅನುಪಾತವನ್ನು 50 ಬೇಸಿಸ್ ಪಾಯಿಂಟ್ಗಳಷ್ಟು ಕಡಿತಗೊಳಿಸಲಾಯಿತು. ಇದು ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ 1 ಟ್ರಿಲಿಯನ್ ರೂ.ಗಳನ್ನು ಸೇರಿಸಿದ್ದರಿಂದ ದ್ರವ್ಯತೆಯನ್ನು ಹೆಚ್ಚಿಸಲು ಇದನ್ನು ಮಾಡಲಾಯಿತು.
ಇತ್ತೀಚಿನ ದಿನಗಳಲ್ಲಿ ದೇಶದ ಬ್ಯಾಂಕಿಂಗ್ ಸಿಸ್ಟಂಗೆ ಸಾಕಷ್ಟು ಹಣದ ಹರಿವು ಆಗುವ ರೀತಿಯಲ್ಲಿ ಆರ್ಬಿಐ ಕ್ರಮ ಕೈಗೊಂಡಿದೆ. ಇದು ಬಡ್ಡಿದರ ಕಡಿತಕ್ಕೆ ಆರ್ಬಿಐ ಸಜ್ಜು ಮಾಡಿರುವ ವೇದಿಕೆಯಾಗಿದೆ. ಹೀಗಾಗಿ, ದರಕಡಿತದ ನಿರೀಕ್ಷೆ ಭಾರೀ ನಿರೀಕ್ಷೆ ಇದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications