ನವದೆಹಲಿ, ಮಾರ್ಚ್ 31: ಬ್ಯಾಂಕಿನಲ್ಲಿ ಒಂದು ಖಾತೆ ಹೊಂದಬೇಕು ಅನ್ನೋದು ಬಹಳಷ್ಟು ಜನರ ಅವಶ್ಯಕತೆ ಆಗಿರುತ್ತೆ. ಆದ್ರೆ ಬ್ಯಾಂಕ್ ನ ಕೆಲವು ನಿಯಮಗಳು ಕೆಲ ವರ್ಗದ ಜನರಿಗೆ ಕಷ್ಟವಾಗೋದ್ರಿಂದ ಅವರು ಬ್ಯಾಂಕ್ ವ್ಯವಹಾರಗಳಿಂದ ದೂರವೇ ಉಳಿಯುತ್ತಾರೆ.
ಆ ಪೈಕಿ ಅಕೌಂಟ್ ಓಪನ್ ಮಾಡಿದ್ರೆ ಮತ್ತೆ ಖಾತೆಯಲ್ಲಿ ಇಂತಿಷ್ಟು ಮಿನಿಮಮ್ ಬ್ಯಾಲೆನ್ಸ್ ಅಂತ ಮೇಂಟೈನ್ ಮಾಡಲೇಬೇಕು. ಈ ಕಾರಣಕ್ಕೆ ಹಲವರು ಬ್ಯಾಂಕ್ ಖಾತೆಗಳನ್ನೇ ಮಾಡಿಸುವುದಿಲ್ಲ . ಒಂದು ವೇಳೆ ನೀವು ಬ್ಯಾಂಕ್ ಅಕೌಂಟ್ ಮಾಡಿಸಿ ಅದರಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೇಂಟೈನ್ ಮಾಡಿಲ್ಲ ಅಂದ್ರೆ , ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್ ಇಲ್ಲ ಎಂಬ ಕಾರಣಕ್ಕೆ ನಿಮಗೆ ಫೈನ್ ಕೂಡ ಹಾಕಲಾಗುತ್ತದೆ. ಇದು ಬಹಳಷ್ಟು ಗ್ರಾಹಕರಿಗೆ ಸಮ್ಮತಿ ಇರೋದಿಲ್ಲ.

ಬಹುತೇಕ ಗ್ರಾಹಕರು ಬ್ಯಾಂಕುಗಳಲ್ಲಿ ಸೇವಿಂಗ್ಸ್ ಅಕೌಂಟ್ ಹೊಂದಿರುತ್ತಾರೆ, ತಮ್ಮ ಸಂಬಳ ಕ್ರೆಡಿಟ್ ಆಗುವ ಸಲುವಾಗಿ ಅಥವಾ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದುಕೊಳ್ಳುವುದಕ್ಕಾಗಿ, ಹೀಗೆ ಸಮಾಜದ ಅನೇಕ ವರ್ಗ ಅವರದ್ದೆಯಾದ ಅವಶ್ಯಕತೆಗಳಿಗೆ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ . ಆದರೆ ಪ್ರತಿಯೊಬ್ಬರಿಗೂ ಇಂತಿಷ್ಟು ಮಿನಿಮಮ್ ಬ್ಯಾಲೆನ್ಸ್ ಅಕೌಂಟ್ ನಲ್ಲಿ ಬಿಡಲೇಬೇಕು ಅನ್ನೋ ನಿಯಮ ಕಷ್ಟಕರವಾಗಿರುತ್ತದೆ. ಇದೀಗ RBI ಈ ನಿಯಮಗಳಿಗೆ ಬದಲಾವಣೆ ತಂದಿದೆ.
ಎರಡು ವರ್ಷಕ್ಕಿಂತ ಹಳೆ ಖಾತೆಗೆ ನಿಯಮ ಅನ್ವಯ !
ಈ ಮೊದಲು ಇದ್ದ ನಿಯಮಗಳನ್ನ ಗಮನಿಸಿದರೆ ಸೇವಿಂಗ್ಸ್ ಅಕೌಂಟ್ ಅಥವಾ ಕರೆಂಟ್ ಅಕೌಂಟಾಗಿರಲಿ , ಆ ಅಕೌಂಟ್ ಗೆ ಅನುಗುಣವಾಗಿ ಮಿನಿಮಮ್ ಬ್ಯಾಲೆನ್ಸ್ ಇಂತಿಷ್ಟು ಅಂತ ಬ್ಯಾಂಕ್ ನಿಗದಿ ಮಾಡ್ತಾ ಇತ್ತು. ಅಷ್ಟು ಮೊತ್ತವನ್ನ ನಾವು ಅಕೌಂಟ್ ನಿಂದ ವಿಥ್ ಡ್ರಾ ಮಾಡದೇ ಮಿನಿಮಮ್ ಬ್ಯಾಲೆನ್ಸ್ ಅಂತ ಅಕೌಂಟ್ ನಲ್ಲಿ ಬಿಡಬೇಕಿತ್ತು . ಒಂದು ವೇಳೆ ಅಕೌಂಟ್ ನಲ್ಲಿ ನಾವು ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಲು ವಿಫಲರಾದರೆ ಅದಕ್ಕೆ ಬ್ಯಾಂಕ್ ಗ್ರಾಹಕರಿಗೆ ದಂಡವನ್ನ ಕೂಡ ವಿಧಿಸುತ್ತಿತ್ತು. ಹೀಗಾಗಿ ಕೆಲವೊಮ್ಮೆ ನೆಗೆಟಿವ್ ಬ್ಯಾಲೆನ್ಸ್ ಕೂಡ ಉಂಟಾಗುತ್ತಿತು. ಆದ್ರೆ ಇನ್ಮುಂದೆ ಬ್ಯಾಂಕ್ ಗಳು ಹಾಗೆ ಮಾಡುವಂತಿಲ್ಲ.
ಒಂದುವೇಳೆ ನೀವು ಎರಡು ಮೂರು ಬ್ಯಾಂಕ್ ಅಕೌಂಟ್ ಹೊಂದಿದ್ದು ಆ ಪೈಕಿ ಯಾವುದೋ ಕಾರಣಕ್ಕೆ ಹಳೆಯ ಅಕೌಂಟ್ ಬಳಸೋದನ್ನ ನಿಲ್ಲಿಸಿರ್ತೀರಾ ! ಆದ್ರೆ ಬ್ಯಾಂಕ್ ಮಾತ್ರ ನಿಮ್ಮ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಮೇಂಟೈನ್ ಮಾಡಿಲ್ಲ ಅಂಥ ದಂಡ ಹಾಕಿರತ್ತೆ. ಒಂದುವೇಳೆ ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿದ್ರೆ ನೀವು ಹಲವಾರು ದಿನಗಳಿಂದ ಯಾವುದೇ ವಹಿವಾಟು ನಡೆಸಿಲ್ಲವಾದ್ರೆ ಅಂಥ ಅಕೌಂಟ್ ಗಳಿಗೆ ಬ್ಯಾಂಕ್ ನಿರ್ವಹಣಾ ಮೊತ್ತ ಹೇರುವಂತಿಲ್ಲ. ಒಂದುವೇಳೆ ನಿಮ್ಮ ಖಾತೆ ೨ ವರ್ಷದಿಂದ ನಿಷ್ಕ್ರಿಯವಾಗಿದ್ರೆ ಅಂಥ ಕಾತೆಗಳಿಗೆ ಈ ನಿಯಮ ಅನ್ವಯವಾಗುತ್ತದೆ.
ಈ ನಿಯಮ ಏಪ್ರಿಲ್ ೧ ರಿಂದ ಜಾರಿಗೆ ಬರಲಿದೆ , RBI ಈಗಾಗಲೇ ದೇಶಾದ್ಯಂತ ಬ್ಯಾಂಕ್ ಗಳಿಗೆ ಹೊಸ ನಿಯಮ ಪಾಲನೆ ಮಾಡಲು ಸೂಚನೆ ನೀಡಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications