53,125 ಕೋಟಿ ರುಪಾಯಿ ಹಕ್ಕಿನ ಷೇರು ವಿತರಣೆಗೆ (Rights issue) ಮುಂದಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಮೇ 14ನೇ ತಾರೀಕು ರೆಕಾರ್ಡ್ ದಿನಾಂಕ ಎಂದು ನಿಗದಿ ಮಾಡಿದೆ. ಯಾವ ಷೇರುದಾರರು ರೈಟ್ಸ್ ಇಶ್ಯೂಗೆ ಅಪ್ಲೈ ಮಾಡಬಹುದು ಎಂಬುದನ್ನು ಈ ದಿನದಂದು ಎಷ್ಟು ಷೇರು ಅವರ ಬಳಿ ಇರುತ್ತದೆ ಎಂಬುದರ ಮೇಲೆ ಆಧಾರ ಪಟ್ಟಿರುತ್ತದೆ.
ಏಪ್ರಿಲ್ 30ನೇ ತಾರೀಕಿನಂದು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ 53,125 ಕೋಟಿ ರುಪಾಯಿಯನ್ನು 1:15 ಪ್ರಮಾಣದಲ್ಲಿ ಹಕ್ಕಿನ ಷೇರು ವಿತರಿಸುವುದಾಗಿ ಘೋಷಣೆ ಮಾಡಿತ್ತು. ಯಾರ ಬಳಿ 15 ಷೇರು ಇರುತ್ತದೋ ಅಂಥವರು ಅರ್ಜಿ ಹಾಕಿಕೊಂಡರೆ 1 ಹಕ್ಕಿನ ಷೇರನ್ನು 1257 ರುಪಾಯಿಗೆ, ಏಪ್ರಿಲ್ 30ನೇ ತಾರೀಕಿನ ದಿನಾಂತ್ಯದ ದರಕ್ಕೆ 14 ಪರ್ಸೆಂಟ್ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ ಎನ್ನಲಾಗಿತ್ತು.
ಮೂರು ದಶಕದಲ್ಲಿ ಇದೇ ಮೊದಲ ಬಾರಿಗೆ ರಿಲಯನ್ಸ್ ಇಂಥ Rights issueಗೆ ಮುಂದಾಗಿದೆ. ಇನ್ನು ಕಳೆದ ಶುಕ್ರವಾರದಂದು ಷೇರು ಮಾರ್ಕೆಟ್ ವಹಿವಾಟಿನ ದಿನಾಂತ್ಯಕ್ಕೆ ರು. 1561.80 ವ್ಯವಹಾರ ಚುಕ್ತಾ ಮಾಡಿದೆ. Rights issueನಲ್ಲಿ ಎಷ್ಟು ಷೇರಿಗೆ ಅರ್ಜಿ ಹಾಕಿಕೊಳ್ಳುವುದಕ್ಕೆ ಷೇರುದಾರರು ಅರ್ಹರು ಎಂಬುದನ್ನು ನಿರ್ಧರಿಸುವುದಕ್ಕೆ ಮೇ 14 ರೆಕಾರ್ಡ್ ದಿನಾಂಕ ಆಗಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.

ಹಕ್ಕಿನ ಷೇರಿನ ಆರಂಭ ಮತ್ತು ಕೊನೆ ದಿನದ ಮಾಹಿತಿಯನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು ಎಂದು ಕೂಡ ತಿಳಿಸಲಾಗಿದೆ. ಸಾಮಾನ್ಯವಾಗಿ ನಗದು ಕೊರತೆ ಇರುವ ಕಂಪೆನಿಗಳು ರೈಟ್ಸ್ ಇಶ್ಯೂ ಮೂಲಕ ಹಣ ಸಂಗ್ರಹ ಮಾಡುತ್ತವೆ.
ಕೊನೆಯ ಬಾರಿಗೆ 1991ರಲ್ಲಿ ರಿಲಯನ್ಸ್ ನಿಂದ ಸಾರ್ವಜನಿಕರ ಮೂಲಕ ಕನ್ವರ್ಟಬಲ್ ಡಿಬೆಂಚರ್ಸ್ ವಿತರಿಸಿ, ಹಣ ಸಂಗ್ರಹಿಸಿತ್ತು. ಆ ನಂತರ ಡಿಬೆಂಚರ್ಸ್ ಅನ್ನು ಪ್ರತಿ ಈಕ್ವಿಟಿ ಷೇರಿಗೆ ತಲಾ 55 ರುಪಾಯಿಯಂತೆ ಪರಿವರ್ತನೆ ಮಾಡಿತ್ತು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications