ಕಾರ್ಪೊರೇಟ್ ಸಾಲಗಳನ್ನು ಎನ್ ಪಿಎ ಅಥವಾ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ (ಅನುತ್ಪಾದಕ ಆಸ್ತಿ) ಎಂಬ ವಿಭಾಗಕ್ಕೆ ಸೇರಿಸದೆ ಒಂದು ಸಲ ಪುನಾರಚನೆಗೆ (ರೀಸ್ಟ್ರಕ್ಚರಿಂಗ್) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿಯಲ್ಲಿ ಗುರುವಾರ ಅವಕಾಶ ನೀಡಲಾಗಿದೆ.
ಪುನಾರಚನೆ ಎಂಬ ಪದ ಮುನ್ನೆಲೆಗೆ ಬರುವುದು ಸಾಮಾನ್ಯವಾಗಿ ಒಂದು ಸಂಸ್ಥೆಯು ಆರ್ಥಿಕ ಒತ್ತಡದಲ್ಲಿ ಇದ್ದಾಗ ಅದರ ಹಣಕಾಸು ಹಾಗೂ ಕಾರ್ಯ ನಿರ್ವಹಣೆ ವಿಚಾರದಲ್ಲಿ ಮಹತ್ತರವಾದ ಬದಲಾವಣೆ ಮಾಡಲಾಗುತ್ತದೆ. ಉದಾಹರಣೆಗೆ ವೆಚ್ಚವನ್ನು ಕಡಿತ ಮಾಡುವುದು, ಉದ್ಯೋಗವನ್ನು ಕಡಿತ ಮಾಡುವುದು ಅಥವಾ ಆ ಸಂಸ್ಥೆಯ ಆಸ್ತಿ ಮಾರಾಟ ಮಾಡುವ ಮೂಲಕ ಗಾತ್ರವನ್ನು ಕಡಿಮೆ ಮಾಡುವುದು ಹೀಗೆ.
ಇದಕ್ಕಾಗಿ ಹಿರಿಯ ಬ್ಯಾಂಕರ್ ಕೆ.ವಿ. ಕಾಮತ್ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗುವುದು. ಆ ಸಮಿತಿಯು ಪುನಾರಚನೆ ಬಗ್ಗೆ ಸಲಹೆ ನೀಡುತ್ತದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಜೂನ್ 7, 2019ರ ಸುತ್ತೋಲೆಯ ಪ್ರಕಾರ, ಡೌನ್ ಗ್ರೇಡ್ ಮಾಡದೆ ಸಾಲ ಪುನಾರಚನೆಗೆ ಮಾರ್ಗ ಒದಗಿಸಲು ನಿರ್ಧಾರ ಮಾಡಲಾಗಿದೆ. ಈ ಹಿಂದಿನ ಪುನಾರಚನೆ ಅನುಭವ ಪುನರಾವರ್ತನೆ ಆಗದಂತೆ ಕಾಳಜಿ ವಹಿಸಲಾಗುವುದು ಹಾಗೂ ಅಗತ್ಯ ಕ್ರಮಗಳನ್ನು ಅನುಸರಿಸಲಾಗುವುದು ಎಂದು ದಾಸ್ ಹೇಳಿದ್ದಾರೆ.

ಇಂಥ ಪುನಾರಚನೆಗಳನ್ನು ಈಗ ಮಾಡುತ್ತಿರುವಂತೆ ಆಸ್ತಿ ವರ್ಗೀಕರಣದ ವೇಳೆ ಡೌನ್ ಗ್ರೇಡ್ ಮಾಡುವುದಿಲ್ಲ. ಒತ್ತಡದಲ್ಲಿ ಇರುವ ಎಂಎಸ್ ಎಂಇಯಾಗಿ ಸಾಲ ಪಡೆದವರಿಗೆ ಸಾಲ ಪುನಾರಚನೆಗೆ ಅವಕಾಶ ನೀಡಿ, ಆ ಆಸ್ತಿಯನ್ನು ಮಾರ್ಚ್ 31ಕ್ಕೆ ಸ್ಟ್ಯಾಂಡರ್ಡ್ ಎಂದು ವರ್ಗೀಕರಿಸಲಾಗುತ್ತದೆ ಎಂದು ದಾಸ್ ವಿವರಿಸಿದ್ದಾರೆ.
ಪುನಾರಚನೆಯಲ್ಲಿ ಮಾಲೀಕತ್ವ ಆಧಾರದಲ್ಲಿ ಕಂಪೆನಿಗಳು ಹಾಗೂ ಅದರ ಜತೆಗೆ ವೈಯಕ್ತಿಕ ಸಾಲವನ್ನು ಕೂಡ ಸೇರಿಸಲಾಗುತ್ತದೆ. ಕಿರು ಮತ್ತು ಸಣ್ಣ ಸಂಸ್ಥೆಗಳಿಗೆ ನೀಡಲಾದ ಸಾಲಗಳ ಪುನಾರಚನೆಯನ್ನು ಮಾಡಲಾಗುತ್ತದೆ ಎಂದು ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications