ಮುಂದಿನ ವರ್ಷದ ಆರಂಭದಲ್ಲಿ ಪ್ರವಾಸಿಗರ ವೀಸಾವನ್ನು ನೀಡುವುದಕ್ಕೆ ಸೌದಿ ಅರೇಬಿಯಾ ಯೋಜನೆ ಹಾಕಿಕೊಂಡಿದೆ. ಕೊರೊನಾ ನಿಯಂತ್ರಣಕ್ಕಾಗಿ ಹಲವು ತಿಂಗಳಿಂದ ನಿರ್ಬಂಧ ಹಾಕಲಾಗಿತ್ತು. ಸೌದಿ ಅರೇಬಿಯಾಗೆ ಆದಾಯಕ್ಕಾಗಿ ತೈಲದ ಮೇಲೆ ಅವಲಂಬನೆ ವಿಪರೀತ ಹೆಚ್ಚು. ಅದನ್ನು ಕಡಿಮೆ ಮಾಡಬೇಕು ಎಂಬುದು ಅಲ್ಲಿನ ರಾಜ ಮೊಹ್ಮದ್ ಬಿನ್ ಸಲ್ಮಾನ್ ಗುರಿ. ಅದಕ್ಕೆ ಮುಖ್ಯ ಆಧಾರವೇ ಪ್ರವಾಸೋದ್ಯಮ.
49 ರಾಷ್ಟ್ರಗಳಿಗೆ ಹೊಸ ವೀಸಾ ನಿಯಮ ತರುವ ಮೂಲಕ ಸೆಪ್ಟೆಂಬರ್ 2019ರಲ್ಲಿ ಸೌದಿ ಅರೇಬಿಯಾವು ಪ್ರವಾಸಿಗರಿಗೆ ಮುಕ್ತವಾಯಿತು. 2030ರ ಹೊತ್ತಿಗೆ ಈ ವಲಯದಿಂದ (ಪ್ರವಾಸೋದ್ಯಮ) ಜಿಡಿಪಿಗೆ 10% ಆದಾಯ ಬರಬೇಕು ಎಂಬುದು ಉದ್ದೇಶವಾಗಿದೆ.
ಮುಂದಿನ ವರ್ಷದ ಆರಂಭದಲ್ಲಿ ಪ್ರವಾಸಿ ವೀಸಾ
"ಪ್ರವಾಸಿ ವೀಸಾಗೆ ಈ ತನಕ ನಾವು ಮುಂದಿನ ವರ್ಷದ ಆರಂಭ ಅಂತ ಮಾತನಾಡುತ್ತಿದ್ದೇವೆ. ಒಂದು ವೇಳೆ ಪರಿಸ್ಥಿತಿ ಉತ್ತಮವಾದಲ್ಲಿ ಅಥವಾ ಲಸಿಕೆ ವಿಚಾರದಲ್ಲಿ ಯಾವುದೇ ಸಕಾರಾತ್ಮಕ ಬದಲಾವಣೆ ಆದಲ್ಲಿ ನಾವಿನ್ನೂ ಬೇಗ ಆರಂಭಿಸಬಹುದು," ಎಂದು ವರ್ಚುವಲ್ ಸಂದರ್ಶನದಲ್ಲಿ ಅಹ್ಮದ್ ಅಲ್- ಖತೀಬ್ ಹೇಳಿದ್ದಾರೆ.
ಕನಿಷ್ಠ ಇಪ್ಪತ್ತೈದು ದೇಶಗಳ ಪ್ರವಾಸಿಗರಿಗೆ ಅವಕಾಶ ನಿರಾಕರಣೆ
ಈ ವರ್ಷದ ಫೆಬ್ರವರಿಯಲ್ಲಿ ವಿದೇಶಿ ಯಾತ್ರಾರ್ಥಿಗಳಿಗೆ ಸೌದಿ ಅರೇಬಿಯಾದ ಗಡಿ ಮುಚ್ಚಲಾಯಿತು. ಇನ್ನು ಕನಿಷ್ಠ ಇಪ್ಪತ್ತೈದು ದೇಶಗಳ ಪ್ರವಾಸಿಗರಿಗೆ ಅವಕಾಶ ನಿರಾಕರಿಸಲಾಯಿತು. ಮಾರ್ಚ್ ನಲ್ಲಿ ದೇಶದ ಒಳಗೆ ಹಾಗೂ ಹೊರಗೆ ಪ್ರವಾಸ ನಿಷೇಧ ಹಾಕಲಾಯಿತು. ಖತೀಬ್ ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರೀ ಪೆಟ್ಟು ಬಿದ್ದಿದೆ. ಈ ವರ್ಷದ ಕೊನೆಗೆ ಮೂವತ್ತೈದರಿಂದ ನಲವತ್ತು ಪರ್ಸೆಂಟ್ ಇಳಿಕೆ ಆಗುವ ನಿರೀಕ್ಷೆ ಇದೆ. ದೇಶೀ ಪ್ರವಾಸೋದ್ಯಮದ ನಮ್ಮ ಗಮನ ಎಂದು ಅವರು ಹೇಳಿದ್ದಾರೆ.
ದೇಶೀ ಪ್ರವಾಸೋದ್ಯಮ ಮೂವತ್ತು ಪರ್ಸೆಂಟ್ ಹೆಚ್ಚಳ
ಈ ಕೊರೊನಾ ಬಿಕ್ಕಟ್ಟು ಎಲ್ಲರಿಗೂ ಸಮಸ್ಯೆ ತಂದಿದೆ. ಜನವರಿಯಿಂದ ಮೇ ಲಾಕ್ ಅಪ್ ಅವಧಿಯಲ್ಲಿ ಭಾರೀ ಬೇಸಿಗೆ ಕಂಡಿದ್ದೇವೆ. ದೇಶೀ ಪ್ರವಾಸೋದ್ಯಮದಲ್ಲಿ ವರ್ಷದಿಂದ ವರ್ಷಕ್ಕೆ 30% ಹೆಚ್ಚಳ ಆಗಿದೆ. ಇದು ನಮ್ಮ ನಿರೀಕ್ಷೆಗೂ ಮೀರಿದ್ದು ಎಂದು ತಿಳಿಸಿದ್ದಾರೆ ಖತೀಬ್.
ಕೊರೊನಾ ಸೋಂಕಿತರು ಹಾಗೂ ಸಾವಿಗೀಡಾದವರು
ಸೌದಿಯ ಬೇಸಿಗೆ ಅಭಿಯಾನ ಹತ್ತು ಪ್ರವಾಸಿ ಕ್ಷೇತ್ರವನ್ನು ಪ್ರಚಾರ ಮಾಡಿತು. ಸಮುದ್ರ ಕಿನಾರೆ, ಅರಣ್ಯ, ಬೆಟ್ಟ, ಐತಿಹಾಸ ಸ್ಥಳಗಳು ಹೀಗೆ ನಾಗರಿಕರು ಮತ್ತು ನಿವಾಸಿಗಳಿಗೆ ವಿದೇಶಕ್ಕೆ ತೆರಳುವ ಬದಲಿಗೆ ಅಲ್ಲೇ ಆಕರ್ಷಿಸಲಾಯಿತು. ಇದರಿಂದಾಗಿ ಹೋಟೆಲ್ ಗಳಲ್ಲಿ ಶೇಕಡಾ 80ರಷ್ಟು ತುಂಬಿರುತ್ತಿತ್ತು. ಸೌದಿ ಅರೇಬಿಯಾದಲ್ಲಿ 3,32,790 ಕೊರೊನಾ ಸೋಂಕಿತ ಹಾಗೂ 4655 ಮಂದಿ ಅದಕ್ಕೆ ಸಂಬಂಧಿಸಿದಂತೆ ಸಾವನ್ನು ಕಂಡಿದ್ದಾರೆ. ಕಳೆದ ಕೆಲ ವಾರದಿಂದ ಸೋಂಕಿತ ಪ್ರಕರಣ ಕಡಿಮೆ ಆಗುತ್ತಾ ಬಂದಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!



Click it and Unblock the Notifications