ಭಾರತೀಯ ಷೇರುಪೇಟು ನಿಯಂತ್ರಣ ಮಂಡಳಿ(ಸೆಬಿ)ಯು ಷೇರುಗಳ ದಲ್ಲಾಳಿ ಕಾರ್ಯ ಸಂಸ್ಥೆ ಕಾರ್ವಿ ಮೇಲೆ ತಕ್ಷಣವೇ ಜಾರಿಗೆ ಬರುವಂತೆ ನಿಷೇಧ ಹೇರಿದೆ.
ಕಾರ್ವಿ ವಾಗ್ದಾನ(Pledged) ಮಾಡಿದ ಗ್ರಾಹಕರ ಷೇರುಗಳನ್ನು ಸಾಲಕ್ಕಾಗಿ ಕಾನೂನು ಬಾಹಿರವಾಗಿ ಮಾರಾಟ ಮಾಡಿದೆ. ಹೀಗಾಗಿ ಹೊಸ ಗ್ರಾಹಕರ ಸೇರ್ಪಡೆ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರ ಷೇರುಗಳನ್ನು ವಹಿವಾಟು ನಡೆಸದಂತೆ ನಿಷೇಧ ಹೇರಿದೆ. ಕಾರ್ವಿ ತನ್ನೊಂದಿಗೆ ವಾಗ್ದಾನ (Pledged) ಮಾಡಿದ ಗ್ರಾಹಕರ ಷೇರುಗಳನ್ನು ಸಂಬಂಧಿತ ಘಟಕಗಳಿಗೆ ಮಾರಾಟ ಮಾಡಿದೆ ಎಂದು ಎನ್ಎಸ್ಇ ತನಿಖೆಯಲ್ಲಿ ತಿಳಿದುಬಂದಿದೆ.

ಸಂಸ್ಥೆಯು ತನ್ನದೇ ಆದ ವಹಿವಾಟುಗಳಿಗಾಗಿ ಗ್ರಾಹಕರ ಮೇಲಾಧಾರವನ್ನು (Client collateral) ದುರುಪಯೋಗ ಪಡಿಸಿಕೊಂಡಿದೆ ಎಂದು ಸೆಬಿ ಹೇಳಿದೆ. ನಿಯಂತ್ರಕರ ಮಧ್ಯವರ್ತಿ ನಿಯಮಗಳ ಪ್ರಕಾರ, ದಲ್ಲಾಳಿ ಸಂಸ್ಥೆಗಳು ಗ್ರಾಹಕರ ಭದ್ರತೆಗಳ ಮೇಲೆ ಹೆಚ್ಚುವರಿಯಾಗಿ ಹಣವನ್ನು ಪಡೆಯಲು ಸಾಧ್ಯವಿಲ್ಲ.
ಆದರೆ ಕಾರ್ವಿ 2,000 ಕೋಟಿ ರುಪಾಯಿಗಳನ್ನು ದುರುಪಯೋಗ ಪಡಿಸಿಕೊಂಡಿದೆ. ಭಾರತದಲ್ಲಿ ಷೇರುಗಳ ದಲ್ಲಾಳಿ ಸಂಸ್ಥೆ ಮಾಡಿದ ಅತಿ ದೊಡ್ಡ ದುರುಪಯೋಗ ಇದಾಗಿದೆ.
'ದಲ್ಲಾಳಿಗಳು ಗ್ರಾಹಕರಿಗೆ ಪಾವತಿಸಬೇಕಾದ ಹಣವನ್ನು ಬಾಕಿ ಉಳಿಸಿಕೊಂಡಿರುವುದರ ಕುರಿತು ಸಾಕಷ್ಟು ದೂರುಗಳು ಬಂದಿವೆ. ಗ್ರಾಹಕರ ಹಣವನ್ನು ದಲ್ಲಾಳಿಗಳು ನಿರ್ವಹಿಸಲು ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಸುಧಾರಿಸಲು ನಾವು ಕೆಲಸ ಮಾಡುತ್ತಿದ್ದೇವೆ' ಎಂದು ಸೆಬಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ದಲ್ಲಾಳಿಗಳು ಹಣ ಬಾಕಿ ಉಳಿಸಿಕೊಂಡಿರುವುದು ಹೆಚ್ಚಳವಾಗಿದೆ. ಇದು ಮಾರುಕಟ್ಟೆಗಳನ್ನು ವ್ಯವಸ್ಥಿತ ಅಪಾಯಕ್ಕೆ ಗುರಿಯಾಗಿಸಬಹುದು. ದಲ್ಲಾಳಿಗಳು ವಹಿವಾಟುಗಳನ್ನು ಇತ್ಯರ್ಥಗೊಳಿಸುವುದು ಮತ್ತು ತೆರವುಗೊಳಿಸುವುದನ್ನು ತಡೆಯುವುದು ಸೆಬಿ ಪರಿಗಣಿಸುತ್ತಿರುವ ನೀತಿ ಬದಲಾವಣೆಯಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications