ಭಾರತೀಯ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿಯು ಹೊಸ ರಿವಾರ್ಡ್ ನೀಡುವ ಆಫರ್ ಅನ್ನು ನೀಡಿದೆ. ಡಿಫಾಲ್ಟರ್ಗಳ (ಸಾಲ ಮರುಪಾವತಿ ಮಾಡದವರ) ಬಗ್ಗೆ ಮಾಹಿತಿಯನ್ನು ನೀಡಿದರೆ ಸೆಬಿಯು ಭಾರೀ ರಿವಾರ್ಡ್ ಅನ್ನು ನೀಡಲಿದೆ. ಸೆಕ್ಯೂರಿಟೀಸ್ ಆಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ ಹೊಸ ಯೋಜನೆ ಪ್ರಕಾರವಾಗಿ ಡಿಫಾಲ್ಟರ್ಗಳ ಬಗ್ಗೆ ಮಾಹಿತಿ ನೀಡಿದವರು 20 ಲಕ್ಷ ರೂಪಾಯಿವರೆಗೆ ರಿವಾರ್ಡ್ ಪಡೆಯಬಹುದಾಗಿದೆ.
ಸೆಬಿಯು ತಪ್ಪಿಸಿಕೊಂಡಿರುವ ಡಿಫಾಲ್ಟರ್ಗಳಿಂದ ದಂಡವನ್ನು ಪಡೆಯಬೇಕಾಗಿದೆ. ಇದಕ್ಕಾಗಿ ಸೆಬಿಗೆ ಮಾಹಿತಿ ನೀಡಿವರಿಗೆ ಎರಡು ಹಂತದ ರಿವಾರ್ಡ್ ಅನ್ನು ನೀಡಲಾಗುತ್ತದೆ. ಒಂದು ಮಧ್ಯಂತರ ರಿವಾರ್ಡ್ ಮತ್ತೊಂದು ಅಂತಿಮ ರಿವಾರ್ಡ್ ಆಗಿದೆ. ಡಿಫಾಲ್ಟರ್ಗಳ ಬಗ್ಗೆ ಮಾಹಿತಿ ನೀಡಿದರೆ ಮಧ್ಯಂತರ ರಿವಾರ್ಡ್ ಲಭ್ಯವಾಗಲಿದೆ. ಇದು ಡಿಫಾಲ್ಟರ್ಗಳ ಒಟ್ಟು ಆಸ್ತಿ ಮೌಲ್ಯದ ಶೇಕಡ 2.5ರಷ್ಟು ಅಥವಾ 5 ಲಕ್ಷ ರೂಪಾಯಿ, ಯಾವುದು ಕಡಿಮೆಯೋ ಆ ಮೊತ್ತ ಲಭ್ಯವಾಗಲಿದೆ.

20 ಲಕ್ಷ ರೂಪಾಯಿವರೆಗೆ ರಿವಾರ್ಡ್ ಪಡೆಯಿರಿ
ಕೊನೆಯ ಹಂತದ ರಿವಾರ್ಡ್ನಲ್ಲಿ ಡಿಫಾಲ್ಟರ್ಗಳ ಆಸ್ತಿಯ ಒಟ್ಟು ಮೌಲ್ಯದ ಶೇಕಡ 10ರಷ್ಟು ಅಥವಾ 20 ಲಕ್ಷ ರೂಪಾಯಿ, ಈ ಪೈಕಿ ಯಾವುದು ಕಡಿಮೆಯೋ ಅಷ್ಟು ಮೊತ್ತ ರಿವಾರ್ಡ್ ಆಗಿ ಲಭ್ಯವಾಗಲಿದೆ. ಸೆಬಿ ಹೊಸ ರಿವಾರ್ಡ್ ವ್ಯವಸ್ಥೆಯ ಬಗ್ಗೆ ಮಾರ್ಗಸೂಚಿಯನ್ನು ಜಾರಿ ಮಾಡಿದೆ. ಈ ಮಾರ್ಗಸೂಚಿಯಲ್ಲಿ ಡಿಫಾಲ್ಟರ್ಗಳ ಮಾಹಿತಿ ನೀಡಿದ ಬಳಿಕ ಮೊತ್ತವನ್ನು ಹೇಗೆ ಜಮೆ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಲಾಗಿದೆ.
ಇನ್ನು ಮಾಹಿತಿ ನೀಡಿದವರ ಗುರುತು ಮತ್ತು ಅವರು ಎಷ್ಟು ರಿವಾರ್ಡ್ ಅನ್ನು ಪಡೆದಿದ್ದಾರೆ ಎಂಬ ವಿವರವನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಯಾರ ಸಾಲವನ್ನು ಮರುಪಡೆಯಲು ಅತೀ ಕಷ್ಟವಿದೆಯೋ ಅಂತಹ ಡಿಫಾಲ್ಟರ್ಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿದರೆ ಮಾತ್ರ ಮಾಹಿತಿ ನೀಡಿದವರು ರಿವಾರ್ಡ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಸಂದರ್ಭದಲ್ಲೇ ಸೆಬಿ 515 ಡಿಫಾಲ್ಟರ್ಗಳ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಿದೆ.
ಹೂಡಿಕೆದಾರರ ಸುರಕ್ಷತೆ ಮತ್ತು ಶಿಕ್ಷಣ ಫಂಡ್ನಿಂದ ರಿವಾರ್ಡ್ ಅನ್ನು ಪಾವತಿ ಮಾಡಲಾಗುತ್ತದೆ. ಸೆಬಿಯು ಮಾಹಿತಿದಾರರ ರಿವಾರ್ಡ್ ಸಮಿತಿಯನ್ನು ರಚನೆ ಮಾಡುತ್ತದೆ. ಇದರಲ್ಲಿ ರಿಕವರಿ ಆಂಡ್ ರಿಫಂಡ್ ಡಿಪಾರ್ಟ್ಮೆಂಟ್ನ ಮುಖ್ಯ ನಿರ್ದೇಶಕರು, ನ್ಯಾಯಾಂಗದ ಬಗ್ಗೆ ಮಾಹಿತಿ ತಿಳಿದಿರುವವರು, ಸೆಬಿಯ ಹಲವಾರು ಅಧಿಕಾರಿಗಳು ಇರಲಿದ್ದಾರೆ. ಸೆಬಿಯು ನೂತನ ಮಾರ್ಗಸೂಚಿಯು ಮಾರ್ಚ್ 8, 2023ರಿಂದ ಜಾರಿಗೆ ಬರುತ್ತದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications