ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಮದ್ಯದ ಮೇಲಿನ ನಿರ್ಬಂಧ ತೆರವಾಗಿದ್ದೇ ತಡ ಜನರು ಮುಗಿಬಿದ್ದು, ಕ್ಯೂ ನಿಂತು ಭಾರೀ ಪ್ರಮಾಣದಲ್ಲಿ ಮದ್ಯ ಖರೀದಿಸಿದ್ದಾರೆ. ಕರ್ನಾಟಕದಲ್ಲಿ ಸೋಮವಾರ 45 ಕೋಟಿ ರುಪಾಯಿ ಮೌಲ್ಯದ ಮದ್ಯ ಮಾರಾಟವಾಗಿತ್ತು. ಆದರೆ ಎರಡನೇ ದಿನ ಇದರ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದ್ದು ಮಂಗಳವಾರ (ಮೇ 05)ರಂದು 197 ಕೋಟಿ ರುಪಾಯಿ ಮೌಲ್ಯದ ಲಿಕ್ಕರ್ ಮಾರಾಟವಾಗಿದೆ.
ನಿರ್ಬಂಧ ತೆರವಿನ ಬಳಿಕ ಮದ್ಯ ಮಾರಾಟದಲ್ಲಿ ಭಾರೀ ಏರಿಕೆ
ಒಂದೇ ದಿನದಲ್ಲಿ ರಾಜ್ಯವು 197 ಕೋಟಿ ರುಪಾಯಿಗಳ ಮದ್ಯ ಮಾರಾಟವನ್ನು ಗಳಿಸಿದೆ ಎಂದು ಕರ್ನಾಟಕ ಸರ್ಕಾರ ಮಂಗಳವಾರ ಹೇಳಿದೆ. ಆದರೆ ಈ ಮೊತ್ತವು ಲಾಕ್ಡೌನ್ಗೆ ಮುನ್ನ ರಾಜ್ಯದಲ್ಲಿ ದಿನಕ್ಕೆ ಬರುವ ಸರಾಸರಿ ಆದಾಯಕ್ಕಿಂತ 90 ರಿಂದ 95 ಕೋಟಿ ರುಪಾಯಿಗಳಷ್ಟು ಹೆಚ್ಚಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
4.21 ಲಕ್ಷ ಕೇಸ್ ಲಿಕ್ಕರ್ ಮಾರಾಟ
ಮಂಗಳವಾರ, ಭಾರತದಲ್ಲಿ ತಯಾರಾದ ಲಿಕ್ಕರ್ನ 4.21 ಲಕ್ಷ ಬಾಕ್ಸಡ್ ಕೇಸ್ಗಳ ಮಾರಾಟವನ್ನು ರಾಜ್ಯ ವರದಿ ಮಾಡಿದೆ. ಅಂದರೆ 182 ಕೋಟಿ ರುಪಾಯಿ ಮೌಲ್ಯದ 36.37 ಲಕ್ಷ ಲೀಟರ್ ಐಎಂಎಲ್ ಮಾರಾಟವಾಗಿದೆ. ಇದಲ್ಲದೆ 15 ಕೋಟಿ ರುಪಾಯಿ ಮೌಲ್ಯದ 7.02 ಲಕ್ಷ ಲೀಟರ್ ಬಿಯರ್ ಮಾರಾಟ ಮಾಡಲಾಗಿದೆ.
ಲಿಕ್ಕರ್ ಮಾರಾಟಕ್ಕೆ ನಿಯಮ
ಆಲ್ಕೋಹಾಲ್ ಖರೀದಿಗೆ ನಿರ್ಬಂಧಗಳನ್ನು ಹಾಕಲಾಗಿದೆ. ಚಿಲ್ಲರೆ ಮಾರಾಟ ಮಳಿಗೆಗಳಿಗೆ ಮೂರು ಬಾಟಲಿಗಳ ಆಲ್ಕೋಹಾಲ್ ಮತ್ತು 650 ಎಂಎಲ್ ಆರು ಬಿಯರ್ ಬಾಟಲಿಗಳು ಅಥವಾ ಇದರ ಪ್ರಮಾಣಕ್ಕೆ ಸಮನಾಗಿ ಪ್ರತಿ ವ್ಯಕ್ತಿಗೆ ಸಣ್ಣ ಬಾಟಲಿಗಳನ್ನು ಮಾರಾಟ ಮಾಡಲು ಅವಕಾಶವಿದೆ.
ಜೊತೆಗೆ ಹೆಚ್ಚು ಸೋಂಕು ಕಂಡುಬರದ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ಇದೆ.
ಮುಂದಿನ ದಿನಗಳಲ್ಲಿ ಮಾರಾಟ ಪ್ರಮಾಣ ತಗ್ಗುತ್ತದೆ
ಸೋಮವಾರ ಕರ್ನಾಟಕದಲ್ಲಿ 45 ಕೋಟಿ ರುಪಾಯಿ ಮೌಲ್ಯದ ಲಿಕ್ಕರ್ ಮಾರಾಟವಾಗಿತ್ತು. ಆದರೆ ಇದು ಸರಾಸರಿ ಮಾರಾಟಕ್ಕಿಂತ 50 ಪರ್ಸೆಂಟ್ ಕಡಿಮೆಯಾಗಿದೆ. ರಾಜ್ಯದಲ್ಲಿ ಲಾಕ್ಡೌನ್ಗೂ ಮೊದಲೇ ದಿನಕ್ಕೆ 90 ಕೋಟಿಯಷ್ಟು ಲಿಕ್ಕರ್ ಮಾರಾಟವಾಗುತ್ತಿತ್ತು. ಆದರೆ ಮಂಗಳವಾರ 197 ಕೋಟಿ ರುಪಾಯಿ ಮದ್ಯ ಮಾರಾಟವಾಗಿದ್ದು, ಇದು ಮುಂದಿನ ದಿನಗಳಲ್ಲಿ ಕಡಿಮೆಯಾಗುತ್ತದೆ ಎಂದು ಅಬಕಾರಿ ಇಲಾಖೆಯ ಐಎಂಎಲ್ ಹೆಚ್ಚುವರಿ ಆಯುಕ್ತ ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications