ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕಿನ ಗ್ರಾಹಕರಿಗೆ ಸಿಹಿ ಸುದ್ದಿ !!
ಕೋ ಆಪರೇಟಿವ್ ಸೊಸೈಟಿ , ಕೋ ಆಪರೇಟಿವ್ ಬ್ಯಾಂಕ್ ಗಳು ಮುಖ್ಯವಾಹಿನಿಯಲ್ಲಿ ಸಹಾಯ ಸಿಗದ ಬಹಳಷ್ಟು ಜನರಿಗೆ ಆಸರೆಯಾಗಿದ್ದವು . ಅವುಗಳ ಉಗಮದ ಹಿಂದಿನ ಆಶಯವೂ ಕೂಡ ಅದೇ ! . ಎಲ್ಲರಿಂದ ಎಲ್ಲರಿಗಾಗಿ ಎನ್ನುವ ತತ್ವ ಇವುಗಳದ್ದು . ಅರ್ಥ ಯಾವುದೇ ಇಂತಹ ಸಂಸ್ಥೆಯಲ್ಲಿ ಸದ್ಯಸರಾದರೆ ಮತ್ತು ಅಲ್ಲಿನ ಉದ್ದೇಶಕ್ಕೆ ಬದ್ದವಾಗಿದ್ದರೆ ಅಂತಹ ಎಲ್ಲಾ ಸದಸ್ಯರ ಒಳಿತಿಗಾಗಿ ಶ್ರಮಿಸುವುದು ಮತ್ತು ಮೂಲ ಉದ್ದೇಶ 'ಲಾಭ' ಕ್ಕಾಗಿ ಅಲ್ಲದೆ ಸಮುದಾಯದ ಒಳಿತಿಗಾಗಿ ದುಡಿಯುವುದು ಈ ಸಂಸ್ಥೆಗಳ ಪ್ರಮುಖ ಲಕ್ಷಣ .
ಬ್ಯಾಂಕ್ ಆಫ್ ಇಂಡಿಯಾ ಎಫ್ಡಿಯ ಮೇಲಿನ ಬಡ್ಡಿದರ ಪರಿಷ್ಕರಣೆ: ಪ್ರಸ್ತುತ ದರವೆಷ್ಟು?
ಇವತ್ತು ಆರ್ಥಿಕವಾಗಿ ಒಂದಷ್ಟು ಸವಾಲಿನ ದಿನಗಳನ್ನ ಭಾರತೀಯ ವಿತ್ತ ಜಗತ್ತು ಮತ್ತು ಜಗತ್ತಿನ ಇತರ ದೇಶಗಳು ಕೂಡ ಕಾಣುತ್ತಿವೆ . ಎಲ್ಲಕ್ಕೂ ಮುಖ್ಯವಾಗಿ ಹಣದ ಹರಿವು ಕಡಿಮೆಯಾಗಿದೆ . ಭಾರತದಲ್ಲಿ ಬಹುಮುಖ್ಯವಾಗಿ ಮುಖ್ಯವಾಹಿನಿ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ತಮ್ಮ ಸೇವೆಯನ್ನ ಹಳ್ಳಿ ಪ್ರದೇಶಗಳಲ್ಲಿ ಒದಗಿಸಲು ವಿಫಲವಾಗಿದ್ದಾಗ ಇಂತಹ ಸೊಸೈಟಿಗಳು ವರದಾನದಂತೆ ಕಾರ್ಯ ನಿರ್ವಹಿಸಿವೆ. ಅವುಗಳು ಅದರಲ್ಲಿ ಬಹಳಷ್ಟು ಯಶಸ್ವೀ ಕೂಡ ಆಗಿದ್ದವು . ಇತ್ತೀಚಿಗೆ ಮಹಾರಾಷ್ಟ್ರ ಮೂಲದ ಪಿಎಂಸಿ (ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ) ಕುಸಿತ ಮತ್ತು ಕರ್ನಾಟಕದ ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ನ ಕುಸಿತ ಕೋ ಆಪರೇಟಿವ್ ಬ್ಯಾಂಕ್ಗಳ ಮೇಲಿನ ನಂಬಿಕೆಯನ್ನ ಕಡಿಮೆ ಮಾಡಿವೆ
ಪಿಎಂಸಿ ಬ್ಯಾಂಕ್ 36 ವರ್ಷ ಹಳೆಯದು . 137 ಶಾಖೆಗಳನ್ನ ಹೊಂದಿದೆ . ಕರ್ನಾಟಕದಲ್ಲೂ ಈ ಬ್ಯಾಂಕಿನ 15 ಶಾಖೆಗಳಿವೆ . ಹೆಸರಿಗೆ ಇದು ಮಹಾರಾಷ್ಟ್ರ ಮತ್ತು ಪಂಜಾಬ್ ಕೋ ಆಪರೇಟಿವ್ ಬ್ಯಾಂಕ್ , ಆದರೆ ಇದು ಆರು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ . ಹಾಗೆಯೇ ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಕೂಡ 20 ವರ್ಷ ಹಳೆಯದು . 1566 ಕೋಟಿ ರೂಪಾಯಿ ಠೇವಣಿ ಹೊಂದಿದೆ . ಇದರ ಅರ್ಥ ಕುಸಿದಿರುವುವು ಅತಿ ಸಣ್ಣ ಅಥವಾ ನಿನ್ನೆ ಮೊನ್ನೆ ಸ್ವಹಿತಾಸಕ್ತಿಗೆ ಹುಟ್ಟುಹಾಕಿದ ಸಂಸ್ಥೆಗಳಲ್ಲ . ಅವು ಸೊಸೈಟಿಗಳ ಆಶಯಕ್ಕೆ ತಕ್ಕಂತೆ ಸೃಷ್ಟಿಯಾದ ಸಂಸ್ಥೆಗಳು . ಆದರೂ ಇಲ್ಲಿ ಕೂಡ ಅವ್ಯವಹಾರ ನಡೆದದ್ದು ಮತ್ತು ಗ್ರಾಹಕರ ಠೇವಣಿಯನ್ನ ಆರ್ಬಿಐ ತನ್ನ ನಿಗಾದಲ್ಲಿ ಇಟ್ಟು ಕೊಂಡದ್ದು ಮತ್ತು ಅದನ್ನ ಗ್ರಾಹಕ ಮರಳಿ ಪಡೆಯಲು ಸಾಧ್ಯವಾಗದೆ ಇದ್ದದ್ದು ತಿಳಿದ ವಿಷಯ, ಇದೀಗ ಇಂತಹ ಠೇವಣಿ ಇಟ್ಟಿದ್ದ ಗ್ರಾಹಕರಿಗೆ ಸಿಹಿ ಸುದ್ದಿ .
ಚಿನ್ನದ ಬೆಲೆ ಇಳಿಕೆ: ಸೆ. 13ರಂದು ಯಾವ ನಗರದಲ್ಲಿ ಎಷ್ಟಿದೆ ತಿಳಿದುಕೊಳ್ಳಿ..
ನವೆಂಬರ್ 2021 ರ ಅಂತ್ಯದ ವೇಳೆಗೆ ಗುರು ರಾಘವೇಂದ್ರ ಮತ್ತು ಪಿಎಂಸಿ ಬ್ಯಾಂಕಿನ ಒಟ್ಟು ಹತ್ತು ಸಾವಿರ ಕೋಟಿ ರೂಪಾಯಿ ಹಣವನ್ನ ಹಿಂತಿರುಗಿಸುವಂತೆ ಡೆಪಾಸಿಟ್ ಇನ್ಶೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಶನ್ ಆದೇಶವನ್ನ ನೀಡಿದೆ. ಈ ಆದೇಶದ ಮೇರೆಗೆ ಗ್ರಾಹಕರಿಗೆ ಹಣ ಮರಳಿಸಿಗುವುದು ಗ್ಯಾರಂಟಿಯಾಗಿದೆ. ಆದರೆ ಈ ಹತ್ತು ಸಾವಿರದಲ್ಲಿ ಯಾವ ಖಾತೆ ಅಥವಾ ಯಾವೆಲ್ಲ ಗ್ರಾಹಕರು ಸೇರಿರುತ್ತಾರೆ ಎನ್ನುವುದರ ಪಟ್ಟಿಯನ್ನ ತಯಾರು ಮಾಡುವುದು ಆಯಾ ಬ್ಯಾಂಕಿನ ಕೆಲಸವಾಗಿದೆ. ಪ್ರಥಮ ಐದು ಲಕ್ಷ ಹಣವಂತೂ ಗ್ಯಾರಂಟಿ ಇರುವುದರಿಂದ ಸಿಗುತ್ತದೆ. ಹೆಚ್ಚಿನ ಮೊತ್ತ ಇಟ್ಟವರು ಇನ್ನಷ್ಟು ಸಮಯ ಕಾಯಬೇಕಾಗಬಹುದು.